expr:class='"loading" + data:blog.mobileClass'>

ಶುಕ್ರವಾರ, ಆಗಸ್ಟ್ 27, 2021

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆಯಲಾಗುತ್ತಿದೆ.
ಬಾಳೆಹಣ್ಣಿನಲ್ಲಿ ಹೇರಳವಾದ ಶರ್ಕರಪಿಷ್ಟ ಮತ್ತು ಖನಿಜಾಂಶಗಳ ಜೊತೆ ಹೇಚ್ಚಿನ ಜೀವಸತ್ವಗಳನ್ನು ಒಳಗೊಂಡಿದ್ದು ಇದು ನಮ್ಮ ಜೀರ್ಣಾಂಗ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.

ಬಾಳೆ ಕ್ರುಷಿಗೆ ಸೂಕ್ತ ಮಣ್ಣು ಮತ್ತು ಕಾಲ  :
ಬಾಳೆ ಬೆಳೆಗೆ ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪುಗೋಡು.ಕಪ್ಪುಗೋಡು ಮಣ್ಣು ಸೂಕ್ತ ತೇವಾಂಶವನ್ನು ದೀರ್ಘಕಾಲ ಕಾಯ್ದಿಟ್ಟುಕೊಳ್ಳುವ ಸಾವಯವ ಅಂಶದಿಂದ ಸಂಪದ್ಬರಿತವಾದ ಮಣ್ಣು ಸೂಕ್ತ.
ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ ಜೂನ್ - ಜುಲೈ ತಿಂಗಳಿನಲ್ಲಿ ನಾಟಿ ಮಾಡುವದರಿಂದ ಸಿಗಟೋಕಾ ಎಲೆಚುಕ್ಕೆ ರೋಗ ನಿಯಂತ್ರಿಸಬಹುದು.ಇದರ ಹೊರತಾಗಿಯೂ ನವೆಂಬರ್ - ಡಿಸೆಂಬರ್ ತಿಂಗಳಿನಲ್ಲೂ ಸಹ ನಾಟಿ ಮಾಡುವದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷಿಸಬಹುದು.

ಬಾಳೆಯ ತಳಿಗಳು :
ರೋಬಸ್ಟ್.ರಸಬಾಳೆ.ಪಚ್ಚಬಾಳೆ.ಪೂವನ್.ಜಿ-9.ರಾಜಾಪುರಿ.ನೇಂದ್ರನ್.ಏಲಕ್ಕಿಬಾಳೆ.ಮಧುರಂಗ.ಮುಂತಾದವು.
ನಾಟಿ ಪದ್ದತಿಗಳು :
ಬಾಳೆ ಬೆಳೆಯನ್ನು ಅಂಗಾಂಶ ಬಾಳೆ ಪದ್ದತಿ ಮತ್ತು ಕಂದುಗಳ ಪದ್ದತಿಯಲ್ಲಿ ನಾಟಿ ಮಾಡಬಹುದು.ಕಂದುಗಳಲ್ಲಿ ಎರಡು ವಿಧ ಒಂದು ಕತ್ತಿ ಕಂದು.ಮತ್ತೊಂದು ನೀರುಕಂದು.ಕಂದುಗಳ ನಾಟಿಯಾದರೆ ಉತ್ತಮ ಗುಣಮಟ್ಟದ ಆರೋಗ್ಯವಂತ ಗಿಡಗಳಿಂದ ಕತ್ತಿ ಕಂದುಗಳನ್ನೆ ಬಳಸುವದು ಸೂಕ್ತ.ನೀರು ಕಂದುಗಳಾದರೆ ಬೆಳೆ ಸ್ಚಲ್ಪ ತಡವಾಗಿ ಬರುವದಲ್ಲದೆ ಉತ್ತಮ ದರ್ಜೆಯ ಗೊನೆಗಳು ಬರುವದಿಲ್ಲ.

ಬಾಳೆ ನಾಟಿಯ ಅಂತರ : 
1: ಪಚ್ಚಬಾಳೆ 1.8 ಮೀ * 1.8 ಮೀ.ಅಂತರದಲ್ಲಿ ಹೆಕ್ಟೆರ್ ಗೆ 3080 ಗುಣಿಗಳು.
2: ರೋಬಾಸ್ಟ್ 1.5 ಮೀ * 1.5 ಮೀ ಅಂತರದಲ್ಲಿ ಹೆಕ್ಟೆರ್ ಗೆ 4440 ಗುಣಿಗಳು.ಮತ್ತು 2.2 ಮೀ * 1.8  ಮೀ ಅಂತರದಲ್ಲಿ ಹೆಕ್ಟೆರ್ ಗೆ 2200 ಗುಣಿಗಳು.
3: ಇತರ ತಳಿಗಳು 2.1 ಮೀ * 2.1 ಮೀ ಅಂತರದಲ್ಲಿ ಹೆಕ್ಟೆರ್ ಗೆ 2250 ಗುಣಿಗಳು.

ಬಾಳೆ ನಾಟಿ ವಿಧಾನ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಿದ್ದಪಡಿಸಿಕೊಂಡ ಭೂಮಿಯಲ್ಲಿ ಮೇಲೆ ತಿಳಿಸಿದ ಅಂತರಗಳಲ್ಲಿ 45 *45 *45 ಸೆಂ.ಮೀ ಅಳತೆಯ  ಸಿದ್ದಪಡಿಸಿಕೊಂಡ ಗುಣಿಗಳಿಗೆ ಪ್ರತಿ ಹೆಕ್ಟೆರ್ ಗೆ 40 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗುಣಿಗು ಸಮನಾಗಿ ಹಾಕಿ ಜೊತೆಗೆ ಕಾಂಪೋಸ್ಟ್.ಬೇವಿನ ಹಿಂಡಿ ಬಳಸಿದರೆ ಉತ್ತಮ ನಂತರ ಮೇಲ್ಮಣ್ಣು ಬೆರೆಸಿ ಗುಣಿಗಳನ್ನ ಸಿದ್ದಪಡಿಸಿಕೊಂಡು ನಾಟಿಗೆ ಅಂಗಾಂಶ ಸಸಿ ಹಾಗೂ ಕಂದುಗಳು ಯಾವುದಾದರೂ ಬಳಸಬಹುದು ಕಂದುಗಳನ್ನು ಬಳಸುವದಾದರೆ ಬಂಚೀಟಾಪ್.ನಂಜುರೋಗ ಮುಕ್ತ ತಾಯಿ ಗಿಡದಿಂದ ಆರಿಸಿದ ಗೆಡ್ಡೆಗಳನ್ನೆ ಬಳಸಿ ಆ ಗೆಡ್ಡೆಯ ಮೇಲ್ಬಾಗವನ್ನು ಸವರಿ ಮಣ್ಣು/ಸೆಗಣಿ ರಾಡಿಯಲ್ಲಿ ಅದ್ದಿ ತೆಗೆದು ಅವುಗಳ ಮೇಲೆ 40 ಗ್ರಾಂ.ಶೇ. 3ರ ಕಾರ್ಬೊಪ್ಯೂರಾನ್ ಹರಳು ಉದುರಿಸಿ ಗೆಡ್ಡೆಗಳನ್ನ ನೆರಳಿನಲ್ಲಿ ಒಣಗಿಸಿ ನಾಟಿ ಮಾಡುವದರಿಂದ ಸಸ್ಯಗಳ ಜಂತು ನಿರ್ವಹಣೆ ಮಾಡಬಹುದು.ನಾಟಿ ಮಾಡಿದ ನಂತರ ನೀರನ್ನು ಒದಗಿಸಿ.ನಾಟಿ ಮಾಡಿದ ಸಸ್ಯಗಳಿಂದ ಬಲಿತ ದೊಡ್ಡ ಗಿಡಗಳ ವರೆಗೆ ವಿವಿದ ಹಂತದಲ್ಲಿ ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ ಗುಣಿಗು 4 ಲೀ ನಿಂದ ಶುರುವಾಗಿ ಕೊನೆಯ ಹಂತದಲ್ಲಿ 25 ಲೀ ನೀರನ್ನು ಪ್ರತಿ ಗುಣಿಗು ಪ್ರತಿ ದಿನ ಒದಗಿಸಿ.

ಬಾಳೆ ನಾಟಿ ನಂತರದ ನಿರ್ವಹಣೆ :
ನಾಟಿ ಮಾಡಿದ ನಂತರ
ದಿನ     -    ಸಾರಜನಕ   - ರಂಜಕ  -    ಪೊಟ್ಯಾಷ್
30      -      20 ಗ್ರಾಂ    - 20 ಗ್ರಾಂ -    25ಗ್ರಾಂ
70      -      40           -  20        -    55
105    -      45            -  20        -    55
140    -      45            -  20        -    55
175    -      45            -  20        -    55
ಹೂ ಬಿಡುವ ಸಮಯ ಕೊನೆಯದಾಗಿ 
           -      45            -  20        -    55
ಈ ಪ್ರಮಾಣದ ಗೊಬ್ಬರಗಳನ್ನ ಮೇಲೆ ತಿಳಿಸಿರುವ ದಿನಗಳಲ್ಲಿ ಪ್ರತಿ ಗುಣಿಗಳಿಗೂ ಕೊಡುವದು ಸೂಕ್ತ.
ಮಣ್ಣಿನ ಗುಣಧರ್ಮದ ಆದಾರದ ಮೇಲೆ ಗೊಬ್ಬರಗಳ ಪ್ರಮಾಣವನ್ನು ಹೊಂದಿಸಿಕೊಳ್ಳಬಹುದು.
ತಾಯಿ ಗಿಡ ಹೂ ಬಿಡುವ ತನಕ ಪಕ್ಕದಲ್ಲಿ ಬರುವ ಎಲ್ಲಾ ಕಂದುಗಳನ್ನು ತೆಗೆದು ಹೂ ಬಿಟ್ಟ ನಂತರ ಮುಂದಿನ ಬೆಳೆಗಾಗಿ ಒಂದು ಕಂದನ್ನು ಮಾತ್ರ ಉಳಿಸಿಕೊಳ್ಳುವದರಿಂದ ಸಿಗಾಟೋಕಾ ಎಲೆ ಚುಕ್ಕೆ ರೋಗ ನಿಯಂತ್ರಣ ಮಾಡಬಹುದು.ಅಂತರಿಕ ಕಳೆ ನಿರ್ಮೂಲನೆಗಾಗಿ ಅಲಸಂದೆಯನ್ನು ಬಾಳೆಯ ಅಂತರದಲ್ಲಿ ಬಿತ್ತಿದ 45 ದಿನದ ನಂತರ ಮಣ್ಣಿಗೆ ಬೆರೆಸುವದರಿಂದ ಮಣ್ಣಿನಲ್ಲಿ ಸಾವಯವ ಪೋಷಕಾಂಶಗಳು ಬಾಳೆಗೆ ದೊರೆಯುವಂತೆ ಮಾಡುವದರ ಜೊತೆಗೆ ಕಳೆ ನಿರ್ಮೂಲನೆಯನ್ನು ಮಾಡಬಹುದು.

ಬಾಳೆ ಗೊನೆಗಳು ಬಲಿಷ್ಠವಾಗುವ ಹಂತದಲ್ಲಿ ಗೊನೆಗಳ ಬಾರಕ್ಕೆ ಆಸರೆಯಾಗಿ ಕೋಲುಗಳನ್ನು ಒದಗಿಸಿ ಕಟ್ಟಬೇಕು.ಬಾಳೆ ತೋಟದ ಸುತ್ತ ಗಾಳಿ ತಡೆಗಾಗಿ ಎರಡು ಸಾಲು ಚೊಗಚೆ.ನುಗ್ಗೆ.ಮುಂತಾದ ಬೆಳೆಗಳನ್ನು ಮಾಡುವದು ಸೂಕ್ತ.
ಗೊನೆಯ ಕೊನೆಯ ಕಯ್ಯಿ ಹೊರ ಬಂದಾಗ ಹೂವನ್ನು ಮುರಿಯುವದರ ಜೊತೆಗೆ 2.4 - ಡಿ 30 ಪಿ.ಪಿ.ಎಂ ಅನ್ನು 30 ಮಿ.ಗ್ರಾಂ ಪ್ರತಿ ಲೀ ನೀರಿಗೆ ಬೆರೆಸಿ ಪ್ರತಿ ಗೊನೆಗು 250 ಮಿ.ಲೀ.ಯಂತೆ ಸಿಂಪಡಿಸುವದರಿಂದ ಹಣ್ಣುಗಳ ಗಾತ್ರ ಮತ್ತು ತೂಕ ಹೆಚ್ಚಿಸಬಹುದು.

ಬಾಳೆ ಬೆಳೆಗೆ ತಗುಲುವ ರೋಗಗಳು :
ಎಲೆಸುರುಳಿ ರೋಗ.ಕಾಂಡಕೊರಕ ಹುಳು.ಸಸ್ಯ ಹೇನು.ಗೆಡ್ಡೆಕೊರಕ ಹುಳು.ಎಲೆಚುಕ್ಕೆ ರೋಗ.ಪನಾಮ ಸೊರಗು.ಬಂಚಿಟಾಪ್.ಮೊಸಾಯಿಕ್ ನಂಜುರೋಗ.ನೆಮಟೋಡ್ ಸಸ್ಯಜಂತು ರೋಗ.ಫ್ರೆಕಲ್ ಎಲೆಚುಕ್ಕೆ.ತುದಿಕೊಳೆ.ಚಿಬ್ಬುರೋಗ.ಇಂತಹ ಸಾಮಾನ್ಯ ರೋಗ ಲಕ್ಷಣಗಳು ಕಂಡುಬಂದಾಗ ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗಲುವ ರೋಗ ಹತೋಟಿ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.

ಬಾಳೆ ಕೊಯ್ಲು ಮತ್ತು ಇಳುವರಿ :
ತಳಿಗಳಿಗೆ ಅನುಗುಣವಾಗಿ ನಾಟಿ ಮಾಡಿದ 12 - ರಿಂದ 14 ತಿಂಗಳಿಗೆ ಮೊದಲ ಕೊಯ್ಲು ಬಂದರೆ ಎರಡನೆ ಕೊಯ್ಲು 6 ರಿಂದ 8 ತಿಂಗಳಲ್ಲಿ ಬರುತ್ತದೆ.ಹಾಗೂ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 45 ಟನ್ ವರೆಗು ಇಳುವರಿ ಬರುತ್ತದೆ.


ಶುಕ್ರವಾರ, ಆಗಸ್ಟ್ 20, 2021

ಕ್ಯಾರೆಟ್ ಬೆಳೆ ಮಾಹಿತಿ.

