expr:class='"loading" + data:blog.mobileClass'>

ಶುಕ್ರವಾರ, ಜೂನ್ 11, 2021

ಆಧುನಿಕ ಕ್ರುಷಿಯಲ್ಲಿ ಪಶುಗಳ ಅವನತಿ.

ಆಗಿನ್ನು 70 -80 ರ ದಶಕದಲ್ಲಿ ಭಾರತದ ಕ್ರುಷಿಯಲ್ಲಿ ಯಂತ್ರಗಳ ಬಳಕೆ ಅಷ್ಟಾಗಿ ಚಲಾವಣೆ ಇರಲಿಲ್ಲ .ಗ್ರಾಮೀಣ ಭಾಗದ ಜನ ಕ್ರುಷಿಯಲ್ಲಿ ಹೆಚ್ಚಾಗಿ ಪಶುಗಳನ್ನೆ ಅವಲಂಬಿಸಿದ್ದ ಕಾಲ ಅದು.ಆಗ ಜನಸಂಖ್ಯೆಗಿಂತ ಧನಗಳ ಸಂಖ್ಯೆಯೆ ಹೆಚ್ಚಾಗಿದ್ದ ಕಾಲವದು ಗ್ರಾಮಿಣಭಾಗದ ಪ್ರತಿ ಮನೆ ಮನೆಯಲ್ಲೂ ಅವರ ಭೂ ಹಿಡುವಳಿ ಅನುಸಾರವಾಗಿ 5 ರಿಂದ 100 ರ ವರೆಗೂ ಪ್ರತಿ ಮನೆಯಲ್ಲೂ ಧನ ಕರುಗಳು ಯಥೇಚ್ಛವಾಗಿ ಇರುತ್ತಿದ್ದವು.ಕ್ರುಷಿ ಜಾಗತೀಕರಣಕ್ಕೂ ಮುಂಚೆ ಕ್ರುಷಿಯಲ್ಲಿ ಪಶು ಗೊಬ್ಬರ.ಸಾವಯವ ಗೊಬ್ಬರಗಳ ಬಳಕೆ ಯಥೇಚ್ಛವಾಗಿ ಬಳಸುತ್ತಿದ್ದರು.ಆಗ ಭೂಮಿಯೂ ಫಲತ್ತಾಗಿರುತ್ತಿತ್ತು ಆಹಾರ ಧಾನ್ಯಗಳು ಸಂಪೂರ್ಣ ಪೋಷಕಾಂಶಯುಕ್ತ ಆಗಿರುತ್ತಿತ್ತು.ಅದನ್ನು ಸೇವಿಸಿದ ಮನುಷ್ಯನ ಆರೋಗ್ಯವು ಚೆನ್ನಾಗಿರುತ್ತಿತ್ತು.
ಕಾಲ ಕಳೆದಂತೆ ಜನಸಂಖ್ಯೆ ವ್ರುದ್ದಿಯಾದಂತೆ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿತು.ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದನೆ ಆಗುತ್ತಿರಲಿಲ್ಲ.ಆಹಾರ ಭದ್ರತೆಗೆ ವಿಧೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು.ಸಮಯಕ್ಕೆ ಸರಿಯಾಗಿ ಆಹಾರ ಧಾನ್ಯಗಳು ಆಮದಾಗದ ಕಾರಣ ಜನರಿಗೆ ಆಹಾರದ ಕೊರತೆ  ಉಂಟಾಗುತ್ತಿತ್ತು.ಇವೆಲ್ಲಕ್ಕು ಪರಿಹಾರ ನೀಡಿದ್ದು ದುಡಿಯುವ ಜನರಿಗೆ ವೇಗ ಮತ್ತು ಶಕ್ತಿಯನ್ನು ತುಂಬಿದ್ದೆ ಯಾಂತ್ರೀಕರಣ ಕ್ರುಷಿ ಮತ್ತು ಕ್ರುಷಿ ಜಾಗತೀಕರಣ.
ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದ ಕಾರಣ ಪಶುಗಳ ಬೇಸಾಯದಿಂದ ಗರಿಷ್ಠ ಮಟ್ಟದ ಬಿತ್ತನೆ.ಉತ್ಪಾದನೆ ಸಾದ್ಯವಾಗುತ್ತಿರಲಿಲ್ಲ ಇದೆಲ್ಲದಕ್ಕೂ ಪರ್ಯಾಯವಾಗಿ ಬಂದ ಟ್ರಾಕ್ಟರ್.ಟಿಲ್ಲರ್.ಹಾಗೂ ಚಿಕ್ಕ ಚಿಕ್ಕ ಯಂತ್ರಗಳು ಕ್ರುಷಿಯ ವೇಗದ ಜೊತೆ ಉತ್ಪಾದನೆಯನ್ನು ಹೆಚ್ಚಿಸಿದವು 
ಕ್ರುಷಿಯಲ್ಲಿ ಯಂತ್ರಗಳ ಆಗಮನದ ನಂತರ ದುಡಿಯುವ ಪಶುಗಳು ರೈತನಿಗೆ ಅನುಪಯುಕ್ತವಾಗಿ ಕಾಣಲಾರಂಬಿಸಿದವು.ಜಾಗತಿಕರಣದ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ರೈತರಿಗೆ ರಾಸಾಯನಿಕ ಗೊಬ್ಬರಗಳ ಪರಿಚಯ ಮಾಡಿದ್ದರ ಪರಿಣಾಮ ರೈತರು ಅದರಿಂದ ಬರುವ ಅಧಿಕ ಉತ್ಪಾದನೆಯ ಆಸೆಗೆ ಬಿದ್ದು ಪಶು ಗೊಬ್ಬರ.ಸಾವಯವ ಗೊಬ್ಬರ ತೊರೆದು ಬಿಟ್ಟರು.ಇವೆಲ್ಲದರ ಪರಿಣಾಮ ದುಡಿಯುವ ಎತ್ತುಗಳು ರೈತನಿಗೆ ಅನುಪಯುಕ್ತವಾಗಿ ಕಾಣಲಾರಂಬಿಸಿದವು ಜೊತೆಗೆ ನಿರ್ವಹಣೆಯೂ ಹೊರೆ ಎನ್ನಿಸಲಾರಂಬಿಸಿತು.ಎತ್ತು ದನ ಕರುಗಳನ್ನ ಮಾರಿದ ರೈತರು ಇಂದು ಸಂಪೂರ್ಣ ಯಾಂತ್ರಿಕ ಕ್ರುಷಿಯ ಮೊರೆ ಹೋಗಿದ್ದಾರೆ ಪಶುಗಳ ಸಂತತಿಗಳು ಅವನತಿಯಾಗಿ ಹೋಗಿವೆ.ದುಡಿಯುವ ಎತ್ತುಗಳ ಜಾಗದಲ್ಲಿ ವಿಧೇಶಿಯ ಅಧಿಕ ಹಾಲು ಹಿಂಡುವ ತಳಿಗಳು ಬಂದು ಕುಳಿತಿವೆ.
ಅಧಿಕ ಉತ್ಪಾದನೆ  ಹಾಗು ಹಣದಾಸೆಗೆ ಬಿದ್ದ ರೈತರಿಂದು ತಮಗೆ ಅರಿವಿಲ್ಲದೆ ಬಹುರಾಷ್ಟ್ರೀಯ ಕಂಪೆನಿಗಳ ಕಪಿ ಮುಷ್ಟಿಗೆ ಸಿಲುಕಿ ಇಂದು ತಮ್ಮ ಕ್ರುಷಿಗೆ ಮೂಲವಸ್ತುಗಳಾದ ಬೀಜ.ಗೊಬ್ಬರ.ಓಷದಿ.ಯಂತ್ರ.ಸಲಕರಣೆ ಎಲ್ಲದಕ್ಕೂ ಬಹುರಾಷ್ಟ್ರೀಯ ಕಂಪೆನಿ ಉತ್ಪನ್ನಗಳನ್ನೆ ಅವಲಂಬಿಸಿದ್ದರಿಂದ ಕ್ರುಷಿಯ ಮೂಲ ಬಂಡವಾಳ ಹೆಚ್ಚಾಗಿ ಲಾಭಾಂಶ ಕಡಿಮೆ ಮಾಡಿಕೊಳ್ಳುವದರ ಜೊತೆಗೆ ಮೂಲ ಕ್ರುಷಿಯ ತಂತ್ರಗಾರಿಕೆ.ತಳಿಗಳು.ಎಲ್ಲವನ್ನು ಕಳೆದು ಕೊಳ್ಳುವದರ ಜೊತೆಗೆ ಕ್ರುಷಿ ಅವನತಿಯತ್ತ ಸಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...