expr:class='"loading" + data:blog.mobileClass'>
ಕ್ರುಷಿ ಸುದ್ದಿ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕ್ರುಷಿ ಸುದ್ದಿ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 11, 2021

ರೈತ ವಿರೋದಿ ವಿದ್ಯುತ್ ತಿದ್ದುಪಡಿ ಮಸೂದೆ 2021

  ಇತ್ತೀಚೆಗೆ ಕೆಂದ್ರ ಸರ್ಕಾರ ಅವಿರೋದವಾಗಿ ರೈತ ಮಸೂದೆ ಮಂಡನೆ ಮಾಡಿ ರೈತರ ಕೆಂಗಣ್ಣಿಗೆ ಗುರಿಯಾಗಿ ಬಾರಿ ಪ್ರತಿಭಟನೆ ನಂತರ ಸು ಕೋರ್ಟ್ ಮದ್ಯ ಪ್ರವೇಶದಿಂದ ತಾತ್ಕಾಲಿಕವಾಗಿ ಕ್ರುಷಿ ಮಸೂದೆಯನ್ನು ತಡೆ ಹಿಡಿಯಲು ಆದೇಶಿಸಿದ ನಂತರ ಕೆಂದ್ರ ಸರ್ಕಾರ ಮತ್ತೊಂದು ರೈತ ವಿರೋದಿ ವಿದ್ಯುತ್ ಮಸೂದೆ ಮಂಡನೆ ಮಾಡಲು ನಿರ್ದರಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಕೆ ಮಾಡಿ ಶುಲ್ಕ ವಸೂಲಿ ಮಾಡುವುದು, ಬಳಿಕ ನಿಧಾನವಾಗಿ ಸರ್ಕಾರದಿಂದ ರೈತರಿಗೆ ಮರುಪಾವತಿ ಮಾಡುವುದು ಸೇರಿ ಹಲವು ವಿವಾದಿತ ನಿಯಮವನ್ನು ಒಳಗೊಂಡ ‘ವಿದ್ಯುತ್‌ ತಿದ್ದುಪಡಿ ಮಸೂದೆ-2021’ ವಿರುದ್ಧ ಬೀದಿಗಿಳಿಯಲು ರೈತ ಸಂಘಟನೆಗಳು ನಿರ್ದರಿಸಿವೆ.
 ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ರೈತ ವಿರೋದಿ ವಿದ್ಯುತ್‌ ಮಸೂದೆ-2021 ಪ್ರಕಾರ, ಕೃಷಿ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಮೀಟರ್‌ ಅಳವಡಿಕೆಯಾಗಲಿದೆ. ಅಷ್ಟೇ ಅಲ್ಲ, ಈವರೆಗೆ 10 ಎಚ್‌ಪಿ ಪಂಪ್‌ಸೆಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿದ್ದ ರೈತರೂ ಸೇರಿದಂತೆ ಎಲ್ಲರೂ ವಿದ್ಯುತ್‌ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಯ ನಂತರ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು.
ರೈತ ವಿರೋದಿ ವಿದ್ಯುತ್  ಮಸೂದೆಯ ಕರಡು ನಿಯಮಗಳಲ್ಲಿರುವ ಈ ಪ್ರಸ್ತಾಪವು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಸೂದೆ ಜಾರಿಯಾದರೆ ವಿದ್ಯುತ್‌ ಸರಬರಾಜು ನಿಗಮಗಳು ಖಾಸಗಿ ಕಂಪನಿಗಳ ಕೈ ಸೇರಲಿವೆ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಯಾದರೆ ಖಾಸಗಿ ಕಂಪನಿಗಳು ರೈತರ ಶೋಷಣೆ ಮಾಡಲಿವೆ. ಇದರಿಂದ ಕೃಷಿ ಚಟುವಟಿಕೆಗಳನ್ನೇ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ವಿದ್ಯುತ್‌ ಪೂರೈಕೆ ಖಾಸಗೀಕರಣಕ್ಕೆ ಅಂಕಿತ ದೊರೆತರೆ ಬಡ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್‌, ಬೀದಿ ದೀಪ, ನೀರು ಸರಬರಾಜಿಗೆ ನೇರವಾಗಿ ನೀಡುತ್ತಿರುವ ಉಚಿತ ವಿದ್ಯುತ್‌ ಬಂದ್‌ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್‌ ಶುಲ್ಕ ಪಾವತಿಸಿ ಬಳಿಕ ಸರ್ಕಾರ ಸಬ್ಸಿಡಿ ಕಾರ್ಯಕ್ರಮದಡಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ. ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಿದರಂತೂ ಕೃಷಿಕರೂ ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ ಬಳಕೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಎದುರಾಗಲಿದೆ.
ರೈತ ವಿರೋದಿಯಾದ ವಿದ್ಯುತ್ ಮಸೂದೆ 2021 ರ ವಿರುದ್ದ ಹೋರಾಟಕ್ಕೆ ರೈತ ಸಂಘಗಳು ನಿರ್ಧರಿಸಿವೆ ಇವೆಲ್ಲಾ ನಿಯಮಗಳಿಂದಾಗಿ ಮಸೂದೆಯು ಕೃಷಿಕರಿಗೆ ಮರಣಶಾಸನ ವಾಗಲಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹೋರಾಟ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿವೆ. ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಆಗಸ್ಟ್‌ 10 ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿವೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟದ ಜತೆ ಈಗಾಗಲೇ ಮಾತುಕತೆ ನಡೆಸಿದೆ.ವಿದ್ಯುತ್   ಖಾಸಗೀಕರಣ ಪ್ರಸ್ತಾವನೆಯಿಂದ ಕೇಂದ್ರವು ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್‌, ಹಿಂದೆ ಎಸ್‌.ಎಂ. ಕೃಷ್ಣ ಅವಧಿಯಲ್ಲೂ ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಗೆ ಸರ್ಕಾರ ಮುಂದಾಗಿತ್ತು. ಮೀಟರ್‌ ಅಳವಡಿಕೆ ಮಾಡಿ ಖಾಸಗಿಯವರಿಗೆ ಹಸ್ತಾಂತರಿಸಲು ಯತ್ನಿಸಿದ್ದರು. ಆಗ ರಾಜ್ಯಾದ್ಯಂತ ಹೋರಾಟ ಸಂಘಟಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ರೈತರು ಮಾಡಿದ್ದರು ಇದೀಗ ಕೇಂದ್ರ ಸರ್ಕಾರವು 2019ರಿಂದಲೂ ವಿದ್ಯುತ್‌ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಒಂದೂವರೆ ವರ್ಷಗಳ ಕಾಲ ರೈತರಿಗೆ ಸಂಬಂಧಿಸಿದ ಯಾವುದೇ ಕಾಯಿದೆ ತಿದ್ದುಪಡಿ ತರದಂತೆ ತಡೆಯಾಜ್ಞೆ ನೀಡಿದೆ. ಇದೀಗ ಕೇಂದ್ರವು ನ್ಯಾಯಾಲಯದ ಗಡುವು ಮುಗಿದ ತಕ್ಷಣವೇ ರೈತರ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರವು 2020ರ ವಿದ್ಯುತ್‌ ಕಾಯಿದೆಯನ್ನು ಅನುಷ್ಠಾನಗೊಳಿಸಲು 2021ರ ವಿದ್ಯುತ್‌ ತಿದ್ದುಪಡಿ ಕಾಯಿದೆ ಮಂಡಿಸಲು ಸಿದ್ಧವಾಗಿದೆ. ಈ ಬಗ್ಗೆ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಈ ಕುರಿತು ವಿದ್ಯುತ್‌ ಪ್ರಸರಣ ನಿಗಮಗಳ ಸಂಘಗಳೂ ನಮ್ಮನ್ನು ಸಂಪರ್ಕಿಸಿವೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
.

ಶನಿವಾರ, ಜೂನ್ 12, 2021

ರೈತರ ಆರ್ಥಿಕತೆ ಮತ್ತು ಕ್ರುಷಿ.