ಕ್ಯಾರೆಟ್ ಒಂದು ಬಹು ಜನಪ್ರಿಯ ಗಡ್ಡೆ ತರಕಾರಿ.ಕ್ಯಾರೆಟ್ ಅನ್ನುವ ಪದ ಆಗ್ಲಬಾಷೆಯಿಂದ ಬಂದದ್ದು ಕನ್ನಡದಲ್ಲಿ ಇದನ್ನು 'ಗಜ್ಜರಿ" ಎಂದು ಕರೆಯುತ್ತಾರೆ. ಇದು ತನ್ನ ವಿಷೇಶವಾದ ಸಿಹಿ ಗುಣದಿಂದ ಬಹು ಜನಪ್ರಿಯ ತರಕಾರಿಯಾಗಿದೆ.ಕ್ಯಾರೆಟನ್ನು ಹಸಿ ತರಕಾರಿಯಾಗಿ ಮತ್ತು ಸಿಹಿ ಪಧಾರ್ಥಗಳ ತಯಾರಿಕೆ ಮತ್ತು ಸಾಂಬಾರ್ ಮತ್ತು ಪಲ್ಯ.ಸಲಾಡ್ಗಳಲ್ಲೂ ಬಳಸ ಬಹುದು ಜೊತೆಗೆ ಸೊಂದರ್ಯ ವರ್ದಕಗಳಲ್ಲೂ ಬಳಸಬಹುದು.ಪಾನೀಯವಾಗಿ ಕ್ಯಾರೆಟ್ ಜ್ಯೂಸ್ ಸಹ ತಯಾರಿಸಬಹುದು.
ಕ್ಯಾರೆಟ್ ಮೂಲ ತವರು ಮದ್ಯ ಏಷ್ಯಾ.ಭಾರತದಲ್ಲೂ ಸಹ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.ಕ್ಯಾರೇಟ್ ಅಲ್ಲಿ ಹೇರಳವಾದ ವಿಟಮಿನ್ 'ಎ" ಮತ್ತು 'ಬಿ" ಜೊತೆಗೆ ಖನಿಜಾಂಶಗಳ ಆಗರವಾಗಿದೆ.ದ್ರುಷ್ಟಿದೋಶ.ಮತ್ತು ಚರ್ಮ ಸಂರಕ್ಷಣೆಯಲ್ಲಿ ಕ್ಯಾರೆಟ್ ಅಲ್ಲಿರುವ ವಿಟಮಿನ್ಗಳು ಖನಿಜಾಂಶಗಳು ಬಹುಮುಖ್ಯ ಪಾತ್ರವಹಿಸುತ್ತವೆ.

ಕ್ಯಾರೆಟ್ ತಳಿಗಳು :
ಕುರೋಡ್.ಪೂಸಾ ಯಮದಗ್ನಿ.ಏಷಿಯಾಟಿಕ್ ಲೋಕಲ್.ಡ್ಯಾನವರ್ಸ.ಜೆಯಂಟ್ ಚಾಂಟೆನಿ.ಅರ್ಕಾ ಸೂರಜ್.ಪೂಸಾ ಮೇಘಾಲಿ.ನ್ಯಾಂಟೀಸ್.ಪೂಸಾ ಕೇಸರ್.ಮತ್ತು ಇನ್ನು ಹಲವು.

ಮಣ್ಣು ಮತ್ತು ಹವಾಗುಣ :
ಕ್ಯಾರೆಟ್ ಬೆಳೆಗೆ ಮಣ್ಣಿನ ರಸಸಾರ 4 ರಿಂದ 6 ಬಹು ಮುಖ್ಯ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ ಫಸಲಿಗೆ ಸೂಕ್ತ.
ಕ್ಯಾರೆಟ್ ಬೆಳೆಯನ್ನು ವರ್ಷದ ಮೂರು ಕಾಲಮಾನದಲ್ಲೂ ಬೆಳೆಯಬಹುದಾದರೂ ಸಹ ಉತ್ತಮ ಇಳುವರಿಗೆ ಅಕ್ಟೋಬರ್ - ನವೆಂಬರ್ ಸೂಕ್ತ ಕಾಲಮಾನ.ಇದರ ಹೊರತಾಗಿಯೂ ಜನವರಿ - ಫೆಬ್ರವರಿ ಮತ್ತು ಜೂನ್ -ಜುಲೈ ತಿಂಗಳುಗಳಲ್ಲಿಯೂ ಸಹ ಬೆಳೆಯಬಹುದು.

ಕ್ಯಾರೆಟ್ ಬೇಸಾಯ ಕ್ರಮ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಣ್ಣ ಮಣ್ಣು ಮಾಡಿ ಸಿದ್ದಪಡಿಸಿದ ಭೂಮಿಯಲ್ಲಿ 1.2 * 1.2 ಮೀ ಅಗಲದ ಮಡಿಯನ್ನು ತಯಾರಿಸಿಕೊಂಡು ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರ ಮತ್ತು 50 * 50 * 50 ಸಾರಜನಕ.ರಂಜಕ.ಪೊಟ್ಯಾಶ್ ಮಿಶ್ರಣ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 20.5 ಸೆಂ.ಮೀ ಅಂತರದ ಸಾಲುಗಳಲ್ಲಿ ಹೆಕ್ಟೇರ್ ಗೆ 5 ಕೆ ಜಿ ಬೀಜದಂತೆ ಬಿತ್ತಬೇಕು.ಬೀಜಗಳು ಮೊಳಕೆಯೊಡೆದ ಮೇಲೆ 10 ಸೆಂ.ಮೀ ಒಂದರಂತೆ ಒಳ್ಳೆಯ ಆರೋಗ್ಯವಂತ ಸಸಿಗಳನ್ನು ಉಳಿಸಿಕೊಂಡು ಉಳಿದ ಸಸಿಗಳನ್ನ ಕಿತ್ತು ತೆಗೆಯಬೇಕು.
ಕ್ಯಾರೆಟ್ ಬೀಜಗಳು ಅತಿ ಕಡಿಮೆ ನೀರು ಬೇಡುವದರಿಂದ ಬೀಜಗಳು ಮೊಳಕೆಯೊಡೆಯುವ ವರೆಗೂ ತೆಳುವಾಗಿ ನೀರು ಕೊಡುವದು ಸೂಕ್ತ.ಮಣ್ಣು ಮತ್ತು ಹವಾಗುಣಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಒದಗಿಸುವದು ಸೂಕ್ತ.ಕ್ಯಾರೆಟ್ ಬೀಜಗಳು ಹೆಚ್ಚಿನ ಸಂದರ್ಭದಲ್ಲಿ ಮೊಳಕೆ ಒಡೆಯುವಲ್ಲಿ ವಿಫಲವಾಗುವದು ಹೆಚ್ಚು ಹಾಗಾಗಿ ನೀರಿನ ನಿರ್ವಹಣೆಯನ್ನು ಮಣ್ಣಿನ ಗುಣಕ್ಕನುಸಾರವಾಗಿ ಜಾಗ್ರತೆ ಇಂದ ಅನುಸರಿಸುವದು  ಸೂಕ್ತ.

ಕ್ಯಾರೆಟ್ ಬೆಳೆಯಲ್ಲಿ ಕಳೆ ನಿಯಂತ್ರಣ :
ಬೀಜ ಬಿತ್ತಿದ ದಿನದಿಂದ 48 ಗಂಟೆಯ ಒಳಗಾಗಿ ಭೂಮಿಯಲ್ಲಿ ತೇವಾಂಶ ಇರುವಂತೆ ನೋಡಿಕೊಂಡು 2.5 ಲೀ.ಪೆಂಡಿಮಿಥಾಲಿನ್ 30 ಇ.ಸಿ ಅಥವ 1.5 ಲೀ ಅಲಾಕ್ಲೋರ್ 50 ಇ.ಸಿ ಯಾವುದಾದರೂ ಒಂದನ್ನು ಭೂಮಿಯ ಮೇಲೆ ಸಿಂಪಡಣೆ ಮಾಡಬಹುದು.ಸಿಂಪಡಣೆಯ ನಂತರ ಭೂಮಿಯನ್ನು ತುಳಿಯಬಾರದು.ನಂತರದಲ್ಲೂ ಬರುವ ಕಳೆಗಳನ್ನು ಆಗಾಗ ಪ್ರತಿ 20 ದಿನಗಳಿಗೊಮ್ಮೆ ನಿಯಂತ್ರಿಸುವದು ಸೂಕ್ತ.ಕಳೆ ನಿಯಂತ್ರಣದ ನಂತರ ಮೇಲುಗೊಬ್ಬರವಾಗಿ ಸಾರಜನಕ 25 ಕಿ.ಗ್ರಾಂ ಕೊಡುವದು ಸೂಕ್ತ.

ಕ್ಯಾರೆಟ್ ಬೆಳೆಗೆ ತಗಲುವ ರೋಗಗಳು :
ಸಹಜವಾಗಿ ಕ್ಯಾರೆಟ್ ಬೆಳೆಗೆ ಮೂತಿ ಹುಳು.ಹೇನು.ಜಿಗಿಹುಳು.ಎಲೆಚುಕ್ಕೆ ರೋಗ.ಬೂದಿರೋಗ.ಎಲೆಸುಡುರೋಗಗಳನ್ನು ಗುರುತಿಸಲಾಗಿದೆ.ಕಾಲ ಕಾಲಕ್ಕೆ ತಗಲುವ ರೋಗಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸಿದಲ್ಲಿ ಉತ್ತಮ ಫಸಲು ಇಳುವರಿ ಪಡೆಯಬಹುದು.

ಕ್ಯಾರೆಟ್ ಕೊಯ್ಲು ಮತ್ತು ಇಳುವರಿ :
ಕ್ಯಾರೆಟ್ ಬಿತ್ತಿದ ತಳಿಗಳಿಗೆ ಅನುಗುಣವಾಗಿ 3 ರಿಂದ 4 ತಿಂಗಳ ನಂತರ ಕೊಯ್ಲಿಗೆ ಬರುತ್ತವೆ.ಉತ್ತಮ ನಿರ್ವಹಣೆ ಮತ್ತು ಮಣ್ಣಿನ ಗುಣ ಧರ್ಮಕ್ಕನುಗುಣವಾಗಿ ಪ್ರತಿ ಹೆಕ್ಟೇರ್ ಗೆ 20 ಟನ್ ಕ್ಯಾರೆಟ್ ಇಳುವರಿಯನ್ನ ಪಡೆಯಬಹುದು.



ಬುಧವಾರ, ಆಗಸ್ಟ್ 11, 2021

ರೈತ ವಿರೋದಿ ವಿದ್ಯುತ್ ತಿದ್ದುಪಡಿ ಮಸೂದೆ 2021

  ಇತ್ತೀಚೆಗೆ ಕೆಂದ್ರ ಸರ್ಕಾರ ಅವಿರೋದವಾಗಿ ರೈತ ಮಸೂದೆ ಮಂಡನೆ ಮಾಡಿ ರೈತರ ಕೆಂಗಣ್ಣಿಗೆ ಗುರಿಯಾಗಿ ಬಾರಿ ಪ್ರತಿಭಟನೆ ನಂತರ ಸು ಕೋರ್ಟ್ ಮದ್ಯ ಪ್ರವೇಶದಿಂದ ತಾತ್ಕಾಲಿಕವಾಗಿ ಕ್ರುಷಿ ಮಸೂದೆಯನ್ನು ತಡೆ ಹಿಡಿಯಲು ಆದೇಶಿಸಿದ ನಂತರ ಕೆಂದ್ರ ಸರ್ಕಾರ ಮತ್ತೊಂದು ರೈತ ವಿರೋದಿ ವಿದ್ಯುತ್ ಮಸೂದೆ ಮಂಡನೆ ಮಾಡಲು ನಿರ್ದರಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಕೆ ಮಾಡಿ ಶುಲ್ಕ ವಸೂಲಿ ಮಾಡುವುದು, ಬಳಿಕ ನಿಧಾನವಾಗಿ ಸರ್ಕಾರದಿಂದ ರೈತರಿಗೆ ಮರುಪಾವತಿ ಮಾಡುವುದು ಸೇರಿ ಹಲವು ವಿವಾದಿತ ನಿಯಮವನ್ನು ಒಳಗೊಂಡ ‘ವಿದ್ಯುತ್‌ ತಿದ್ದುಪಡಿ ಮಸೂದೆ-2021’ ವಿರುದ್ಧ ಬೀದಿಗಿಳಿಯಲು ರೈತ ಸಂಘಟನೆಗಳು ನಿರ್ದರಿಸಿವೆ.
 ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ರೈತ ವಿರೋದಿ ವಿದ್ಯುತ್‌ ಮಸೂದೆ-2021 ಪ್ರಕಾರ, ಕೃಷಿ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಮೀಟರ್‌ ಅಳವಡಿಕೆಯಾಗಲಿದೆ. ಅಷ್ಟೇ ಅಲ್ಲ, ಈವರೆಗೆ 10 ಎಚ್‌ಪಿ ಪಂಪ್‌ಸೆಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿದ್ದ ರೈತರೂ ಸೇರಿದಂತೆ ಎಲ್ಲರೂ ವಿದ್ಯುತ್‌ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಯ ನಂತರ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು.
ರೈತ ವಿರೋದಿ ವಿದ್ಯುತ್  ಮಸೂದೆಯ ಕರಡು ನಿಯಮಗಳಲ್ಲಿರುವ ಈ ಪ್ರಸ್ತಾಪವು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಸೂದೆ ಜಾರಿಯಾದರೆ ವಿದ್ಯುತ್‌ ಸರಬರಾಜು ನಿಗಮಗಳು ಖಾಸಗಿ ಕಂಪನಿಗಳ ಕೈ ಸೇರಲಿವೆ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಯಾದರೆ ಖಾಸಗಿ ಕಂಪನಿಗಳು ರೈತರ ಶೋಷಣೆ ಮಾಡಲಿವೆ. ಇದರಿಂದ ಕೃಷಿ ಚಟುವಟಿಕೆಗಳನ್ನೇ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ವಿದ್ಯುತ್‌ ಪೂರೈಕೆ ಖಾಸಗೀಕರಣಕ್ಕೆ ಅಂಕಿತ ದೊರೆತರೆ ಬಡ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್‌, ಬೀದಿ ದೀಪ, ನೀರು ಸರಬರಾಜಿಗೆ ನೇರವಾಗಿ ನೀಡುತ್ತಿರುವ ಉಚಿತ ವಿದ್ಯುತ್‌ ಬಂದ್‌ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್‌ ಶುಲ್ಕ ಪಾವತಿಸಿ ಬಳಿಕ ಸರ್ಕಾರ ಸಬ್ಸಿಡಿ ಕಾರ್ಯಕ್ರಮದಡಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ. ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಿದರಂತೂ ಕೃಷಿಕರೂ ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ ಬಳಕೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಎದುರಾಗಲಿದೆ.
ರೈತ ವಿರೋದಿಯಾದ ವಿದ್ಯುತ್ ಮಸೂದೆ 2021 ರ ವಿರುದ್ದ ಹೋರಾಟಕ್ಕೆ ರೈತ ಸಂಘಗಳು ನಿರ್ಧರಿಸಿವೆ ಇವೆಲ್ಲಾ ನಿಯಮಗಳಿಂದಾಗಿ ಮಸೂದೆಯು ಕೃಷಿಕರಿಗೆ ಮರಣಶಾಸನ ವಾಗಲಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹೋರಾಟ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿವೆ. ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಆಗಸ್ಟ್‌ 10 ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿವೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟದ ಜತೆ ಈಗಾಗಲೇ ಮಾತುಕತೆ ನಡೆಸಿದೆ.ವಿದ್ಯುತ್   ಖಾಸಗೀಕರಣ ಪ್ರಸ್ತಾವನೆಯಿಂದ ಕೇಂದ್ರವು ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್‌, ಹಿಂದೆ ಎಸ್‌.ಎಂ. ಕೃಷ್ಣ ಅವಧಿಯಲ್ಲೂ ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಗೆ ಸರ್ಕಾರ ಮುಂದಾಗಿತ್ತು. ಮೀಟರ್‌ ಅಳವಡಿಕೆ ಮಾಡಿ ಖಾಸಗಿಯವರಿಗೆ ಹಸ್ತಾಂತರಿಸಲು ಯತ್ನಿಸಿದ್ದರು. ಆಗ ರಾಜ್ಯಾದ್ಯಂತ ಹೋರಾಟ ಸಂಘಟಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ರೈತರು ಮಾಡಿದ್ದರು ಇದೀಗ ಕೇಂದ್ರ ಸರ್ಕಾರವು 2019ರಿಂದಲೂ ವಿದ್ಯುತ್‌ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಒಂದೂವರೆ ವರ್ಷಗಳ ಕಾಲ ರೈತರಿಗೆ ಸಂಬಂಧಿಸಿದ ಯಾವುದೇ ಕಾಯಿದೆ ತಿದ್ದುಪಡಿ ತರದಂತೆ ತಡೆಯಾಜ್ಞೆ ನೀಡಿದೆ. ಇದೀಗ ಕೇಂದ್ರವು ನ್ಯಾಯಾಲಯದ ಗಡುವು ಮುಗಿದ ತಕ್ಷಣವೇ ರೈತರ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರವು 2020ರ ವಿದ್ಯುತ್‌ ಕಾಯಿದೆಯನ್ನು ಅನುಷ್ಠಾನಗೊಳಿಸಲು 2021ರ ವಿದ್ಯುತ್‌ ತಿದ್ದುಪಡಿ ಕಾಯಿದೆ ಮಂಡಿಸಲು ಸಿದ್ಧವಾಗಿದೆ. ಈ ಬಗ್ಗೆ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಈ ಕುರಿತು ವಿದ್ಯುತ್‌ ಪ್ರಸರಣ ನಿಗಮಗಳ ಸಂಘಗಳೂ ನಮ್ಮನ್ನು ಸಂಪರ್ಕಿಸಿವೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
.