ಎರಡನೆ ಹಸಿರು ಕ್ರಾಂತಿಗೂ ಮೊದಲು ರೈತರು ಕ್ರುಷಿ ಜೀವನ ನೆಮ್ಮದಿಯಾಗಿತ್ತು ಕಾರಣ ಆಗ ಕ್ರುಷಿಯನ್ನ ರೈತರು ಕೇವಲ ತಮ್ಮ ಅವಶ್ಯಕತೆಗಾಗಿ ಮಾತ್ರ ಮಾಡುತ್ತಿದ್ದರು ಆಗ ಅವಿಭಕ್ತ ಕುಟುಂಬಗಳೆ ಹೆಚ್ಚು ಮನೆ ತುಂಬಾ ಜನ.ದನ.ಕರು.ಎಲ್ಲಾ ಕುಟುಂಬ ಸದಸ್ಯರು ಕ್ರುಷಿ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿದ್ದರು ತಮ್ಮ ಜೀವನಾವಶ್ಯಕ ದಾನ್ಯಗಳನ್ನ ತಾವೆ ಬೆಳೆದು ಕೊಳ್ಳುತ್ತಿದ್ದರು.ಅವರ ಅವಶ್ಯಕತೆಗಿಂತ ಹೆಚ್ಚಾಗಿ ಉಳಿದರೆ ಮಾತ್ರ ಮಾರಾಟ ಮಾಡುತ್ತಿದ್ದರು.ಅವರು ತಮ್ಮ ಕ್ರುಷಿಗೆ ಬೇಕಾದ ನಾಟಿ ತಳಿ ಬೀಜಗಳನ್ನ ತಾವೆ ಸಂಗ್ರಹಿಸಿ ಇಡುತ್ತಿದ್ದರು.ಮನೆಯ ದನ.ಕರುಗಳ ಸೆಗಣಿ ಗೊಬ್ಬರವನ್ನೆ ಬಳಸುತ್ತಿದ್ದರು.ಹಾಗಾಗಿ ಕ್ರುಷಿಗೆ ಮೂಲ ಬಂಡವಾಳವೆಂದು ಅವರು ಎಂದೂ ಸಾಲ ಮಾಡುತ್ತಿರಲಿಲ್ಲ.ಹಾಗೂ ಅವರ ಜೀವನಾವಶ್ಯಕತೆಗಳು ಕಡಿಮೆ ಇದ್ದವು.
ಕಾಲಾನಂತರ ಎರಡನೇ ಹಸಿರು ಕ್ರಾಂತಿಯ ನಂತರ ದೊಡ್ಡ ದೊಡ್ಡ ವಾಣಿಜ್ಯ ಕಂಪೆನಿಗಳು ರೈತನಿಗೆ ಅಬಿವ್ರುದ್ದಿ ತಳಿಗಳು.ರಾಸಾಯನಿಕ ಗೊಬ್ಬರಗಳು.ಓಷದಗಳು.ಯಂತ್ರಗಳನ್ನು ಪರಿಚಯಿಸುವದರ ಜೊತೆಗೆ ರೈತನಲ್ಲಿ ಅಧಿಕ ಬೆಳೆಯಿಂದ ಅಧಿಕ ಹಣಗಳಿಸಬಹುದೆಂಬ ಆಮೀಷಕ್ಕೆ ಕೆಡವಿದವು.ಕಾಲ ಮುಂದುವರಿದಂತೆ ರೈತನ ಮೂಲ ಜೀವನಾವಶ್ಯಕತೆಗಳು ಹೆಚ್ಚಾಗಿದ್ದವು.ಮೂಲ ಕ್ರುಷಿ ಪದ್ದತಿ ನಾಟಿ ತಳಿಗಳಿಂದ ಬರುವ ಇಳುವರಿಗಳಿಂದ ಅವನ ಜೀವನ ನಿರ್ವಹಣೆ ಕಷ್ಟವಾಗಿತ್ತು.ಹಾಗಾಗಿ ರೈತರು ಬಹು ಬೇಗ ಕಂಪೆನಿಗಳ ಅಧಿಕ ಇಳುವರಿ ತಳಿಗಳಿಗೆ ರೈತರು ಮಾರು ಹೋದರು.ಕಂಪೆನಿಗಳ ಉತ್ಪನ್ನಗಳ ಖರೀದಿ ಇಂದ ಕ್ರುಷಿಯ ಮೂಲ ಬಂಡವಾಳ ಹೆಚ್ಚಾಗುತ್ತಾ ಹೋಯಿತು.ಆ ಬಂಡವಾಳವನ್ನು ಒದಗಿಸಲು ಹತ್ತಾರು ಸರಕಾರಿ.ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಹುಟ್ಟಿಕೊಂಡವು.
ಸರ್ಕಾರ  ಮತ್ತು ಖಾಸಗಿ ಭ್ಯಾಂಕುಗಳ ಸಾಲ ಪಡೆದ ರೈತ ಅದನ್ನು ಬಹುರಾಷ್ಟ್ರೀಯ ಕಂಪೆನಿಗಳ ಬೀಜ.ಗೊಬ್ಬರ.ಓಷದ.ಯಂತ್ರ.ಸಲಕರಣೆಗಳ ಖರೀದಿಸುವದರ ಜೊತೆಗೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಬೆಳೆಸಿದನೆ ಹೊರತು ರೈತ ಮಾತ್ರ ಆರ್ಥಿಕವಾಗಿ ಬೆಳೆಯಲೆ ಇಲ್ಲ.ರೈತನ ಆದಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಪಾತ್ರವಹಿಸಲಿಲ್ಲ ಬದಲಾಗಿ ಸರ್ಕಾರಗಳು ಆ ಬಹುರಾಷ್ಟ್ರೀಯ ಕಂಪೆನಿಗಳ ಬೆಳೆವಣಿಗೆಗೆ  ಉತ್ತೇಜನ ನೀಡಿದವು.
ಇನ್ನೊಂದು ಕಡೆ  ಕಾಲ ಕಾಲಕ್ಕೆ ಸರಿಯಾಗಿ ಆಗದ ಮಳೆ.ಒಂದು ಕಡೆ ನೆರೆ.ಇನ್ನೊಂದು ಕಡೆ ಬರ.ನೆರೆ ಬರ ಎಲ್ಲವನ್ನು ಎದುರಿಸಿ ಯಶಸ್ವಿ ಬೆಳೆ ಬೆಳೆದರು ದಲ್ಲಾಳಿಗಳ ಕಾಟ ಬೆಲೆ ಕುಸಿತ.ರೈತ ತನ್ನ ಜೀವನಾವಶ್ಯಕತೆಯ ಆರ್ಥಿಕ ಭದ್ರತೆಗೆಂದು  ಕಡಿಮೆ ಬಂಡವಾಳದ ಸಾಂಪ್ರಧಾಯಿಕ ಕ್ರುಷಿ ಇಂದ ವಿಮುಕನಾಗಿ ಹೆಚ್ಚು ಬಂಡವಾಳ ಬೇಡುವ  ಆಧುನಿಕ ಕ್ರುಷಿಯೆಡೆಗೆ ಬಂದು ಇತ್ತಾ ಆರ್ಥಿಕ ಭದ್ರತೆಯೂ ಇಲ್ಲದೆ  ಪುನಃ ಸಾಂಪ್ರದಾಯಿಕ ಕ್ರುಷಿಯೆಡೆಗೆ ಮರಳಲೂ ಆಗದೆ.ತನ್ನ ಜೀವಮಾನದ ದುಡಿಮೆಯೆಲ್ಲಾ ಬಹುರಾಷ್ಟ್ರೀಯ ಕಂಪೆನಿಗಳಿಗಾಗಿ ದುಡಿಯುವಂತಾಗಿರುವದು ದೊಡ್ಡ ವಿಪರ್ಯಾಸ.