ಭಾನುವಾರ, ಜುಲೈ 25, 2021

ಮಾವು ಬೆಳೆ.

ಭಾರತದ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಮಾವಿನ ಹಣ್ಣಿಗೆ ಮೊದಲ ಸ್ಥಾನ ಹಣ್ಣುಗಳು ತಮ್ಮ ವಿಶಿಷ್ಟವಾದ ವಿಶೇಷ ರುಚಿಯಿಂದಾಗಿ ಎಂತವರ ಮನಸ್ಸನ್ನು ಆಕರ್ಶಿಸುತ್ತವೆ.ಮಾವಿನ ಹಣ್ಣಿನಲ್ಲಿ ವಿಟಮಿನ್ 'ಎ" ಮತ್ತು 'ಸಿ" ಜೀವಸತ್ವಗಳು ಹೇರಳವಾಗಿದ್ದು ಮನುಷ್ಯನ ಜೀರ್ಣಕ್ರಿಯೆಗೆ ಹೆಚ್ಚು ಸಹಕರಿಸುತ್ತವೆ.ಮಾವಿನ ಹಣ್ಣನ್ನು ತಾಜಾಹಣ್ಣುಗಳಾಗಿ ಮತ್ತು ಸಂಸ್ಕರಿಸಿದ ಪಧಾರ್ಥಗಳಾಗಿಯೂ ಉಪಯೋಗಿಸ ಬಹುದು.ಭಾರತದ ಮಾವಿನ ಹಣ್ಣುಗಳಿಗೆ ವಿಧೇಶಗಳಲ್ಲಿ ಹೆಚ್ಚು ಬೇಡಿಕೆ ಇರುವದರಿಂದ ಹಣ್ಣು ಮತ್ತು ಸಂಸ್ಕರಿಸಿದ ಪಧಾರ್ಥಗಳನ್ನು ವಿಧೇಶಗಳಿಗೆ ರಫ್ತು ಮಾಡಲಾಗುತ್ತದೆ.


ಮಾವಿನ ಹಣ್ಣಿನ ತಳಿಗಳು:
ಬಾದಾಮಿ.ರಸಪೂರಿ.ತೋತಾಪುರಿ.ಐಶ್ವರ್ಯ.ಬೆನೆಶಾನ್.ನೀಲಂ.ಮಲಗೋವಾ.ಮಲ್ಲಿಕಾ.ದಶಹರಿ.ಕೇಸರ್.ಖಾದರ್.ನೀಲ್ಗೋವ.ರತ್ನ.ಆಮ್ರಪಾಲಿ.ನೀಲೇಶಾನ್.ಮುಂಡಪ್ಪ.ಕರಇಶಾಡ್.ಬೆನೆಟ್.

ಉಪ್ಪಿನಕಾಯಿ ತಳಿಗಳು:
ಅಪ್ಪೆಮಿಡಿ.ಆಮ್ಲೆಟ್.ಜೀರಿಗೆ.ಕೊಸಜಿಪಟೇಲ.

ಮಾವಿನ ಸಸಿಗಳ ನಾಟಿಯ ಅಂತರ :
ಇತ್ತೀಚೆಗೆ ಮಾವನ್ನು ಅಧಿಕ ಸಾಂದ್ರತೆಯಲ್ಲಿ ಕಡಿಮೆ ಅಂತರ ಕೊಟ್ಟು ಬೆಳೆಸುವದು ಜನಪ್ರಿಯವಾಗುತ್ತಿದೆ.ಇದರ ಅನುಕೂಲವೇನೆಂದರೆ ಪ್ರತಿ ಹೆಕ್ಟೆರ್ ಗೆ ನಾಟಿ ಮಾಡುವ ಸಸಿಗಳ ಸಂಕ್ಯೆ ಹೆಚ್ಚಿಸುವದು ಮತ್ತು ಇಳುವರಿ ಹೆಚ್ಚಿಸುವದು.ವಿಶೇಷವಾಗಿ ಎಲ್ಲಾ ತಳಿಗಳು ಅಧಿಕ ಸಾಂದ್ರತೆಗೆ ಒಗ್ಗುವದಿಲ್ಲ.ಕಡಿಮೆ ಸಾಂದ್ರತೆಗೆ ಹೊಂದುವಂತಹ ಗಿಡ್ಡ ತಳಿಗಳನ್ನೆ ಆರಿಸುವದು ಸೂಕ್ತ.
ಅಂತರ : 5 ಮೀ x 5 ಮೀ = 400 ಗಿಡ ಹೆಕ್ಟೇರ್ ಗೆ.
              8 ಮೀ x 8 ಮೀ = 156 ಗಿಡ ಹೆಕ್ಟೇರ್ ಗೆ.
              9 ಮೀ x 9 ಮೀ = 123 ಗಿಡ ಹೆಕ್ಟೇರು ಗೆ.
          10 ಮೀ x 10 ಮೀ = 100 ಗಿಡ ಹೆಕ್ಟೇರು ಗೆ.
          12 ಮೀ x 12 ಮೀ = 70 ಗಿಡ ಹೆಕ್ಟೇರು ಗೆ.
ಮಾವು ಸಸಿ ಬೇಸಾಯ ಕ್ರಮ :
ಭೂಮಿಯನ್ನು ಉಳುಮೆ ಮಾಡಿ ಸಿದ್ದಪಡಿಸಿಕೊಂಡು. 90 x 90 x 90 ಸೆಂ.ಮೀ ಗಾತ್ರದ ಗುಣಿಗಳನ್ನು ತೆಗೆದು ಪ್ರತಿ ಗುಣಿಗಳಿಗೂ 25 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ.2 ಕಿ.ಗ್ರಾಂ ಬೇವಿನ ಹಿಂಡಿ.ಮತ್ತು ಸಮ ಪ್ರಮಾಣದ ಮೇಲ್ಮಣ್ಣನ್ನು ಮಿಶ್ರಣ ಮಾಡಿದ ನಂತರ ಆರೋಗ್ಯಯುತ ಒಂದು ವರ್ಷ ಪ್ರಾಯದ ಉತ್ತಮವಾಗಿ ಕಸಿ ಕಣ್ಣು ಬೆಸೆದು ಕೊಂಡಂತಹ ಸಸಿಗಳನ್ನು ಗುಣಿಯ ಮದ್ಯಬಾಗದಲ್ಲಿ ಕಸಿ ಮಾಡಿದ ಬಾಗ ಭೂಮಿಯ ಮೇಲೆ ಇರುವಂತೆ ನಾಟಿ ಮಾಡಬೇಕು.ನಂತರ ಆಸರೆಗೆ ಕೋಲುಗಳನ್ನು ಕೊಟ್ಟು ಗಿಡಗಳನ್ನು ಕಟ್ಟಬೇಕು.ನಂತರ ನೀರನ್ನು ಒದಗಿಸಬೇಕು.

ಮಾವು ನಾಟಿಯ ನಂತರದ ನಿರ್ವಹಣೆ :
ನಾಟಿಯ ನಂತರ ಅಂತರ ಬೇಸಾಯದ ಜೊತೆ ಮಾವಿನ ತೋಟದಲ್ಲಿ ಉಪಬೆಳೆಗಾದ ತರಕಾರಿ.ಶೆಂಗಾ.ಹಲಸಂದೆ.ಈ ರೀತಿಯ ಮಾವಿನ ಗಿಡಗಳಿಗಿಂತ ಎತ್ತರ ಬೆಳೆಯದಂತಹ ಉಪ ಬೆಳೆಗಳನ್ನು ಬೆಳೆಯುವದರ ಜೊತೆಗೆ ಲಾಭವನ್ನು ಹೊಂದಬಹುದು.ಇದರಿಂದ ಕಳೆ ನಿರ್ಮೂಲನೆಯ ಜೊತೆ ಮಣ್ಣಿನ ಫಲವತ್ತತೆಗೂ ಸಹಕಾರಿಯಾಗುತ್ತದೆ.ಬೇಸಿಗೆಯಲ್ಲಿ ಗಿಡಗಳ ಸುತ್ತ ವ್ರುತ್ತಾಕಾರದಲ್ಲಿ ಪಾತಿಗಳನ್ನು ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಮತ್ತು ಕ್ರುಷಿ ತ್ಯಾಜ್ಯ ಪದಾರ್ಥಗಳಿಂದ ಪಾತಿಯನ್ನು ಮುಚ್ಚಬೇಕು.ಕೊಟ್ಟಿಗೆ ಗೊಬ್ಬರ ಕೊಡುವದಕ್ಕು ಮೊದಲು ಅಥವ ತಿಂಗಳ ನಂತರ ಸಾರಜನಕ 75 ಕಿ.ಗ್ರಾಂ.ರಂಜಕ 20 ಕಿ.ಗ್ರಾಂ.70 ಕಿ.ಗ್ರಾಂ.ಮಿಶ್ರಣದ ಗೊಬ್ಬರವನ್ನು ಮೊದಲ ವರ್ಷದಲ್ಲಿ ಗಿಡಗಳ ಬುಡದಿಂದ ಒಂದು ಅಡಿ ದೂರದಲ್ಲಿ ನೀಡಬೇಕು.ಮೊದಲೆರಡು ವರ್ಷದಲ್ಲಿ ಬೇಸಿಗೆಯಲ್ಲಿ ಗಿಡಗಳಿಗೆ ನೀರನ್ನು ಅತ್ಯಾವಶ್ಯಕವಾಗಿ ಒದಗಿಸಬೇಕು.
 ಮಾವು ಇಳುವರಿ ಸುಧಾರಣ ಸೂತ್ರಗಳು:
ಮಾವಿನ ರೆಂಬೆಗಳು ಒತ್ತೊತ್ತಾಗಿ ಬೆಳೆದಾಗ ಕೆಲವೊಂದು ರೆಂಬೆಗಳನ್ನು ಕತ್ತರಿಸುವದರಿಂದ ಗಿಡಗಳ ಒಳಬಾಗಕ್ಕೆ ಗಾಳಿ ಬೆಳಕು ಹೇರಳವಾಗಿ ದೊರೆತು ರೋಗಗಳ ಬಾದೆ ಕಮ್ಮಿಯಾಗಿರುತ್ತದೆ.ಜೊತೆಗೆ ಉತ್ತಮ  ಗುಣಮಟ್ಟದ ಕಾಯಿಗಳು ದೊರೆಯುತ್ತವೆ.5 ರಿಂದ 6 ವರ್ಷವಾದಾಗ ಮದ್ಯದ ಒಂದೊಂದು ರೆಂಬೆಗಳನ್ನು ಕತ್ತರಿಸಿ ಗಾಳಿ ಬೆಳಕಿಗೆ ಅನುವು ಮಾಡಿಕೊಡಬೇಕು.ಕತ್ತರಿಸಿದ ರೆಂಬೆಗಳಿಗೆ ಶಿಲೀಂದ್ರನಾಶಕ ಮತ್ತು ಕೀಟನಾಶಕದ ಮುಲಾಮನ್ನು ಲೇಪಿಸುವದು ಅತ್ಯಾವಶ್ಯಕ.ಜೂನ್ ಮತ್ತು ಜುಲೈ ತಿಂಗಳು ಈ ಕೆಲಸಕ್ಕೆ ಸೂಕ್ತ ಕಾಲ.
ಕೆಲವು ಮಾವಿನ ತಳಿಗಳು ಎರಡು ವರ್ಷಕ್ಕೊಮ್ಮೆ ಹೆಚ್ಚು ಇಳುವರಿ ಕೊಟ್ಟು ಮದ್ಯ ವರ್ಷದಲ್ಲಿಜ ಇಳುವರಿ ಬಹಳ ಕಡಿಮೆ ಇರುತ್ತವೆ.ಇದು ಪ್ರಕ್ರುತಿದತ್ತ ನಿಯಮ ಇದನ್ನು ತಡೆಯಲು ಮಾವು ಹೂ ಬಿಡುವ ನೂರು ದಿನ ಮುಂಚೆ 5 ಮಿಲಿ 'ಪ್ಯಾಕ್ಲೋಬುಟ್ರಜಾಲ್ " ಸಂಯುಕ್ತ ವಸ್ತು ಹತ್ತು ಲೀಟರ್ ನೀರಿಗೆ ಬೆರೆಸಿ ಗಿಡಗಳ ಪಾತಿಯಲ್ಲಿ ಕಾಂಡದಿಂದ 90 ಸೆಂ.ಮೀ ದೂರದಲ್ಲಿ ಸುರಿಯುವದರಿಂದ ಪ್ರತಿ ವರ್ಷವೂ ಗಿಡಗಳು ಹೂ ಹಣ್ಣು ಬಿಡುವಂತೆ ಮಾಡಬಹುದು.ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ಅಲ್ಲಿ ಈ ಕ್ರಿಯೆ ಅನುಸರಿಸುವದು ಸೂಕ್ತ. 

ಮಾವುನ ಬೆಳೆಗೆ ತಗುಲುವ ರೋಗಗಳು:
ಮಾವಿನ ಬೆಳೆಯಲ್ಲಿ ಸಾಮಾನ್ಯವಾಗಿ ಜಿಗಿಹುಳು.ಹಿಟ್ಟು ತಿಗಣೆ.ಎಲೆಗಂಟು.ರೆಂಬೆಕುಡಿ ಕೊರಕ.ಓಟೆಕೊರಕ.ಹಣ್ಣಿನ ನೊಣ.ಎಲೆ ತಿನ್ನುವ ಹುಳು.ಶಲ್ಕ ಕೀಟ.ಕಾಂಡಕೊರಕ.ನುಸಿ.ಕೆಂಪು ಇರುವೆ.ಬೂದಿರೋಗ.ಚಿಬ್ಬುರೋಗ.ದುಂಡಾಣು ಎಲೆಚುಕ್ಕೆ ರೋಗ.ಹೂ ಅಂಗಮಾರಿ.ವಿಕಾರತೆ.ಇಂತಹ ರೋಗಗಳು ಸಾಮಾನ್ಯ.ಕಾಲ ಕಾಲಕ್ಕೆ ತಗುಲುವ ರೋಗಲಕ್ಷಣಕ್ಕೆ ಅನುಸಾರವಾಗಿ ನುರಿತ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಕಾಯಿ.ಹಣ್ಣು.ಇಳುವರಿಯನ್ನು ಹೊಂದಬಹುದು.
ಕೊಯ್ಲು ಮತ್ತು ಇಳುವರಿ:
ಕಸಿ ಗಿಡಗಳು ನಾಟಿ ಮಾಡಿದ ಎರಡನೇ ವರ್ಷದಿಂದ ಹೂ ಬಿಡಲು ಪ್ರಾರಂಬಿಸುತ್ತವೆ ಆದರೂ 4 ವರ್ಷದ ನಂತರ ನಿಯಮಿತ ಹಣ್ಣು ಬಿಡುವದನ್ನು ಪ್ರೋತ್ಸಾಹಿಸಬೇಕು.ಹತ್ತು ವರ್ಷದ ನಂತರ ಗರಿಷ್ಠ ಇಳುವರಿಯನ್ನು ಪಡೆಯಬಹುದು.
ಮೊದಲ ನೇ 5 ರಿಂದ 10 ವರ್ಷದಲ್ಲಿ ಪ್ರತಿ ಗಿಡಕ್ಕೆ 50 ರಿಂದ 400 ಕಾಯಿಯವರೆಗೂ ಪ್ರತಿ ಹೆಕ್ಟೇರು ಗೆ 10 ರಿಂದ 100 ಕ್ವಿಂಟಾಲ್ ವರೆಗೂ ಪಡೆಯಬಹುದು.
20 ವರ್ಷದ ನಂತರ ಪ್ರತಿ ಮರದಿಂದ 1500 ಕ್ಕೂ ಹೆಚ್ಚು ಕಾಯಿ ಅಂದರೆ ಪ್ರತಿ ಹೆಕ್ಟೇರ್ ಗೆ 300 ಕ್ವಿಂಟಾಲ್ ವರೆಗೂ ಇಳುವರಿ ಪಡೆಯಬಹುದು.