ಮೂಲ ಕ್ರುಷಿ ಪದ್ದತಿಯನ್ನೆ ತಿಳಿಯದ ಇಂದಿನ ಯುವ ಕ್ರುಷಿಕರು ಅಧಿಕ ಸಂಪಾಧನೆ ಆಸೆಯಿಂದ ವಾಣಿಜ್ಯ ಬೆಳೆಗಳನ್ನ ಬೆಳೆಯುವ ತವಕದಲ್ಲಿ ಕಂಪೆನಿ ರಾಸಾಯನಿಕ ಗೊಬ್ಬರ.ಓಷದಗಳನ್ನ ಬಳಸುವದರ ಜೊತೆ ಹೆಚ್ಚು ಹೆಚ್ಚು ಸಾಲಗಾರರಾಗಿ ಅತ್ತ ಬೆಳೆಯೂ ಇಲ್ಲ ಇತ್ತ ಲಾಭವೂ ಇಲ್ಲ ಎನ್ನುವಂತಾಗಿ ಕ್ರುಷಿಯಿಂದ ವಿಮುಕರಾಗುತ್ತಿದ್ದಾರೆ.

ಶುಕ್ರವಾರ, ಜೂನ್ 11, 2021

ಆಧುನಿಕ ಕ್ರುಷಿಯಲ್ಲಿ ಪಶುಗಳ ಅವನತಿ.

ಆಗಿನ್ನು 70 -80 ರ ದಶಕದಲ್ಲಿ ಭಾರತದ ಕ್ರುಷಿಯಲ್ಲಿ ಯಂತ್ರಗಳ ಬಳಕೆ ಅಷ್ಟಾಗಿ ಚಲಾವಣೆ ಇರಲಿಲ್ಲ .ಗ್ರಾಮೀಣ ಭಾಗದ ಜನ ಕ್ರುಷಿಯಲ್ಲಿ ಹೆಚ್ಚಾಗಿ ಪಶುಗಳನ್ನೆ ಅವಲಂಬಿಸಿದ್ದ ಕಾಲ ಅದು.ಆಗ ಜನಸಂಖ್ಯೆಗಿಂತ ಧನಗಳ ಸಂಖ್ಯೆಯೆ ಹೆಚ್ಚಾಗಿದ್ದ ಕಾಲವದು ಗ್ರಾಮಿಣಭಾಗದ ಪ್ರತಿ ಮನೆ ಮನೆಯಲ್ಲೂ ಅವರ ಭೂ ಹಿಡುವಳಿ ಅನುಸಾರವಾಗಿ 5 ರಿಂದ 100 ರ ವರೆಗೂ ಪ್ರತಿ ಮನೆಯಲ್ಲೂ ಧನ ಕರುಗಳು ಯಥೇಚ್ಛವಾಗಿ ಇರುತ್ತಿದ್ದವು.ಕ್ರುಷಿ ಜಾಗತೀಕರಣಕ್ಕೂ ಮುಂಚೆ ಕ್ರುಷಿಯಲ್ಲಿ ಪಶು ಗೊಬ್ಬರ.ಸಾವಯವ ಗೊಬ್ಬರಗಳ ಬಳಕೆ ಯಥೇಚ್ಛವಾಗಿ ಬಳಸುತ್ತಿದ್ದರು.ಆಗ ಭೂಮಿಯೂ ಫಲತ್ತಾಗಿರುತ್ತಿತ್ತು ಆಹಾರ ಧಾನ್ಯಗಳು ಸಂಪೂರ್ಣ ಪೋಷಕಾಂಶಯುಕ್ತ ಆಗಿರುತ್ತಿತ್ತು.ಅದನ್ನು ಸೇವಿಸಿದ ಮನುಷ್ಯನ ಆರೋಗ್ಯವು ಚೆನ್ನಾಗಿರುತ್ತಿತ್ತು.
ಕಾಲ ಕಳೆದಂತೆ ಜನಸಂಖ್ಯೆ ವ್ರುದ್ದಿಯಾದಂತೆ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿತು.ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದನೆ ಆಗುತ್ತಿರಲಿಲ್ಲ.ಆಹಾರ ಭದ್ರತೆಗೆ ವಿಧೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು.ಸಮಯಕ್ಕೆ ಸರಿಯಾಗಿ ಆಹಾರ ಧಾನ್ಯಗಳು ಆಮದಾಗದ ಕಾರಣ ಜನರಿಗೆ ಆಹಾರದ ಕೊರತೆ  ಉಂಟಾಗುತ್ತಿತ್ತು.ಇವೆಲ್ಲಕ್ಕು ಪರಿಹಾರ ನೀಡಿದ್ದು ದುಡಿಯುವ ಜನರಿಗೆ ವೇಗ ಮತ್ತು ಶಕ್ತಿಯನ್ನು ತುಂಬಿದ್ದೆ ಯಾಂತ್ರೀಕರಣ ಕ್ರುಷಿ ಮತ್ತು ಕ್ರುಷಿ ಜಾಗತೀಕರಣ.
ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದ ಕಾರಣ ಪಶುಗಳ ಬೇಸಾಯದಿಂದ ಗರಿಷ್ಠ ಮಟ್ಟದ ಬಿತ್ತನೆ.ಉತ್ಪಾದನೆ ಸಾದ್ಯವಾಗುತ್ತಿರಲಿಲ್ಲ ಇದೆಲ್ಲದಕ್ಕೂ ಪರ್ಯಾಯವಾಗಿ ಬಂದ ಟ್ರಾಕ್ಟರ್.ಟಿಲ್ಲರ್.ಹಾಗೂ ಚಿಕ್ಕ ಚಿಕ್ಕ ಯಂತ್ರಗಳು ಕ್ರುಷಿಯ ವೇಗದ ಜೊತೆ ಉತ್ಪಾದನೆಯನ್ನು ಹೆಚ್ಚಿಸಿದವು 
ಕ್ರುಷಿಯಲ್ಲಿ ಯಂತ್ರಗಳ ಆಗಮನದ ನಂತರ ದುಡಿಯುವ ಪಶುಗಳು ರೈತನಿಗೆ ಅನುಪಯುಕ್ತವಾಗಿ ಕಾಣಲಾರಂಬಿಸಿದವು.ಜಾಗತಿಕರಣದ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ರೈತರಿಗೆ ರಾಸಾಯನಿಕ ಗೊಬ್ಬರಗಳ ಪರಿಚಯ ಮಾಡಿದ್ದರ ಪರಿಣಾಮ ರೈತರು ಅದರಿಂದ ಬರುವ ಅಧಿಕ ಉತ್ಪಾದನೆಯ ಆಸೆಗೆ ಬಿದ್ದು ಪಶು ಗೊಬ್ಬರ.ಸಾವಯವ ಗೊಬ್ಬರ ತೊರೆದು ಬಿಟ್ಟರು.ಇವೆಲ್ಲದರ ಪರಿಣಾಮ ದುಡಿಯುವ ಎತ್ತುಗಳು ರೈತನಿಗೆ ಅನುಪಯುಕ್ತವಾಗಿ ಕಾಣಲಾರಂಬಿಸಿದವು ಜೊತೆಗೆ ನಿರ್ವಹಣೆಯೂ ಹೊರೆ ಎನ್ನಿಸಲಾರಂಬಿಸಿತು.ಎತ್ತು ದನ ಕರುಗಳನ್ನ ಮಾರಿದ ರೈತರು ಇಂದು ಸಂಪೂರ್ಣ ಯಾಂತ್ರಿಕ ಕ್ರುಷಿಯ ಮೊರೆ ಹೋಗಿದ್ದಾರೆ ಪಶುಗಳ ಸಂತತಿಗಳು ಅವನತಿಯಾಗಿ ಹೋಗಿವೆ.ದುಡಿಯುವ ಎತ್ತುಗಳ ಜಾಗದಲ್ಲಿ ವಿಧೇಶಿಯ ಅಧಿಕ ಹಾಲು ಹಿಂಡುವ ತಳಿಗಳು ಬಂದು ಕುಳಿತಿವೆ.