ವಿಷೇಶ ಸೂಚನೆ : ಸೂಚಿಸಿರುವ ಇಳುವರಿ ಪ್ರತಿ ಹೆಕ್ಟೇರ್ ಗೆ ನಾಟಿ ಮಾಡಿರುವ ಗಿಡಗಳ ಅಂತರದ ಮೇಲೆ ವ್ಯತ್ಯಾಸವಿರುತ್ತದೆ.

ಮಂಗಳವಾರ, ಜುಲೈ 20, 2021

ಪಾಲಕ್ ಸೊಪ್ಪು.

ಮದ್ಯ ಏಷ್ಯಾದ ಸ್ಥಳೀಯ ಸಸ್ಯ ಪಾಲಕ್ ಸೊಪ್ಪು ಅಮರಾಂಥೇಸಿಯೆ ಇದರ ಮೂಲ ನಾಮಧೇಯ.ಸಹಜವಾಗಿ ಇದು 30 ಸೆಂ.ಮೀ ವರೆಗೂ ಬೆಳೆಯುತ್ತದೆ.ಪಾಲಕ್ ಸೊಪ್ಪನ್ನು ತರಕಾರಿಯಾಗಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ.ಪಾಲಕ್ ಸೊಪ್ಪಿನಲ್ಲಿ ನಾರಿನಂಶ.ಪ್ರೋಟಿನ್.ಕಬ್ಬಿಣಾಂಶ.ಪೊಟ್ಯಾಶಿಯಮ್.ಓಮೆಗಾ 3 ಪ್ಯಾಟಿಯಾಸಿಡ್.ವಿಟಮಿನ್  'ಏ" ಮತ್ತು 'ಸಿ" ಹೇರಳವಾಗಿದೆ.ಪಾಲಕ್ ಸೊಪ್ಪಿನ ಸೇವನೆಯಿಂದ ಸೋರಿಯಾಸಿಸ್.ತುರಿಕೆ.ಒಣಚರ್ಮ.ತಲೆಕೂದಲಿನ ಸಮಸ್ಯೆಗಳಿಗೆ ಇದರ ಸೇವನೆಯಿಂದ ನಿಯಂತ್ರಿಸ ಬಹುದು.ಇದರಲ್ಲಿರುವ  ಹೇರಳವಾದ ಕಬ್ಬಿಣಾಂಶವು ರಕ್ತವ್ರುದ್ದಿಗೆ ತುಂಬ ಸಹಕಾರಿ.
ಮಣ್ಣು ಮತ್ತು ಬಿತ್ತನೆ ಕಾಲ:
ಪಾಲಕ್ ಸೊಪ್ಪಿನ ಬೆಳೆಗೆ ಚೆನ್ನಾಗಿ ನೀರು ಬಸಿದು ಹೋಗುವ.ಎಲ್ಲಾ ಗುಣಗಳ ಮಣ್ಣು ಸೂಕ್ತ.ಸಾವಯವ ಫಲವತ್ತತೆಯ ಮಣ್ಣು ಉತ್ತಮ ಪೋಶಕಾಂಶಯುಕ್ತ ಗುಣಮಟ್ಟದ ಸೊಪ್ಪಿನ್ನು ಪಡೆಯಲು ಸೂಕ್ತ.ಸಹಜವಾಗಿ ಸೆಪ್ಟೆಂಬರ್  ಇಂದ ನವೆಂಬರ್ ತಿಂಗಳ ವಾತಾವರಣ ಕಾಲಮಾನ ಈ ಬೆಳೆಗೆ ತುಂಬ ಸೂಕ್ತವಾದ ಕಾಲಮಾನ.

ಪಾಲಕ್ ಸೊಪ್ಪಿನ ತಳಿಗಳು:
1. ಆರ್ಕಾ ಅನುಪಮ: 90 ದಿವಸದ ಅವದಿಯಲ್ಲಿ 4 ಕಟಾವಿನಲ್ಲಿ ಹೆಕ್ಟೆರ್  ಗೆ 40 ಟನ್ ಸೊಪ್ಪು ಪಡೆಯಬಹುದು.
2. ಆಲ್ ಗ್ರೀನ್ : 90 ರಿಂದ 100 ದಿನ ಅವದಿಯಲ್ಲಿ 6 ರಿಂದ 7 ಕಟಾವಿಗೆ ಹೆಕ್ಟೆರ್ ಗೆ 110 ಟನ್ ಸೊಪ್ಪು ಪಡೆಯಬಹುದು.
3. ಪೂಸಾ ಜ್ಯೋತಿ: 90 ದಿನವದಿಯಲ್ಲಿ 7 ರಿಂದ 8 ಕಟಾವಿನಲ್ಲಿ ಹೆಕ್ಟೆರ್ ಗೆ 45 ಟನ್ ಇಳುವರಿ ಪಡೆಯಬಹುದು.

ಪಾಲಕ್ ಸೊಪ್ಪಿನ ಬಿತ್ತನೆ ಕ್ರಮ:
ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಸಣ್ಣ ಮಣ್ಣಾಗಿ ಮಾಡಬೇಕು.ನಂತರ ಹೆಕ್ಟೆರ್ ಗೆ 20 ರಿಂದ 25 ಟನ್ ಕೊಟ್ಟಿಗೆ ಗೊಬ್ಬರ ಬೆರೆಸಬೇಕು.ನಂತರ ಸಾರಜನಕ 125 ಕಿ.ಗ್ರಾಂ.ರಂಜಕ 100 ಕಿ.ಗ್ರಾಂ.ಪೊಟ್ಯಾಶ್ 100 ಕಿ.ಗ್ರಾಂ ಗೊಬ್ಬರವನ್ನ ಪ್ರತಿ ಹೆಕ್ಟೇರ್ ಗೆ ಸೂಚಿಸಿದ ಗೊಬ್ಬರದ ಶೇ 50 ರಷ್ಟು ಗೊಬ್ಬರವನ್ನು ಮಣ್ಣಿಗೆ ಬೆರೆಸಿ ನಂತರ 3 ಮೀ x 1 ಮೀ  ಉದ್ದ x ಅಗಲದ ಸಸಿ ಮಡಿಗಳನ್ನು ಮಾಡಿ ಹೆಕ್ಟೇರ್ ಗೆ 25 ಕಿ.ಗ್ರಾಂ ಬೀಜದಂತೆ ಸಸಿ ಮಡಿಗಳ ಮೇಲೆ ಬೀಜವನ್ನು ಚೆಲ್ಲಿ ತೆಳ್ಳಗೆ ಮಣ್ಣು ಕೊಡಬೇಕು.ನಂತರ ತುಂತುರು ನೀರಾವರಿಯಲ್ಲಿ ನೀರು ಕೊಡಬೇಕು.
ನೀರಾವರಿ ಅಂತರ ಬೇಸಾಯ:
ಬೀಜ ಮೊಳಕೆಯೊಡೆದ ನಂತರ ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಟ್ಟು ಸಸಿಮಡಿಗಳಲ್ಲಿ ಕಳೆ ನಿರ್ವಹಣೆ ಮಾಡಿ 30 ನೇ ದಿನದಲ್ಲಿ ಮೇಲೆ ಸೂಚಿಸಿದ ಸಮಮಿಶ್ರಣದ ಉಳಿದ ಶೇ 50 ಗೊಬ್ಬರವನ್ನು ನೀಡಬೇಕು.ಎರೆಜಲ.ಗೋಮೂತ್ರಗಳನ್ನು ಹಂತ ಹಂತವಾಗಿ ನೀರಾವರಿಯ ಜೊತೆ ನೀಡುವದರಿಂದ ಗುಣಮಟ್ಟದ ಪೋಶಕಾಂಷಯುಕ್ತ ಸೊಪ್ಪನ್ನು ಪಡೆಯಬಹುದು.

ಪಾಲಕ್ ಸೊಪ್ಪಿಗೆ ತಗುಲುವ ರೋಗಗಳು:
ಹೇನು.ಎಲೆ ತಿನ್ನುವ ಕೀಟ.ಸಾಮಾನ್ಯ. ಕೀಟನಾಶಕಗಳ ಸಿಂಪಡಣೆಯಿಂದ ಹತೋಟಿ ಮಾಡಬಹುದು.

ಕೊಯ್ಲು ಮತ್ತು ಇಳುವರಿ:
ಬಿತ್ತನೆ ಮಾಡಿದ 30 ನೇ ದಿನದಿಂದ ಮೊದಲ ಕೊಯ್ಲು ಪ್ರಾರಂಭವಾಗಿ 90 ನೇ ದಿನಕ್ಕೆ ಕೊಯ್ಲು ಮುಕ್ತಾಯವಾಗುತ್ತದೆ ಮೊದಲ ಕೊಯ್ಲಿ ನಿಂದ ಕೊನೆ ಕೊಯ್ಲಿನ ವರೆಗೂ 5 ರಿಂದ 6 ಬಾರಿ ಕೊಯ್ಲು ಮಾಡಬಹುದು.ಹೆಕ್ಟೇರ್ ಗೆ 10 ರಿಂದ 12 ಟನ್ ಇಳುವರಿ ಪಡೆಯಬಹುದು.

ಮಂಗಳವಾರ, ಜುಲೈ 6, 2021

ಗ್ಲಾಡಿಯೋಲಸ್ ಪುಷ್ಪ ಕ್ರುಷಿ.

ಗ್ಲಾಡಿಯೋಲಸ್ ಒಂದು ಅಲಂಕಾರಿಕ ಪುಷ್ಪ.ಮೂಲ ಇದು ಕಾಡು ಪುಷ್ಪವಾದರೂ ತಳಿ ಸಂವರ್ಧನೆಯ ನಂತರ ಇದನ್ನು ಕ್ರುಷಿ ಮಾಡಲಾಗುತ್ತಿದೆ.ಇದರ ಮೂಲ  ಇಂಡೋನೇಷಿಯಾದ ಕಾಡುಗಳು.ಇದರಲ್ಲಿ 260 ಕ್ಕೂ ಹೆಚ್ಚು ಪ್ರಭೇದಗಳು ಕಂಡು ಬಂದಿವೆ.ಇದೊಂದು ಅಲಂಕಾರಿಕ ಪುಷ್ಪ.ಸಭೆ.ಸಮಾರಂಭ.ವೇದಿಕೆ ಅಲಂಕಾರ.ಹೂ ಕುಂಡ.ಪುಷ್ಪಗುಚ್ಚ.ತೋಟಗಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಮಣ್ಣು ಮತ್ತು ಹವಾಗುಣ :
ಗ್ಲಾಡಿಯೋಲಸ್ ಬೆಳೆಗೆ ಮಣ್ಣಿನ ರಸಸಾರ 6 -7 ಇರುವದು ಸೂಕ್ತ.ಫಲವತ್ತಾದ ಕಪ್ಪು ಮತ್ತು ಕೆಂಪು ಗೋಡು ಮಣ್ಣು ಸೂಕ್ತ.ತೆಗ್ಗು ಮತ್ತು ನೀರು ನಿಲ್ಲುವ ಜಾಗ ಸೂಕ್ತವಲ್ಲ.ತಂಪಾದ ವಾತಾವರಣದಲ್ಲಿ ಸಾಧಾರಣ ಬಿಸಿಲು ಈ ಬೆಳೆಗೆ ಸೂಕ್ತ .ಅತಿ ಹೆಚ್ಚು ತಾಪಮಾನ ಈ ಬೆಳೆಗೆ ಹೊಂದುವದಿಲ್ಲ.ಈ ಬೆಳೆಯನ್ನು ಎಲ್ಲಾ ಕಾಲಮಾನದಲ್ಲಿ ಬೆಳೆಯಬಹುದಾದರು ಜೂನ್ ನಿಂದ ನವೆಂಬರ್ ವರೆಗಿನ ಕಾಲ ತುಂಬ ಸೂಕ್ತ.
ಗ್ಲಾಡಿಯೋಲಸ್ ತಳಿಗಳು :
ಗ್ಲಾಡಿಯೋಲಸ್ ಹೂವುಗಳಲ್ಲಿ ಅವುಗಳ ಗಾತ್ರ.ಬಣ್ಣ.ಆಕಾರಕ್ಕೆ ಹೊಂದುವಂತೆ ಬಹಳ ತಳಿಗಳಿವೆ ಆವುಗಳಲ್ಲಿ ಪ್ರಮುಖವಾದವು.
ವೆಡ್ಡಿಂಗ್ ಬೂಕೆ.ಅರ್ಕಾ ಗೋಲ್ಢ್.ಫ್ರೆಂಡ್ ಶಿಪ್.ಅರ್ಕಾ ನವೀನ್.ಅಮೇರಿಕನ್ ಬ್ಯೂಟಿ.ಅರ್ಕಾ ಆಯುಷ್.ಅರ್ಕಾ ಅಮರ.ಕ್ಯಾಂಡಿಮನ್.ಅರ್ಕಾ ಬಿಳಿ.ಅರ್ಕಾ ಫೆಸಿಫಿಕ್.ಅರ್ಕಾ ಧರ್ಶನ್.ಕಾಪರ್ ಕಿಂಗ್.ತ್ರಿಲೋಕ.ಮಯೂರ.ಅರ್ಜುನ.ಅರ್ಕಾ ಪೂನಮ್.ಮೆಲೋಡಿ.ಇನ್ನು ಹಲವಾರು.
ಗ್ಲಾಡಿಯೋಲಸ್ ಬೇಸಾಯ ಕ್ರಮ :
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳು ಮಾಡಿ ಹೆಕ್ಟೇರಿಗೆ 25 ಟನ್ ಕೊಟ್ಟಿಗೆ ಗೊಬ್ಬರ.ಸಾರಜನಕ 50 ಕಿ.ಗ್ರಾಂ.ರಂಜಕ 70 ಕಿ.ಗ್ರಾಂ.ಪೊಟ್ಯಾಶ್ 70 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸ ಬೇಕು.ಗಡ್ಡೆಗಳನ್ನು ಪ್ರತಿ ಸಾಲಿನ ಬದುವಿನ ಮೇಲೆ 20 ಸೆಂ.ಮೀ ಅಂತರದಲ್ಲಿ.4 ರಿಂದ 5 ಸೆಂ.ಮೀ ಆಳದಲ್ಲಿ ಊರಬೇಕು.ನಂತರ ಮಣ್ಣಿನ ಹವಾಗುಣಕ್ಕನುಗುಣವಾಗಿ ಪ್ರತಿ 4 -5 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ಅಂತರ ಬೇಸಾಯ ಮತ್ತು ಕಳೆ ನಿರ್ವಹಣೆ ನಂತರ ನಾಟಿ ಮಾಡಿದ 35 ನೇ ದಿನಕ್ಕೆ ಪ್ರತಿ ಹೆಕ್ಟೇರ್ ಗೆ 50 ಕಿ.ಗ್ರಾಂ ಸಾರಜನಕವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಿ ಕೊಡಬೇಕು.ನಂತರ ಸಸಿಗಳಿಗೆ ಆಸರೆಯಾಗಿ ಕೋಲುಗಳನ್ನು ಕೊಟ್ಟು ಕಟ್ಟಬೇಕು.
                 https://www.facebook.com/share/nKaUeLo1k6XSuYZF/?mibextid=oFDknk
ಗ್ಲಾಡಿಯೋಲಸ್ ಬೆಳೆಗೆ ತಗಲುವ ರೋಗಗಳು :
ಸೊರಗು ರೋಗ.ನುಶಿ.ಕಂದು ಕೊಳೆರೋಗ.ಎಲೆ ತಿನ್ನುವ ಹುಳು.ಬೂದಿ ರೋಗ.ಮುಂತಾದವು.ರೋಗ ಲಕ್ಷಣಗಳು ಕಂಡು ಬಂದಾಗ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಬಹುದು. 