ಅಧಿಕ ಉತ್ಪಾದನೆ  ಹಾಗು ಹಣದಾಸೆಗೆ ಬಿದ್ದ ರೈತರಿಂದು ತಮಗೆ ಅರಿವಿಲ್ಲದೆ ಬಹುರಾಷ್ಟ್ರೀಯ ಕಂಪೆನಿಗಳ ಕಪಿ ಮುಷ್ಟಿಗೆ ಸಿಲುಕಿ ಇಂದು ತಮ್ಮ ಕ್ರುಷಿಗೆ ಮೂಲವಸ್ತುಗಳಾದ ಬೀಜ.ಗೊಬ್ಬರ.ಓಷದಿ.ಯಂತ್ರ.ಸಲಕರಣೆ ಎಲ್ಲದಕ್ಕೂ ಬಹುರಾಷ್ಟ್ರೀಯ ಕಂಪೆನಿ ಉತ್ಪನ್ನಗಳನ್ನೆ ಅವಲಂಬಿಸಿದ್ದರಿಂದ ಕ್ರುಷಿಯ ಮೂಲ ಬಂಡವಾಳ ಹೆಚ್ಚಾಗಿ ಲಾಭಾಂಶ ಕಡಿಮೆ ಮಾಡಿಕೊಳ್ಳುವದರ ಜೊತೆಗೆ ಮೂಲ ಕ್ರುಷಿಯ ತಂತ್ರಗಾರಿಕೆ.ತಳಿಗಳು.ಎಲ್ಲವನ್ನು ಕಳೆದು ಕೊಳ್ಳುವದರ ಜೊತೆಗೆ ಕ್ರುಷಿ ಅವನತಿಯತ್ತ ಸಾಗುತ್ತಿದೆ.

ಸೋಮವಾರ, ಜೂನ್ 7, 2021

ಕ್ರುಷಿ ಪ್ರಧಾನ ಭಾರತ.

ಭಾರತ ಒಂದು ಕ್ರುಷಿ ಪ್ರಧಾನ ದೇಶ ಇಲ್ಲಿ ಹೆಚ್ಚಿನ ಜನರು ಕ್ರುಷಿಯನ್ನೆ ಅವಲಂಬಿಸಿರುವದರಿಂದ ಭಾರತ ಕ್ರುಷಿ ಪ್ರಧಾನ ದೇಶ ರೈತ ದೇಶದ ಬೆನ್ನೆಲುಬು ಎಂಬ ಮಾತು ಆಡು ಬಾಷೆಯಲ್ಲಿ ಹೊಕ್ಕಾಗಿದೆ.
135 ಕೋಟಿ ಜನ ಸಂಕ್ಯೆಯಷ್ಟು ಪ್ರಾಭಲ್ಯ ಹೊಂದಿರುವ ದೇಶದಲ್ಲಿ %70 ರಷ್ಟು ಜನರು ಕ್ರುಷಿಯನ್ನೆ ಅವಲಂಬಿಸಿರುವದು.ಹಾಗೆ ನೋಡಿದರೆ ದೇಶದಲ್ಲಿ ಇಂದು ಅತೀ ಹೆಚ್ಚು ಉದ್ಯೋಗ ಸ್ರುಷ್ಟಿ ಆಗುತ್ತಿರುವದು ಕ್ರುಷಿ ವಲಯದಲ್ಲಿಯೆ.
ಹಾಗೆ ನೋಡಿದರೆ ಭಾರತದ ಕ್ರುಷಿ ವಲಯದ ಭೂ ರಚನೆ ಕ್ರುಷಿಗೆ ಹೇಳಿ ಮಾಡಿಸಿದಷ್ಟು ಸಮತಟ್ಟಾಗಿ ಇಲ್ಲ ಚಿಕ್ಕ ಚಿಕ್ಕ ಹಿಡುವಳಿ ಎತ್ತರ ತೆಗ್ಗು ರಚನೆ ಇರುವದರಿಂದ ಇಲ್ಲಿ ಕಾರ್ಪೊರೇಟ್ ಕ್ರುಷಿ ಸಾದ್ಯವಿಲ್ಲ.