ಕೊಯ್ಲು.ಇಳುವರಿ.ಮತ್ತು ಸಂಗ್ರಹಣೆ :
ನಾಟಿ ಮಾಡಿದ 70 ರಿಂದ 90 ದಿನಗಳಿಗೆ ಹೂ ಕೊಯ್ಲಿಗೆ ಸಿದ್ದವಾಗುತ್ತದೆ.ಒಂದು ಹೆಕ್ಟೇರ್ ಗೆ 2 ರಿಂದ 2½ ಲಕ್ಷ ಹೂವಿನ ದಂಟುಗಳು ಪಡೆಯಬಹುದು.ಜೊತೆಗೆ ಮುಂದಿನ ಬೆಳೆಗೆ  ಬೇಕಾದಂತಹ ಗಡ್ಡೆಗಳನ್ನು 2 ರಿಂದ 5 ಲಕ್ಷ ಗಡ್ಡೆ ಪಡೆಯಬಹುದು.ಹೂ ದಂಟಿನ ಉದ್ದ.ತೆನೆಯಲ್ಲಿಯ ಹೂಗಳ ಸಂಖ್ಯೆ ಆದಾರದಲ್ಲಿ ವಿಂಗಡಿಸಿ ಚಿಕ್ಕ ಚಿಕ್ಕ ಕಟ್ಟುಗಳನ್ನು ಮಾಡಿ ಸುಕ್ರೋಸ್ ಶೇ.15 ಮತ್ತು ಹೆಡ್ರಾಕ್ಸಿಕ್ವಿನೋಲಿನ್ ದ್ರಾವಣದಲ್ಲಿ ಕೊಠಡಿಯ ಶೀತ 1.7 ಡಿ.ಸೆ ಇಂದ 4.4 ಡಿ.ಸೆ ಅಲ್ಲಿ ಸಂಗ್ರಹಿಸಿ ನಂತರ ಮಾರುಕಟ್ಟೆ ಮಾಡಬಹುದು.

ಬೀಟ್ರೂಟ್ ಬೆಳೆ ಮಾಹಿತಿ.

ಬೀಟ್ರೂಟ್ ಒಂದು ಸಿಹಿಯಾದ ಕಡುಗೆಂಪು ಬಣ್ಣದ ಅಲ್ಪಾವದಿ ತರಕಾರಿ ಬೆಳೆಯಾಗಿದ್ದು ಇದು ನಮ್ಮ ದೇಹಕ್ಕೆ ಬೇಕಾದ 'ಸಿ" ಅನ್ನಾಂಗ ಮತ್ತು ಹೇರಳವಾದ ಖನಿಜಾಂಶಗಳನ್ನು ಒದಗಿಸುತ್ತದೆ.
ಬೀಟ್ರೂಟ್ ಬೆಳೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಹಾಗೂ ಸವಳು ಮಣ್ಣಿನಲ್ಲಿ ಬೆಳೆಯಬಹುದು.ಚಳಿಗಾಲದ ಬೆಳೆಯಲ್ಲಿ ಒಳ್ಳೆಯ ಗುಣಮಟ್ಟದ ಗೆಡ್ಡೆಗಳು ಹಾಗು ಇಳುವರಿ ಪಡೆಯಬಹುದು.

ಬೀಟ್ರೂಟ್ ಬಿತ್ತನೆ ಕಾಲ : 
ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಹಾಗು ಮಳೆಗಾಲದ ಬೆಳೆಯಾಗಿ ಜೂನ್ - ಜುಲೈ ಅಲ್ಲಿ ಬಿತ್ತಬಹುದು.
ತಳಿಗಳು : ಕ್ರಮ್ಸನ್ ಗ್ಲೋಬ್.ಡೆಟ್ರಾಯಿಟ್ ಡಾರ್ಕ್ ರೆಡ್.ಹಾಗು ಮುಂತಾದವು.
ಬೀಟ್ರೂಟ್ ಬಿತ್ತನೆ : 
ಭೂಮಿಯನ್ನು ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ ತಳಿಗಳಿಗೆ ಅನುಗುಣವಾಗಿ 30 ರಿಂದ 45 ಸೆಂ.ಮೀ ಅಂತರದ ಸಾಲು ಮಾಡಿ ಸಾಲಿನಲ್ಲಿ 20 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ.ನಂತರ ಸಾರಜನಕ 75 ಕಿ.ಗ್ರಾಂ. ರಂಜಕ 100 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣ ಮಾಡಿದ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸಿ ನಂತರ ಸಾಲಿನ ಒಂದು ಬದುವಿನ ಮೇಲೆ 15 ರಿಂದ 20 ಸೆ.ಮೀ ಅಂತರದಲ್ಲಿ ಬೀಜವನು ಊರಿಸಬೇಕು.ಬಿತ್ತಿದ 4 ವಾರಗಳ ನಂತರ ಹೆಚ್ಚುವರಿ ಸಸಿಗಳನ್ನು ಕೀಳಿಸಿ ಜೊತೆಗೆ ಕಳೆ ನಿರ್ವಹಣೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.
ನೀರಾವರಿ : ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 5 ರಿಂದ 6 ದಿನಕ್ಕೊಮ್ಮೆ ನೀರು ಬಿಡಬೇಕು.
ಬೀಟ್ರೂಟ್ ಬೆಳೆಯ ರೋಗಗಳು : 
ಹೇನು.ಜಿಗಿ ಹುಳು.ಎಲೆಚುಕ್ಕೆ ರೋಗ.ಗರಿ ತಿನ್ನುವ ಹುಳು.ರೋಗ ಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಇಳುವರಿ : ಬಿತ್ತನೆ ಮಾಡಿದ 3 ತಿಂಗಳ ನಂತರ ಕಟಾವಿಗೆ ಬರುತ್ತದೆ.ಪ್ರತಿ ಹೆಕ್ಟೇರ್ ಗೆ 20 ರಿಂದ 30 ಟನ್ ಇಳುವರಿ ಪಡೆಯ ಬಹುದು.

ಶುಕ್ರವಾರ, ಜುಲೈ 2, 2021

ಸೇವಂತಿಗೆ ಹೂ ಬೆಳೆ ಮಾಹಿತಿ.


ಸೇವಂತಿಗೆ ಆಸ್ಟರೇಸಿಯಾ ಕುಟುಂಬದ ಕ್ರಿಸ್ಯಾಂಥಮಮ್ ಜಾತಿಯ  ಹೂವಿನ ಸಸ್ಯ. ಅವು ಏಷ್ಯಾ  ಮತ್ತು ಈಶಾನ್ಯ  ಯುರೋಪ್ ನ ಸ್ಥಳಿಯ ಸಸ್ಯ.ಮಾನವ ಕ್ರುಷಿ ಮಾಡಿದ ಮೊದಲ ಹೂ ಬೆಳೆ ಎಂದೇ ಖ್ಯಾತಿ ಪಡೆದ ಸೇವಂತಿಗೆ ಹೂ ಒಂದು ಪ್ರಮುಖ ವಾಣಿಜ್ಯ ಪುಷ್ಪ ಬೆಳೆ.ಈ ಹೂವನ್ನು ಮಾಲೆ.ಬಿಡಿ ಹೂ.ಅಲಂಕಾರಿಕ ವಸ್ತುವಾಗಿ ಪುಷ್ಪ ಗುಚ್ಚ ಮಾಡಲು.ವೇದಿಕೆ ಅಲಂಕಾರಕ್ಕೆ.ಧಾರ್ಮಿಕ ಕಾರ್ಯ.ಪೂಜೆ ಪುನಸ್ಕಾರಗಳಲ್ಲಿ ಹೇರಳವಾಗಿ ಬಳಸುತ್ತಾರೆ.
ಮಣ್ಣು ಮತ್ತು ಹವಾಗುಣ :ಭೂಮಿಯ ರಸಸಾರ 6 ರಿಂದ 7 ಇರುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಸೂಕ್ತ.ನೀರು ನಿಲ್ಲುವ ಜಾಗ ಈ ಬೆಳೆಗೆ ಯೋಗ್ಯವಲ್ಲ.ಈ ಬೆಳೆಗೆ ಗಿಡಗಳ ಬೆಳವಣಿಗೆಗೆ ಹಗಲು ದೊಡ್ಡದಿರುವ ಹಾಗು ಹೂ ಬಿಡಲು ರಾತ್ರಿ ದೊಡ್ಡದಿರುವ ಕಾಲ ಸೂಕ್ತ ಅಂದರೆ ಈ ಬೆಳೆಯನ್ನು ಮೇ - ಜೂನ್  ನಡುವೆ ಮಾಡುವದು ಸೂಕ್ತ.
ಸೇವಂತಿಗೆ ತಳಿಗಳು :
ಹಳದಿ .ಬಿಳಿ.ಕೆಂಪು.ಬಣ್ಣದ ತಳಿಗಳು ವಾಣಿಜ್ಯ ಮಟ್ಟದ ಕ್ರುಷಿಗೆ ಸೂಕ್ತ.ಆದರೂ ಇತ್ತೀಚೆಗೆ ಇತರೆ ಬಣ್ಣದ ತಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಹಳದಿ ತಳಿಗಳು : 
ಆರ್ಕಾ ಸ್ವರ್ಣ.ಎಲ್ಲೊ ಗೋಲ್ಢ್.ವಾಸಂತಿಕ.ಕರ್ನೂಲ್.ಜಯಂತಿ.ಇಂದಿರಾ.ಬಸಂತಿ.ಕಸ್ತೂರಿ.ಉಷಾಕಿರಣ.ರಾಣಿ.ಸಾರವಾಳ.ದುಂಡಿ.ಮುಂತಾದವು.

ಕೆಂಪು ತಳಿಗಳು :
ರವಿಕಿರಣ.ರೆಡ್ ಗೋಲ್ಢ್.ಮುಂತಾದವು.

ಬಿಳಿ ತಳಿಗಳು :
ಹಿಮಾನಿ.ರೀಟಾ.ಕೀರ್ತಿ.ಚಂದ್ರಿಕಾ.ರಾಜ.ಜೋತ್ಸ್ನ್.ಮೀರಾ. ಮುಂತಾದವು.
ಸೇವಂತಿಗೆ ಸಸ್ಯಾಭಿವ್ರುದ್ದಿ :
  • ಕಂದುಗಳು ಹಾಗು ಮ್ರುದುಕಾಂಡದ ತುಂಡುಗಳು ನಾಟಿಗೆ ಉಪಯೋಗಿಸುವದು ಉತ್ತಮ.ಕಡ್ಡಿಯ ತುಂಡುಗಳು ಬಳಸುವ ಮೊದಲು ಮೀಥಾಕ್ಸಿ ಈಥ್ಯೆಲ್ ಕ್ಲೋರೆಡ್ 2 ಗ್ರಾಂ  ಪ್ರತಿ ಲೀ ನೀರಿಗೆ ಬೆರೆಸಿ ನಾಟಿ ಮಾಡುವ ಕಡ್ಡಿಗಳ ತಳಬಾಗವನ್ನು ಅದರಲ್ಲಿ ಅದ್ದಿ ನಾಟಿಗೆ ಬಳಸುವದರಿಂದ ಸಸ್ಯಗಳ ಬೇರು ಬೆಳವಣಿಗೆಗೆ ಪ್ರಚೊದನೆಯಾಗುತ್ತದೆ
  • ಗ್ಲಾಡಿಯೋಲಸ್ ಪುಷ್ಪ ಕ್ರುಷಿ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಸೇವಂತಿಗೆ ನಾಟಿ ಪದ್ದತಿ :
ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಿ 30 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಹೆಕ್ಟೆರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ.ನಂತರ ಪ್ರತಿ ಹೆಕ್ಟೇರಿಗೆ ಸಾರಜನಕ 33 ಕಿ.ಗ್ರಾಂ.ರಂಜಕ 150 ಕಿ.ಗ್ರಾಂ.ಪೊಟ್ಯಾಶ್ 100 ಕಿ.ಗ್ರಾಂ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಬಿತ್ತಿ ಮಣ್ಣಲ್ಲಿ ಬೆರೆಸಿ ನೀರು ಹಾಯಿಸಿ.ನಂತರ ಸಾಲುಗಳ ಒಂದು ಬದುವಿನ ಮೇಲೆ 30 ಸೆಂ.ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ.
ಕಳೆ ಮತ್ತು ನೀರು ನಿರ್ವಹಣೆ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ ಪ್ರತಿ 4 -ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಅಂತರ ಬೇಸಾಯದಿಂದ ಕಳೆ ನಿರ್ವಹಣೆ ಮಾಡಿ.ಮೇಲುಗೊಬ್ಬರವಾಗಿ ನಾಟಿ ಮಾಡಿದ 30 ದಿನಕ್ಕೆ ಹೆಕ್ಟೇರಿಗೆ 45 ಕಿ.ಗ್ರಾಂ ಸಾರಜನಕವನ್ನು ನೀಡಬೇಕು.ಇದಾದ ಮತ್ತೊಂದು ತಿಂಗಳ ನಂತರ ಮತ್ತೊಮ್ಮೆ 45 ಕಿ.ಗ್ರಾಂ ಸಾರಜನಕ ನೀಡಬೇಕು.ನಾಟಿ ಮಾಡಿದ 30 ದಿನದ ನಂತರ ಸಸಿಗಳ ಕುಡಿ ಚಿವುಟಿ ಜಿಬ್ಬರ್ಲಿಕ್ ಓಷದವನ್ನು ಪ್ರತಿ 10 ಲೀ ನೀರಿಗೆ 1 ಗ್ರಾಂ ನಂತೆ ಬೆರೆಸಿ ಸಿಂಪಡಿಸುವದರಿಂದ ಸಸಿಗಳು ಹೆಚ್ಚು ಕವಲೊಡೆದು ಹೆಚ್ಚು ಹೂ ಬಿಡುವದಕ್ಕೆ ಸಹಕಾರಿಯಾಗುತ್ತದೆ.
ಸೇವಂತಿಗೆ ಬೆಳೆಗೆ ತಗುಲುವ ರೋಗಗಳು :
ಸಸಿ ಹೇನು.ಥ್ರಿಪ್ಸ್.ಮೊಗ್ಗು ಕೊರೆಯುವ ಹುಳು.ತುಕ್ಕು ರೋಗ.ಬೂದಿರೋಗ.ಬೇರುಕೊಳೆ ರೋಗ.ಹಳದಿ ನಂಜು.ಎಲೆ ಚುಕ್ಕೆ ರೋಗಗಳು ಕಂಡುಬಂದ ಸಂದರ್ಭದಲ್ಲಿ ತಙ್ನರ ಸಲಹೆ ಮೇರೆಗೆ ಅವುಗಳನ್ನು ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯ ಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 90 ದಿನಗಳಿಂದ ಹೂ ಬರಲು ಶುರುವಾಗಿ ಮುಂದೆ 45 ರಿಂದ 55 ದಿನದವರೆಗು ಹೂ ಕೊಡುತ್ತವೆ.ಪ್ರತಿ ಹೆಕ್ಟೆರ್ ಗೆ 10 ರಿಂದ 15 ಟನ್ ಇಳುವರಿ ಪಡೆಯಬಹುದು.

ಬುಧವಾರ, ಜೂನ್ 30, 2021

ಕ್ಯಾಪ್ಸಿಕಂ.ದೊಣ್ಣೆಮೆಣಸಿನ ಮಾಹಿತಿ.

ದೊಣ್ಣೆ ಮೆಣಸಿನ ಮೂಲ ತವರು ಅಮೇರಿಕ.ನೂರಾರು ವರ್ಷಗಳಿಂದಲು ಅಮೆರಿಕದ ಸಮಶೀತೋಷ್ಣ ವಲಯದ ಪ್ರಧೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು.ಇದನ್ನು ಸಿಹಿ ಮೆಣಸು ಎಂದು ಸಹ ಕರೆಯುತ್ತಾರೆ ಇತ್ತೀಚೆಗೆ ಇದನ್ನು ಎಲ್ಲಾ ಪ್ರಧೇಶಗಳಲ್ಲು ಯಶಸ್ವಿ ಬೆಳೆ ಬೆಳೆಯುತ್ತಿದ್ದಾರೆ.ಕ್ಯಾಪ್ಸಿಕಂ ಅನ್ನು ತರಕಾರಿಯಾಗಿ.ಮಸಾಲೆ ಪಧಾರ್ಥವಾಗಿ ಮತ್ತು ಕೆಲವೊಂದು ಓಷದ ತಯಾರಿಕೆಯಲ್ಲುಿ ಬಳಸುತ್ತಾರೆ.ಇದರಲ್ಲಿ ಮನುಷ್ಯನ ದೇಹಕ್ಕೆ ಅತ್ಯಾವಶ್ಯಕವಾದ ವಿಟಮಿನ್ 'ಎ" ಮತ್ತು 'ಸಿ" ಹೇರಳವಾಗಿ ದೊರೆಯುತ್ತದೆ.
ಮಣ್ಣು ಮತ್ತು ಬಿತ್ತನೆ ಕಾಲ :
ದೊಣ್ಣೆ ಮೆಣಸಿನ ಬೆಳೆಗೆ ಮಣ್ಣಿನ ರಸಸಾರ 5.4 ರಿಂದ 6.8 ಇರುವ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪು ಗೋಡು ಮಣ್ಣು ಮತ್ತು ಮದ್ಯಮ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯ ಬಹುದು.ತೆಗ್ಗು.ಸವಳು ಮಣ್ಣು ಈ ಬೆಳೆಗೆ ಸೂಕ್ತವಲ್ಲ.ಈ ಬೆಳೆಯನ್ನು ಜುಲೈ - ಆಗಸ್ಟ್. ಮತ್ತು ಅಕ್ಟೋಬರ್ - ನವೆಂಬರ್ ನಾಟಿ ಮಾಡಲು ಸೂಕ್ತ ಕಾಲ.
 ದೊಣ್ಣೆ ಮೆಣಸಿನ ತಳಿಗಳು :
ಆರ್ಕಾ ಮೋಹಿನಿ.ಆರ್ಕಾ ಬಸಂತ್.ಆರ್ಕಾ ಗೊರವ್.ಯೆಲ್ಲೊ ವಂಡರ್.ದಾರವಾಡ ಲೋಕಲ್.ಡಿ ಎಂ ಸಿ - 14.ಅಪೂರ್ವ.ಕ್ಯಾಲಿಫೊರ್ನಿಯಾ ವಂಡರ್.ಮುಂತಾದವು.
ನಾಟಿ ವಿಧಾನ :
ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ 60 ಸೆಂ.ಮೀ.ಅಂತರದ ಸಾಲುಗಳು ಮಾಡಿ ಪ್ರತಿ ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಸಾಲಿನಲ್ಲು ಚೆಲ್ಲಿ.ಸಾರಜನಕ 150 ಕಿ.ಗ್ರಾಂ. ರಂಜಕ 75 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣದ ಶೇ 50 ರಷ್ಟು ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ.ತೆಳುವಾಗಿ ನೀರು ಕೊಟ್ಟು.ಸಾಲಿನ ಹೊರ ಮಗ್ಗುಲಿನ ಎತ್ತರದ ದಿಣ್ಣೆಯ ಮೇಲೆ 45 ಸೆಂ.ಮೀ ಅಂತರದಲ್ಲಿ ಸಸಿ ನಾಟಿ ಮಾಡಬೇಕು.ಟ್ರೇ ಮತ್ತು ಕೊಕೊ ಪಿಟ್ ನಲ್ಲಿ ಬೆಳೆಸಿದ ಸಸಿಗಳು ನಾಟಿಗೆ ತುಂಬಾ ಸೂಕ್ತ.
ಅಂತರ ಬೇಸಾಯ ಮತ್ತು ನೀರಾವರಿ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 3 ರಿಂದ 4 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ನಾಟಿ ಮಾಡಿದ 2 ವಾರದ ನಂತರ ಎಡೆಕುಂಟೆ ಹೊಡೆದು ಕಳೆ ನಿರ್ವಹಣೆ ಮಾಡಿ ಮೇಲೆ ತಿಳಿಸಿದ ಗೊಬ್ಬರದ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಬೇಕು.3 ನೆ ವಾರದಿಂದ ನಾಲ್ಕನೆ ವಾರದಲ್ಲಿ ಬರುವ ಹೂವುಗಳನ್ನು ಚಿವುಟುವದರಿಂದ ಗಿಡಗಳ ಬೆಳವಣಿಗೆಗೆ ಸಹಕರಿಸ ಬೇಕು.ಇದರಿಂದ ಉತ್ತಮ ಗಾತ್ರದ ಗುಣಮಟ್ಟದ ಕಾಯಿಗಳನ್ನು ಮುಂದೆ ಪಡೆಯಲು ಸಹಕಾರಿಯಾಗುತ್ತದೆ.
ರೋಗಗಳು :
ಹೇನು.ಥ್ರಿಪ್ಸ್ ನುಸಿ.ಜೇಡ ನುಸಿ.ಹಣ್ಣು ಕೊರೆಯುವ ಹುಳು.ಸಸಿ ಸೊರಗು ರೋಗ.ಚಿಬ್ಬು ರೋಗ.ಬೂದಿರೋಗ.ಎಲೆ ಮುಟುರು ರೋಗ.ಎಲೆ ಚುಕ್ಕೆ ರೋಗ.ದುಂಡಾಣು ರೋಗ.ಈ ರೋಗ ಲಕ್ಷಣ ಸಮಯದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
  ದೊಣ್ಣೆ ಮೆಣಸು ನಾಟಿ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಪ್ರಾರಂಭಿಸುತ್ತದೆ ಕಾಯಿಗಳು ಪೂರ್ಣ ಕೆಂಪು ಬಣ್ಣಕ್ಕೆ ತಿರುಗುವ ಮೊದಲೆ ಹಸಿರು ಬಣ್ಣದ ಬಲಿತ ಕಾಯಿ ಕೊಯ್ಲಿಗೆ ಸೂಕ್ತ.ಸಂಕರಣ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 25 ರಿಂದ 30 ಟನ್ ಇಳುವರಿ ಮತ್ತು ಇತರೆ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 10 ರಿಂದ 12 ಟನ್ ಇಳುವರಿ ಪಡೆಯಬಹುದು.

ಮಲ್ಲಿಗೆ ಹೂವಿನ ಕ್ರುಷಿ.

ಮಲ್ಲಿಗೆಯು 'ಒಲಿಯೇಸಿ" ಕುಟುಂಬದ ಜಾಸ್ಮಿನಂ ಉಪವರ್ಗಕ್ಕೆ ಸೇರಿದ ಬಳ್ಳಿ ಇಲ್ಲ ಪೊದೆ ಜಾತಿಗೆ ಸೇರಿದ ಸಸ್ಯ ನಮ್ಮ ದೇಶದಲ್ಲಿ 40 ಕ್ಕು ಹೆಚ್ಚು ಪ್ರಬೇದಗಳಿದ್ದರು ವಾಣಿಜ್ಯಿಕ ದ್ರುಷ್ಟಿಯಿಂದ ನಾಲ್ಕು ತಳಿಗಳು ಮಾತ್ರ ಮುಖ್ಯವಾದವು.ಹೂವುಗಳನ್ನ ಮುಡಿಯಲು.ಧಾರ್ಮಿಕ ಆಚರಣೆಗಳಿಗೆ.ಸಬಾಂಗಣ ಅಲಂಕಾರಕ್ಕೆ.ಜೊತೆಗೆ ಸುಗಂಧ ದ್ರವ್ಯ ತಯಾರಿಕೆಗೆ ಬಳಸಬಹುದು.
ಹವಾಗುಣ.ಮಣ್ಣು.ನಾಟಿಯ ಕಾಲ : 
ಮಲ್ಲಿಗೆ ಕ್ರುಷಿಗೆ ಶುಷ್ಕ ಆರ್ದ್ರತೆ ಇಂದ ಕೂಡಿದ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನ ರಸಸಾರ 5.5 ರಿಂದ 6.5 ಇರುವ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ.ಜೂನ್ - ಜುಲೈ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ನಾಟಿಗೆ ಸೂಕ್ತ ಕಾಲ.
ತಳಿಗಳು :
ಆರ್ಕಾ ಸುರಭಿ.ಕಾಕಡಾ ಮಲ್ಲಿಗೆ.ಜಾಜಿ ಮಲ್ಲಿಗೆ.ದುಂಡು ಮಲ್ಲಿಗೆ.ಉಡುಪಿ ಮಲ್ಲಿಗೆ.ವಸಂತ ಮಲ್ಲಿಗೆ.ಮತ್ತು 'ಸಿ" 'ಓ"-1ಪಿಚ್ಚಿ.ಮುಂತಾದವು.
ನಾಟಿ ವಿಧಾನ :
ಭೂಮಿಯ ಆಳ ಉಳುಮೆಯ ನಂತರ.
ಕಾಕಡಾ ; 1.2*1.2 ಮೀ ಅಂತರ.6900 ಸಸಿ.
ದುಂಡು ಮಲ್ಲಿಗೆ ; 1.5*1.5 ಮೀ.4400 ಸಸಿ.
ಜಾಜಿ ಮಲ್ಲಿಗೆ ; 2 * 1.5 ಮೀ.3300 ಸಸಿ.
ಮೇಲ್ಕಂಡ ಅಳತೆಯಲ್ಲಿ ಗುಣಿಗಳನ್ನು ಮಾಡಿ ಅದರಲ್ಲಿ ಪ್ರತಿ ಗುಣಿಗೆ 20 ಕೆ ಜಿ ಕೊಟ್ಟಿಗೆ ಗೊಬ್ಬರ ಅಥವ 2 ರಿಂದ 5 ಕೆ ಜಿ ಎರೆಗೊಬ್ಬರದ ಜೊತೆ ಎಲೆಗೊಬ್ಬರ.ಬೇವಿನ ಹಿಂಡಿ.ಜೊತೆಗೆ ಮೇಲ್ಮಣ್ಣನ್ನು ಬೆರೆಸಿ ಎರಡು ವಾರ ಕೊಳೆಯಲು ಬಿಡಬೇಕು.ನಂತರ ಬಲಿತ ಬಳ್ಳಿ ಅಥವ ಗಿಡದಿಂದ ಸಸಿ ಮಡಿಯಲ್ಲಿ ಬೆಳೆಸಿದ ಬೇರಿನ ಕಡ್ಡಿಗಳನ್ನು ಪ್ರತಿ ಗುಣಿಯಲ್ಲು ನಾಟಿ ಮಾಡಿ ನೀರು ಬಿಡಬೇಕು.
ನಾಟಿ ಮಾಡಿದ ನಂತರ ಕಾಲ ಕಾಲಕ್ಕೊಮ್ಮೆ ಗುಣಿ ಸುತ್ತು ಮಾಡಿ ಕಳೆ ನಿರ್ಮೂಲನೆ ಮಾಡಬೇಕು.
ಗಿಡಗಳ ವಯಸ್ಸಿಗನುಗುಣವಾಗಿ ಪ್ರತಿ ಗಿಡಗಳಿಗೂ ಸಾರಜನಕ 120 ಗ್ರಾಂ.ರಂಜಕ 250 ಗ್ರಾಂ.ಪೊಟ್ಯಾಶ್ 250 ಗ್ರಾಂ ಮಿಶ್ರಣದ ಗೊಬ್ಬರವನ್ನು ನಾಲ್ಕು ಭಾಗದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಗೊಬ್ಬರ ನೀಡಬೇಕು.
ಪ್ರೋನಿಂಗ್ ;
 ಕಾಕಡಾವನ್ನು ಮಾರ್ಚ್ - ಏಪ್ರಿಲ್ ನಡುವೆ.
ದುಂಡುಮಲ್ಲಗೆಯನ್ನು ಡಿಸೆಂಬರ್ - ಜನವರಿ ನಡುವೆ.
ಜಾಜಿ ಮಲ್ಲಗೆಯನ್ನು ಡಿಸೆಂಬರ್ - ಜನವರಿ ನಡುವೆ.
ಪ್ರೋನಿಂಗ್ ಮಾಡುವದರಿಂದ ಗಿಡಗಳ ಆಕಾರ.ಗಾತ್ರ.ರಚನೆಯನ್ನು ನಿರ್ವಹಿಸುವದರಿಂದ ಗಿಡಗಳು ಹೆಚ್ಚು ಚಿಗುರೊಡೆದು ಹೂ ಬಿಡಲು ಸಹಕಾರಿ ಆಗುತ್ತದೆ.
ರೋಗಗಳು :
ಮೊಗ್ಗು ಮತ್ತು ಕುಡಿ ಕೊರಕ.ಎಲೆ ತಿನ್ನುವ ಹುಳು.ಬಿಳಿ ನೊಣ.ಹಿಟ್ಟು ತಿಗಣೆ.ನುಸಿ.ಎಲೆ ಚುಕ್ಕೆ ರೋಗ.ಸರಗು ರೋಗ.ತುಕ್ಕು ರೋಗ.ಬೂದಿ ರೋಗ.ಬೇರು ಗಂಟು ರೋಗ.ಈ ರೋಗ ಲಕ್ಷಣ ಕಂಡು ಬಂದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸುವದರಿಂದ ಉತ್ತಮ ಫಸಲು ದೊರಕುವದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 6 ತಿಂಗಳ ನಂತರ ಹೂ ಬಿಡಲು ಪ್ರಾರಂಬಿಸುತ್ತವೆ.ಕಾಲ ಕಳೆದಂತೆ 3 ವರ್ಷದ ನಂತರ ಗರಿಷ್ಟ ಇಳುವರಿ ಶುರುವಾಗುತ್ತದೆ.12 ರಿಂದ 15 ವರ್ಷದ ವರೆಗೂ ಇಳುವರಿ ಪಡೆಯಬಹುದು.ಸಾಮಾನ್ಯವಾಗಿ ಹೆಕ್ಟೆರ್ ಗೆ 8 ರಿಂದ 10 ಟನ್ ಇಳುವರಿ ಪಡೆಯಬಹುದು.