ಇಲ್ಲಿ ಅತೀ ಹೆಚ್ಚು ಭೂ ಪ್ರಧೇಶ ಅರೆನೀರಾವರಿ ಪದ್ದತಿ ಅಂದರೆ ಮಳೆಯಾಶ್ರಿತ ಕ್ರುಷಿ ಅವಲಂಬಿಸಿರುವದೆ ಹೆಚ್ಚು.ಪ್ರಕ್ರುತಿ ಅಸಮತೊಲನದಿಂದ ಮಳೆ ಅತಿ ಹೆಚ್ಚು ಅತಿ ಕಡಿಮೆ ಆಗುವದರಿಂದ ಇಲ್ಲಿ ಕ್ರುಷಿ ವಿಫಲವಾಗುವದೆ ಹೆಚ್ಚು.ಆದರು ಸಹ ಕ್ರುಷಿಯನ್ನ ದುಡಿಮೆ ಎಂದು ಬಾವಿಸದೆ ಅದು ಜೀವನ ಎಂದು ನಂಬಿರುವ ನಮ್ಮ ರೈತರನ್ನ ಮೆಚ್ಚಲೆ ಬೇಕು.
ಇಂದಿನ ಯುವಜನತೆ ಆಧುನಿಕ ಜೀವನಕ್ಕೆ ಮಾರು ಹೋಗಿ ಹಳ್ಳಿಗಳನ್ನ ತೊರೆದು ನಗರಗಳಿಗೆ ವಲಸೆ ಹೋಗುತ್ತಿರುವದರಿಂದ ಹಳ್ಳಿಗಳಲ್ಲಿ ವ್ರುದ್ದಾಪ್ಯರು ಮಾತ್ರ ಉಳಿದು ಕಾಲ ಕಾಲಕ್ಕೆ ನಡಿಯಬೇಕಾದ ಕ್ರುಷಿ ಚಟುವಟಿಕೆಗಳಿಗೆ ದುಡಿಯುವ ಯುವಕರಿಲ್ಲದೆ ವ್ರುದ್ದಾಪ್ಯರಿಂದ ಮಾಡಲಾಗದೆ ಕ್ರುಷಿ ವಿಫಲವಾಗುತ್ತಿದೆ.
ಭವಿಷ್ಯದಲ್ಲಿ ಯುವಕರನ್ನ ಕ್ರುಷಿಯೆಡೆಗೆ ಆಕರ್ಷಿಸದಿದ್ದರೆ ಮುಂದೆ ಭವಿಷ್ಯದಲ್ಲಿ 70% ಇರುವ ಕ್ರುಷಿ ವಲಯ 40% ಆದರೂ ಆಶ್ಚರ್ಯವಿಲ್ಲ.ಅಂದು ಆಹಾರ ಧಾನ್ಯಗಳನ್ನ ದುಭಾರಿ ಬೆಲೆಗೆ ಆಮದು ಮಾಡಿಕೊಂಡು ಕಡಿಮೆ ಬೆಲೆಗೆ ವಿತರಣೆ ಮಾಡಲು ಯಾವ ಸರ್ಕಾರದಿಂದಲೂ ಸಾದ್ಯವಿಲ್ಲ.

ಸರ್ಕಾರಗಳು ಕಾರ್ಪೊರೇಟ್ ವಲಯಗಳಿಗೆ ನೀಡುವ ಆದ್ಯತೆಗಿಂತ ಕ್ರುಷಿ ವಲಯಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಿದರೆ ಯುವಕರು ಮತ್ತೆ ಕ್ರುಷಿಯೆಡೆಗೆ ಮರಳಿಯಾರು.ನಾಳಿನ ಆಹಾರಕ್ಕಾಗಿ ನಾಳಿನ ಸುಸ್ಥಿರ ಭಾರತಕ್ಕಾಗಿ ಯುವಕರ ಭವಿಷ್ಯಕ್ಕಾಗಿ ಸರ್ಕಾರಗಳು ಜಾಗ್ರುತವಾಗುವ ಅವಶ್ಯಕತೆ ಇದೆ.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...