ಗುಲಾಬಿ ಕ್ರುಷಿ.

ಗುಲಾಬಿ ಹೂವಿನ ಕ್ರುಷಿ ಒಂದು ಲಾಭದಾಯಕ ಹೂವಿನ ಬೆಳೆ.ಇಂದು ಗುಲಾಬಿ ಹೂವನ್ನು ಶುಭ ಸಮಾರಂಭ.ಧಾರ್ಮಿಕ ಕಾರ್ಯಕ್ರಮ.ಹಾಗೂ ಸೊಂದರ್ಯ ವರ್ದಕ ಸಾಧನಗಳಲ್ಲಿ.ಸುಗಂದ ದ್ರವ್ಯ ತಯಾರಿಕೆಯಲ್ಲಿ.ಯಥೇಚ್ಛವಾಗಿ ಬಳಸುತ್ತಾರೆ.ಇದನ್ನು ಆಹಾರ ಪಧಾರ್ಥಗಳಲ್ಲು ಬಳಸುವದುಂಟು ಪಾನಿಯಗಳು.ಪಾಕಗಳು.ಜಾಮ್ ತಯಾರಿಕೆಯಲ್ಲಿ.ಟೀ ಜೊತೆಗೂ ಸೇವಿಸ ಬಹುದು.ಇದರಲ್ಲಿ ಮನುಷ್ಯರ ದೇಹಕ್ಕೆ ಅಗತ್ಯವಿರುವ ವಿಟಮಿನ್ 'ಸಿ" ಹೇರಳವಾಗಿ ಲಭ್ಯವಿರುತ್ತದೆ.ಇದುವರೆಗು ಗುಲಾಬಿಯಲ್ಲಿ ನೂರಕ್ಕು ಅಧಿಕ ತಳಿಗಳು ಪತ್ತೆಯಾಗಿವೆ.
ಮಣ್ಣು ಮತ್ತು ಹವಾಗುಣ : 
ಗುಲಾಬಿ ಕ್ರುಷಿಗೆ ಮಣ್ಣಿನ ರಸ ಸಾರ 5.3 ರಿಂದ 5.6 ಉತ್ತಮ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಗೋಡು ಮಣ್ಣು ಉತ್ತಮ.

ಗುಲಾಬಿ ನಾಟಿಯ ಕಾಲ : 
ಈ ಬೆಳೆಯು ಸಮಶೀತೋಷ್ಣ ವಲಯದಲ್ಲಿ ಚೆನ್ನಾಗಿ ಬರುವದರಿಂದ ಇದನ್ನು ಜೂನ್ ಹಾಗು ಅಕ್ಟೊಬರ್ ನಲ್ಲಿ ನಾಟಿ ಮಾಡುವದು ಉತ್ತಮ.ಅತಿಯಾದ ಬಿಸಿಲು ಈ ಬೆಳೆಗೆ ಸೂಕ್ತವಲ್ಲ.
ಗುಲಾಬಿ ತಳಿಗಳು :
ಕೆಂಪು : ಆರ್ಕಾ ಪರಿಮಳ.ಸಿಂದೂರ.ರಕ್ತಗಂದ.ಸೋಫಿಯಾ ಲಾರೆನ್ಸ.ಕ್ವಿನ್ ಎಲಿಜಬೆತ್.ಗ್ಲೆಡಿಯೆಟರ್.ಮಾಂಟೆಜುಮಾ.ಮುಂತಾದವು
ಹಳದಿ :ಪೂಸಾ ಸೋನಿಯಾ.ಗೋಲ್ಡನ್ ಟಯ್ಮ್ಸ.ಮುಂತಾದವು.
ಮಿಶ್ರಬಣ್ಣ : ಟಾಟಾ ಸೆಂಟಿನರಿ.ಡಬಲ್ ಡಿಲೆಟ್.ಅಮೆರಿಕನ್ ಹೆರಿಟೇಜ್.ಮುಂತಾದವು.
ಗುಲಾಬಿ ನಾಟಿ ವಿಧಾನ :
 ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಮೊದಲು 45*45*45 (ಉದ್ದ.ಅಗಲ.ಆಳ) ಗುಣಿಗಳನ್ನ 60*60.ಅಥವ 75*75.ಅಥವ 90*90 ಸೆಂ.ಮೀ ಅಂತರದಲ್ಲಿ ಗುಣಿಗಳನ್ನ ತೆಗೆದು ಪ್ರತಿ ಗುಣಿಗೂ 2 ಕೆ ಜಿ ಕೊಟ್ಟಿಗೆ ಗೊಬ್ಬರ ಮೇಲ್ಮಣ್ಣು ಮತ್ತು ಬೇವಿನ ಹಿಂಡಿ ಅಥವ ಪ್ಯೂರೆಟ್ ಮಿಶ್ರಣ ಮಾಡಿ ಕಸಿ ಮಾಡಿದ ಗಿಡಗಳನ್ನು 5 ರಿಂದ 10 ಸೆಂ.ಮಿ.ಮೇಲ್ಮಣ್ಣಿಲ್ಲಿ ಇರುವಂತೆ ನಾಟಿ ಮಾಡಬೇಕು.ಪ್ರತಿ ಹೆಕ್ಟೆರ್ ಗೆ ಮೇಲೆ ತಿಳಿಸಿದ ಅಳತೆಗಳಿಗೆ ಅನುಗುಣವಾಗಿ 12 ಸಾವಿರದಿಂದ 25 ಸಾವಿರ ಸಸಿಗಳು ಬೇಕಾಗುತ್ತವೆ.ನಾಟಿ ಮಾಡಿದ ತಕ್ಷಣ ಸಸಿಗಳಿಗೆ ನೀರು ಕೊಟ್ಟು ಕಳೆ ನಿರ್ವಹಣೆ ಮಾಡುತ್ತಿರಬೇಕು.
ಗುಲಾಬಿಯ ಪ್ರೊನಿಂಗ್ ವಿಧಾನ : 
ಗುಲಾಬಿ ಗಿಡಗಳನ್ನು ವರ್ಷದಲ್ಲಿ ಎರಡು ಬಾರಿ ಪ್ರೋನಿಂಗ್ ಮಾಡುವದರಿಂದ ಅವು ಚೆನ್ನಾಗಿ ಹರೆ ಒಡೆಯುತ್ತವೆ ಇದರಿಂದ ಅವುಗಳ ಆಕಾರ ಮತ್ತು ಗಾತ್ರವನ್ನು ನಿಯಂತ್ರಿಸುವ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು.ಪ್ರೋನಿಂಗ್ ಮಾಡುವ 15 ದಿನ ಮೊದಲು ನೀರನ್ನು ನಿಲ್ಲಿಸುವದು ತುಂಬಾ ಅವಶ್ಯಕ.ಮೆ-ಜೂನ್  ಮತ್ತು ಅಕ್ಟೋಬರ್ - ನವೆಂಬರ್ ಪ್ರೋನಿಂಗ್ ಮಾಡಲು ಸೂಕ್ತ ಸಮಯ.
ಪೋಶಕಾಂಶ ಮತ್ತ ನೀರಿನ ನಿರ್ವಹಣೆ :
ಪ್ರತಿ ವರ್ಷಕ್ಕೊಮ್ಮೆ ಪ್ರತಿ ಗಿಡಗಳಿಗೆ 2 ಕೆ ಜಿ ಕೊಟ್ಟಿಗೆ ಗೊಬ್ಬರದ ಜೊತೆ 10 ಗ್ರಾಂ.ಸಾರಜನಕ.10 ಗ್ರಾಂ ರಂಜಕ.15 ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಎರಡು ಕಂತಿನಲ್ಲಿ ಪ್ರೋನಿಂಗ್ ಮಾಡುವ ಮೊದಲು ಮತ್ತು ಪ್ರೋನಿಂಗ್ ಮಾಡಿದ 1½ ತಿಂಗಳ ನಂತರ ಕೊಡುವದು ಸೂಕ್ತ.ನೀರನ್ನು ಸ್ಥಳಿಯ ಹವಾಗುಣ ಮತ್ತು ಮಣ್ಣಿನ ಗುಣಗಳಿಗೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀಡುವದು ಉತ್ತಮ.

ಗುಲಾಬಿ ಬೆಳೆಗೆ ತಗುಲುವ ರೋಗಗಳು :
ಗೆದ್ದಲು.ಥ್ರಿಪ್ಸ್.ಹೇನು.ಹೂ ತಿನ್ನುವ ಕೀಟ.ಜೇಡ.ಕಪ್ಪು ಎಲೆ ಚುಕ್ಕೆ ರೋಗ.ಬೂದಿ ರೋಗ.ಹರೆ ಒಣಗುವ ರೋಗ.ಈ ಎಲ್ಲಾ ರೋಗ ಲಕ್ಷಣಗಳು ಕಂಡು ಬಂದಾಗ ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಗುಲಾಬಿ ಕೊಯ್ಲು ಮತ್ತು ಇಳುವರಿ :
ಪ್ರೋನಿಂಗ್ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಶುರುವಾಗುತ್ತದೆ.ಬೆಳಿಗ್ಗೆ ಅಥವ ಸಂಜೆಯ ಸಮಯದಲ್ಲಿ ಉದ್ದನೆಯ ಕಡ್ಡಿಯ ಜೊತೆ ಕೊಯ್ಲು ಮಾಡುವದು ಸೂಕ್ತ.ಉತ್ತಮ ಗುಣಮಟ್ಟದ ಹೂ ಪಡೆಯಲು ಹೆಚ್ಚಿನ ಮೊಗ್ಗು ಇದ್ದಲ್ಲಿ ಕೆಲವನ್ನು ಉಳಿಸಿ ಉಳಿದವನ್ನು ಚಿವುಟಿ ಹಾಕಬೇಕು.ಒಂದು ಹೆಕ್ಟೆರ್ ಪ್ರದೇಶದಿಂದ ಉತ್ತಮ ನಿರ್ವಹಣೆಯಲ್ಲಿ 2.5 ರಿಂದ 3.5 ಲಕ್ಷ ಹೂವುಗಳನ್ನು ಪಡೆಯಬಹುದು.

ಗುರುವಾರ, ಜೂನ್ 24, 2021

ಈರುಳ್ಳಿ ಬೆಳೆ ಮಾಹಿತಿ.

 ಈರುಳ್ಳಿ ಒಂದು ಬಹುಮುಖ್ಯವಾದ ತರಕಾರಿ ಬೆಳೆಯಾಗಿದ್ದು ಇದು ತನ್ನ ಖಾರವಾದ ವಿಶಿಷ್ಟ ರುಚಿಯ ಗುಣದಿಂದ ಇದನ್ನು ತರಕಾರಿಯಾಗಿ ಸಾಂಬಾರು ಪಧಾರ್ಥವಾಗಿ ಹಾಗು ಕೆಲವು ಚಿಕಿತ್ಸೆಗಳಿಗೆ ಓಷದವಾಗಿಯೂ ಸಹ ಬಳಸುತ್ತಾರೆ.ಈರುಳ್ಳಿಯಲ್ಲಿ ನಮ್ಮ ದೇಹಕ್ಕೆ ಬೇಕಾದ 'ಬಿ" ಮತ್ತು 'ಸಿ" ಪೋಷಕಾಂಶಗಳು ಹೇರಳವಾಗಿ ಲಭಿಸುತ್ತದೆ.
ಮಣ್ಣು ಹಾಗು ಹವಾಗುಣ : ಈರುಳ್ಳಿ ಬೆಳೆಗೆ ಮಣ್ಣಿನ ರಸಸಾರ 6 ರಿಂದ 8 ಉತ್ತಮ.ಇದನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯ ಬಹುದಾದರು ಸಹ ಉತ್ತಮ ಗೆಡ್ಡೆಗಳು ಚಳಿಗಾಲದಲ್ಲಿ ಮಾತ್ರ ದೊರೆಯುತ್ತದೆ.ಜೊಗು ಪ್ರದೇಶ ನೀರು ನಿಲ್ಲುವ ಜಾಗ ಸೂಕ್ತವಲ್ಲ.ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಸೂಕ್ತ.ಜೂನ್ -ಜುಲೈ . ಸೆಪ್ಟೆಂಬರ್ - ಅಕ್ಟೋಬರ್. ಜನವರಿ - ಪೆಬ್ರವರಿ.ನಾಟಿ ಮಾಡಲು ಸೂಕ್ತವಾದ ಕಾಲಗಳಾಗಿರುತ್ತದೆ.
ತಳಿಗಳು : ಆರ್ಕಾ ನಿಕೇತನ್.ಆರ್ಕಾ ಕಲ್ಯಾಣ್.ಆರ್ಕಾ ಪಿತಾಂಬರ್.ಅಗ್ರಿ ಪೊಂಡ್ ರೆಡ್.ನಾಸಿಕ್ ರೆಡ್.ಬೀಮಾ ರೆಡ್.ಬಳ್ಳಾರಿ ರೆಡ್.ತೆಲಗಿ ಬಿಳಿ.ತೆಲಗಿ ಕೆಂಪು.ಕುಮಟಾ.ರಾಂಪುರ.ಸತಾರ ಲೋಕಲ್.ಆರ್ಕಾ ಲಾಲಿಮ.ಬೆಂಗಳೂರು ಗುಲಾಬಿ.ಅಗ್ರಿ ಫೊಂಡ್ ರೋಸ್ ಇನ್ನು ಮುಂತಾದವು.
ಬೇಸಾಯ ಕ್ರಮ : ಈ ಬೆಳೆಯನ್ನ 3 ವಿಧದಲ್ಲಿ ಬಿತ್ತಬಹುದು.1.ಸಸಿ ನಾಟಿ. 2. ಗೆಡ್ಡೆ ನಾಟಿ. 3. ಕೂರಿಗೆ ಬಿತ್ತನೆ ಮತ್ತು ಚೆಲ್ಲುವದು.ಮೊದಲೆರಡನೆಯ ಪದ್ದತಿ ಇಂದ ಉತ್ತಮ ಬೆಳೆ ನಿರೀಕ್ಷಿಸಬಹುದು.
ಬೇಸಾಯ ಕ್ರಮ : ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ.ನಂತರ 15 ಸೆಂ.ಮೀ ಅಂತರದ ಸಾಲುಗಳು ಮಾಡಿ ನಂತರ ಹೆಕ್ಟೆರ್ ಗೆ 30 ಟನ್ ಕೊಟ್ಟಿಗೆ ಗೊಬ್ಬರ ಮತ್ತು 125 ಕಿ.ಗ್ರಾಂ ಸಾರಜನಕ.75 ಕಿ.ಗ್ರಾಂ ರಂಜಕ.125 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣದಲ್ಲಿ 50 ಶೇ ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸ ಬೇಕು.ನಂತರ ಸಾಲಿನ ಒಂದು ಬದುವಿನಲ್ಲಿ 10 ಸೆಂ.ಮೀ ನಂತೆ ಸಸಿ.ಅಥವ ಗೆಡ್ಡೆಗಳನ್ನು ನಾಟಿ ಮಾಡಬೇಕು.

ನಾಟಿ ಮಾಡಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಬುಡಕ್ಕೆ ಮಣ್ಣು ಕೊಡಬೇಕು.ಈರುಳ್ಳಿಯು ಮೇಲ್ಮಟ್ಟದ ಬೇರಿನ ಬೆಳೆಯಾದ್ದರಿಂದ ಕಳೆ ನಿರ್ಮೂಲನೆ ತುಂಬಾ ಅವಶ್ಯಕ.

ನೀರುನ ನಿರ್ವಹಣೆ : ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಕೊಯ್ಲು ಮಾಡುವ 15 ದಿನ ಮೊದಲೆ ನೀರನ್ನು ನಿಲ್ಲಿಸುವದರಿಂದ ಗಡ್ಡೆಗಳನ್ನು ದೀರ್ಘಕಾಲ ಸಂಗ್ರಹಿಸಿ ಇಡಲು ಸಾದ್ಯವಾಗುತ್ತದೆ.

ರೋಗಗಳು : ಥ್ರಿಪ್ಸ ನುಸಿ.ಸಸಿ ಕತ್ತರಿಸುವ ಹುಳು.ಜಿಗಿಹುಳು.ಕಾಡಿಗೆ ರೋಗ.ಬ್ಯ್ಲೆಟ್ ರೋಗ.ಎಲೆ ಚುಕ್ಕೆ ರೋಗ.ಈ ರೋಗಗಳನ್ನು ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ನಿರ್ವಹಿಸಿದರೆ ಅಧಿಕ ಇಳುವರಿ ಸಾದ್ಯ.
ಕೊಯ್ಲು ಮತ್ತು ಇಳುವರಿ : ತಳಿಗಳಿಗೆ ಅನುಗುಣವಾಗಿ 90 ರಿಂದ 140 ದಿನಕ್ಕೆ ಕೊಯ್ಲಿಗೆ ಬರುತ್ತವೆ.ಕೊಯ್ಲಿಗೆ ಬಂದ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿರುತ್ತವೆ.ನಂತರ ಅವನ್ನು ಅಗೆದು ಬಿಸಿಲಿನಲ್ಲಿ ಒಣಗಿಸುವದರಿಂದ ದೀರ್ಘಕಾಲ ಸಂಗ್ರಹಿಸಿಡಬಹುದು.ಇಳುವರಿ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 40 ಟನ್ ವರೆಗು ಇಳುವರಿ ಬರುತ್ತವೆ.








ಮಂಗಳವಾರ, ಜೂನ್ 22, 2021

ಬೆಂಡೆಕಾಯಿ ಬೆಳೆ ಮಾಹಿತಿ.

ಬೆಂಡೆಕಾಯಿ ನಮ್ಮ ರಾಜ್ಯದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದು.ಇದು ನಮ್ಮ ದೇಹಕ್ಕೆ ಬೇಕಾದ ವಿಟಮಿನ್ 'ಸಿ" ಜೀವಸತ್ವ ಮತ್ತು ಐಯೋಡಿನ್.ಹಾಗು ಕ್ಯಾಲ್ಸಿಯಂ ಗಳನ್ನು ಹೇರಳವಾಗಿ ಒದಗಿಸುತ್ತದೆ.
ಬೆಂಡೆಯ ಬೆಳೆಗೆ ಮಣ್ಣಿನ ರಸಸಾರ 6 ರಿಂದ 6.8 ಇರಬೇಕಾಗುತ್ತದೆ.ವಾರ್ಷಿಕ ಸರಾಸರಿ 450 ರಿಂದ 650 ಮಿ.ಮೀ ಮಳೆ ಬೀಳುವ ಪ್ರದೇಶ ಹಾಗೂ ಸರಾಗವಾಗಿ ನೀರು ಬಸಿದು ಹೋಗುವ ಎಲ್ಲಾ ಮಣ್ಣಿನಲ್ಲೂ ಬೆಳೆಯ ಬಹುದಾದರೂ ಎರೆ ಭೂಮಿ ಹಾಗೂ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು.
 ಬೆಂಡೆಕಾಯಿ ಬಿತ್ತನೆ ಕಾಲ : ಜೂನ್ ಮತ್ತು ಜುಲೈ .ಹಾಗು ಜನೆವರಿ ಮತ್ತು ಫೆಬ್ರವರಿ ಬಿತ್ತನೆಗೆ ಸೂಕ್ತವಾದ ಕಾಲ.ರಾತ್ರಿಯ ವಾತಾವರಣದಲ್ಲಿ ಉಷ್ಣಾಂಶವು 100 ಸೆ. ಗಿಂತ ಕಡಿಮೆಯಾದ ಸಂದರ್ಭದಲ್ಲಿ ಬೀಜ ಸರಿಯಾಗಿ ಮೊಳಕೆ ಹೊಡೆಯದೆ ಬೆಳೆಯ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮಗಳಾಗುತ್ತದೆ.
ಬೆಂಡೆಕಾಯಿ ತಳಿಗಳು : ಆರ್ಕಾ ಅಭಯ್.ಪೂಸಾ ಸವಾನಿ.ವಯ್ಟ್ ವೆಲ್ವೆಟ್ (ಹಾಲು ಬೆಂಡೆ).ಪರ್ಬಾನಿ ಕ್ರಾಂತಿ.ಆರ್ಕಾ ಅನಾಮಿಕ.ಮುಂತಾದವು.
ಬೆಂಡೆಕಾಯಿ ಬಿತ್ತನೆ : ಭೂಮಿಯನ್ನು ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ 60 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಸಾಲಿನಲ್ಲಿ ಸಾವಯವ ಕೊಟ್ಟಿಗೆ ಗೊಬ್ಬರ ಬೆರೆಸಿ.ನಂತರ 150 ಕಿ. ಗ್ರಾಂ ಸಾರಜನಕ .75 ಕಿ.ಗ್ರಾಂ ರಂಜಕ.50 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ ಶೇ.50 ಗೊಬ್ಬರವನ್ನು ಸಾಲಿನಲ್ಲಿ ಮಣ್ಣಿಗೆ ಬೆರೆಸಿ.ನೀರು ಬಿಟ್ಟು ನಂತರ ಬೀಜದಿಂದ ಬೀಜಕ್ಕೆ 30 ಸೆಂ.ಮೀ ಅಂತರದಲ್ಲಿ ಬೀಜವನ್ನು ಊರಿಸಬೇಕು.ನಂತರ ಸ್ಥಳೀಯ ಮತ್ತು ಮಣ್ಣಿನ ವಾತಾರಣಕ್ಕೆ ಅನುಗುಣವಾಗಿ 3 ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಬಿತ್ತಿದ 20 ರಿಂದ 30 ದಿನದೊಳಗೆ ಅಂತರ ಬೇಸಾಯ.ಕಳೆನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡಿ ಸಸಿಗಳ ಬುಡಕ್ಕೆ ಮಣ್ಣು ಹೇರಿ ಕೊಡಬೇಕು.
ಬೆಂಡೆಕಾಯಿ ಬೆಳೆಗೆ ತಗುಲುವ ರೋಗಗಳು : 
ಬಿಳಿ ನೊಣ.ಜಿಗಿ ಹುಳು.ಥ್ರಿಪ್ಸ್ ನುಸಿ.ಮಯ್ಟ್ ನುಸಿ.ರೆಂಬೆ ಕೊರೆಯುವ ಹುಳು.ಕಾಯಿ ಕೊರಕ ಹುಳು.ಹಳದಿ ನಂಜು.ಬೂದಿರೋಗ.ಎಲೆಚುಕ್ಕೆ.ಗಂಟುಬೇರು ರೋಗ.ಈ ಎಲ್ಲಾ ರೋಗ ಲಕ್ಷಣಗಳ ಕಂಡ ತಕ್ಷಣ ತಙ್ನರ ಸಲಹೆ ಮೇರೆಗೆ ರೋಗಗಳನ್ನ ಹತೋಟಿ ಮಾಡಿದರೆ ಉತ್ತಮ ಇಳುವರಿ ಲಭಿಸುತ್ತದೆ.
ಕೊಯ್ಲು ಮತ್ತು ಇಳುವರಿ : 
ಬಿತ್ತಿದ 45 ರಿಂದ 65 ನೇ ದಿನಕ್ಕೆ ಮೊದಲ ಬಾರಿ ಕೊಯ್ಲು ಬರುತ್ತದೆ.ನಂತರ ಪ್ರತಿ 2 ರಿಂದ 3 ದಿನಕ್ಕೊಮ್ಮೆ ಎಳೆ ಹಸಿರು ಕಾಯಿಗಳ ದೊರೆಯುತ್ತವೆ.ನಂತರ 4 ರಿಂದ 6 ವಾರಗಳ ವರೆಗೆ ನಿರಂತರ ಕೊಯ್ಲು ಮಾಡಬಹುದು.ಪ್ರತಿ ಹೆಕ್ಟೇರ್ ಗೆ ತಳಿಗಳಿಗೆ ಅನುಗುಣವಾಗಿ 15 ರಿಂದ 20 ಟನ್ ಇಳುವರಿ ಪಡೆಯಬಹುದು.

ಸೋಮವಾರ, ಜೂನ್ 21, 2021

ಬಟಾಣಿ ಬೆಳೆ.

ಬಟಾಣಿ ಬೆಳೆ ಒಂದು ದ್ವಿದಳ ಧಾನ್ಯ ಬೆಳೆಯಾಗಿದ್ದು.ಇದನ್ನು ಹಸಿ ತರಕಾರಿ ಹಾಗು ಒಣದಾನ್ಯವಾಗಿಯೂ ಬಳಸಬಹುದು.ಇದರಲ್ಲಿ ಮನುಷ್ಯನಿಗೆ ಅವಶ್ಯಕವಾದ ವಿಟಮಿನ್ 'ಎ" 'ಸಿ" 'ಬಿ" ಮತ್ತು ಕ್ಯಾರೊಟಿನ್.ಮ್ಯಾಂಗನೀಸ್.ರಂಜಕ.
ಪೊಟ್ಯಾಶ್.ಲೆಸಿನ.ಮತ್ತು ಅಮಿನೊ ಆಮ್ಮಗಳು ಹೇರಳವಾಗಿರುತ್ತದೆ.ಜೊತೆಗೆ ಇದೊಂದು ದ್ವಿದಳ ದಾನ್ಯವಾದ್ದರಿಂದ ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಬಟಾಣಿ  ಬೆಳೆಗೆ ಮಣ್ಣಿನ ರಸಸಾರ 5.5 ಇಂದ 7.5 ರ ವರೆಗಿನ ಮಣ್ಣಿನಲ್ಲಿ ಚೆನ್ನಾಗಿ ಬರುತ್ತದೆ.ಇದೊಂದು ಚಳಿಗಾಲದ ಬೆಳೆಯಾಗಿದ್ದು ಹೆಚ್ಚಿನ ಉಷ್ಣಾಂಶದಲ್ಲಿ ಇಳುವರಿ ಕಡಿಮೆಯಾಗುತ್ತದೆ.ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯ ಬಹುದಾದರೂ ಮರಳು ಮಿಶ್ರಿತ ಕೆಂಪು.ಮರಳು ಮಿಶ್ರಿತ ಕಪ್ಪುಮಣ್ಣು ಸೂಕ್ತವಾದದ್ದು.
ಬಿತ್ತನೆ ಕಾಲ : 
ಮಳೆಗಾಲದ ಬೆಳೆಯಾಗಿ ಜೂನ್ - ಜುಲೈನಲ್ಲಿ. ಮತ್ತು ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಬಿತ್ತನೆ ಮಾಡಬಹುದು.
ಬಟಾಣಿ ತಳಿಗಳು : 
ಅರ್ಕಾ ಪ್ರಿಯಾ.ಬೆಂಗಳೂರು ಲೋಕಲ್.ಆರ್ಶೆಲ್.ಅರ್ಕಾ ಅಜಿತ್.ಅರ್ಕಾ ಸಂಪೂರ್ಣ.ಅರ್ಕಾ ಪ್ರಮೋದ್.ಅರ್ಲಿ ಬ್ಯಾಡ್ಜರ್.ಬೊನ್ನೆ ವಿಲ್ಲೆ.ಬಿ ಆರ್ 2. ಬಿ ಆರ್ 12. ಎನ್ ಪಿ 29.ಇನ್ನು ಮುಂತಾದವು.

ಬಟಾಣಿ ಬಿತ್ತನೆ ಪದ್ದತಿ : 
ಭೂಮಿಯನ್ನು ಹದಮಾಡಿದ ನಂತರ 60 ಸೆಂ ಮಿ ಅಂತರದಲ್ಲಿ ಎತ್ತರಕ್ಕೆ ಮಣ್ಣು ಬರುವಂತೆ ಸಾಲುಗಳನ್ನು ಮಾಡಿ ಕೊಟ್ಟಿಗೆ  ಗೊಬ್ಬರದ ಜೊತೆ 30 ಕೆ ಜಿ ಸಾರಜನಕ.50 ಕೆ ಜಿ ರಂಜಕ.50 ಕೆ ಜಿ ಪೊಟ್ಯಾಶ್ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿಗೆ ಬೆರೆಸ ಬೇಕು.ನಂತರ ತೆಳುವಾಗಿ ನೀರು ಕೊಟ್ಟು ಸಾಲಿನ ದಿಣ್ಣೆಯ ಮೇಲೆ ಬೀಜವನ್ನು ಊರಬೇಕು.ಪ್ರತಿ ಹೆಕ್ಟೇರ್ ಗೆ 35 ರಿಂದ 40 ಕೆ ಜಿ ಬೀಜಗಳು ಬೇಕಾಗುತ್ತದೆ.

ನಿರ್ವಹಣೆ : 
ಬಿತ್ತಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ.4 ವಾರಗಳ ನಂತರ ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.ಉತ್ತಮ ಗುಣಮಟ್ಟದ ಕಾಯಿ ಮತ್ತು ಇಳುವರಿಗೆ ಕೋಲು ಮತ್ತು ಹುರಿಯನ್ನು ಮಾಡಿ ಬಳ್ಳಿಗೆ ಆಸರೆ ಕೊಡುವದು ಉತ್ತಮ.
ಮಣ್ಣಿನ ಗುಣ ಲಕ್ಷಣ ಮತ್ತು ವಾತಾವರಣಕ್ಕೆ ಅನುಗುಣವಾಗಿ ವಾರಕ್ಕೊಮ್ಮೆ ನೀರು ಕೊಡಬೇಕು.

ರೋಗಗಳು : 
ಬೂದಿರೋಗ.ಕಾಯಿ ಕೊಳೆ.ತುಕ್ಕು ರೋಗ.ಕಾಂಡ ಕೊಳೆ.ಕಾಯಿ ಕೊರೆವ ಹುಳು.ಹೇನು.ಬೇರು ಕೊಳೆ .ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗುಲುವ ರೋಗಗಳನ್ನ ನಿರ್ವಹಣೆ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.
ಕೊಯ್ಲು : 
ನಾಟಿ ಮಾಡಿದ 45 ರಿಂದ 55 ದಿನಕ್ಕೆ ಹೂವಿಗೆ ಬರುವ ಗಿಡಗಳು ನಂತರದ ಎರಡು ವಾರದಲ್ಲಿ ಕಾಯಿಗಳನ್ನು ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ 70 ರಿಂದ 100 ದಿನದ ಅವದಿಯಲ್ಲಿ ಕೊಯ್ಲು ಪೂರ್ಣವಾಗುತ್ತದೆ.

ಇಳುವರಿ : 
ಎಳೆ ಹಸಿರು ಕಾಯಿಯನ್ನು ತರಕಾರಿಯ ಸಲುವಾಗಿ ಕೀಳಬಹುದು.ಬಲಿತ ಕಾಯಿಗಳನ್ನು ಒಣಕಾಳುಗಳಾಗಿ ಕೀಳಬಹುದು.ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೇರ್ ಗೆ 60 ರಿಂದ 80 ಟನ್ ಇಳುವರಿ ಪಡೆಯಬಹುದು.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...