expr:class='"loading" + data:blog.mobileClass'>
ತರಕಾರಿ ಬೆಳೆಗಳು. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತರಕಾರಿ ಬೆಳೆಗಳು. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 20, 2021

ಕ್ಯಾರೆಟ್ ಬೆಳೆ ಮಾಹಿತಿ.

ಕ್ಯಾರೆಟ್ ಒಂದು ಬಹು ಜನಪ್ರಿಯ ಗಡ್ಡೆ ತರಕಾರಿ.ಕ್ಯಾರೆಟ್ ಅನ್ನುವ ಪದ ಆಗ್ಲಬಾಷೆಯಿಂದ ಬಂದದ್ದು ಕನ್ನಡದಲ್ಲಿ ಇದನ್ನು 'ಗಜ್ಜರಿ" ಎಂದು ಕರೆಯುತ್ತಾರೆ. ಇದು ತನ್ನ ವಿಷೇಶವಾದ ಸಿಹಿ ಗುಣದಿಂದ ಬಹು ಜನಪ್ರಿಯ ತರಕಾರಿಯಾಗಿದೆ.ಕ್ಯಾರೆಟನ್ನು ಹಸಿ ತರಕಾರಿಯಾಗಿ ಮತ್ತು ಸಿಹಿ ಪಧಾರ್ಥಗಳ ತಯಾರಿಕೆ ಮತ್ತು ಸಾಂಬಾರ್ ಮತ್ತು ಪಲ್ಯ.ಸಲಾಡ್ಗಳಲ್ಲೂ ಬಳಸ ಬಹುದು ಜೊತೆಗೆ ಸೊಂದರ್ಯ ವರ್ದಕಗಳಲ್ಲೂ ಬಳಸಬಹುದು.ಪಾನೀಯವಾಗಿ ಕ್ಯಾರೆಟ್ ಜ್ಯೂಸ್ ಸಹ ತಯಾರಿಸಬಹುದು.
ಕ್ಯಾರೆಟ್ ಮೂಲ ತವರು ಮದ್ಯ ಏಷ್ಯಾ.ಭಾರತದಲ್ಲೂ ಸಹ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.ಕ್ಯಾರೇಟ್ ಅಲ್ಲಿ ಹೇರಳವಾದ ವಿಟಮಿನ್ 'ಎ" ಮತ್ತು 'ಬಿ" ಜೊತೆಗೆ ಖನಿಜಾಂಶಗಳ ಆಗರವಾಗಿದೆ.ದ್ರುಷ್ಟಿದೋಶ.ಮತ್ತು ಚರ್ಮ ಸಂರಕ್ಷಣೆಯಲ್ಲಿ ಕ್ಯಾರೆಟ್ ಅಲ್ಲಿರುವ ವಿಟಮಿನ್ಗಳು ಖನಿಜಾಂಶಗಳು ಬಹುಮುಖ್ಯ ಪಾತ್ರವಹಿಸುತ್ತವೆ.

ಕ್ಯಾರೆಟ್ ತಳಿಗಳು :
ಕುರೋಡ್.ಪೂಸಾ ಯಮದಗ್ನಿ.ಏಷಿಯಾಟಿಕ್ ಲೋಕಲ್.ಡ್ಯಾನವರ್ಸ.ಜೆಯಂಟ್ ಚಾಂಟೆನಿ.ಅರ್ಕಾ ಸೂರಜ್.ಪೂಸಾ ಮೇಘಾಲಿ.ನ್ಯಾಂಟೀಸ್.ಪೂಸಾ ಕೇಸರ್.ಮತ್ತು ಇನ್ನು ಹಲವು.

ಮಣ್ಣು ಮತ್ತು ಹವಾಗುಣ :
ಕ್ಯಾರೆಟ್ ಬೆಳೆಗೆ ಮಣ್ಣಿನ ರಸಸಾರ 4 ರಿಂದ 6 ಬಹು ಮುಖ್ಯ.ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ ಫಸಲಿಗೆ ಸೂಕ್ತ.
ಕ್ಯಾರೆಟ್ ಬೆಳೆಯನ್ನು ವರ್ಷದ ಮೂರು ಕಾಲಮಾನದಲ್ಲೂ ಬೆಳೆಯಬಹುದಾದರೂ ಸಹ ಉತ್ತಮ ಇಳುವರಿಗೆ ಅಕ್ಟೋಬರ್ - ನವೆಂಬರ್ ಸೂಕ್ತ ಕಾಲಮಾನ.ಇದರ ಹೊರತಾಗಿಯೂ ಜನವರಿ - ಫೆಬ್ರವರಿ ಮತ್ತು ಜೂನ್ -ಜುಲೈ ತಿಂಗಳುಗಳಲ್ಲಿಯೂ ಸಹ ಬೆಳೆಯಬಹುದು.

ಕ್ಯಾರೆಟ್ ಬೇಸಾಯ ಕ್ರಮ :
ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಸಣ್ಣ ಮಣ್ಣು ಮಾಡಿ ಸಿದ್ದಪಡಿಸಿದ ಭೂಮಿಯಲ್ಲಿ 1.2 * 1.2 ಮೀ ಅಗಲದ ಮಡಿಯನ್ನು ತಯಾರಿಸಿಕೊಂಡು ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರ ಮತ್ತು 50 * 50 * 50 ಸಾರಜನಕ.ರಂಜಕ.ಪೊಟ್ಯಾಶ್ ಮಿಶ್ರಣ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 20.5 ಸೆಂ.ಮೀ ಅಂತರದ ಸಾಲುಗಳಲ್ಲಿ ಹೆಕ್ಟೇರ್ ಗೆ 5 ಕೆ ಜಿ ಬೀಜದಂತೆ ಬಿತ್ತಬೇಕು.ಬೀಜಗಳು ಮೊಳಕೆಯೊಡೆದ ಮೇಲೆ 10 ಸೆಂ.ಮೀ ಒಂದರಂತೆ ಒಳ್ಳೆಯ ಆರೋಗ್ಯವಂತ ಸಸಿಗಳನ್ನು ಉಳಿಸಿಕೊಂಡು ಉಳಿದ ಸಸಿಗಳನ್ನ ಕಿತ್ತು ತೆಗೆಯಬೇಕು.
ಕ್ಯಾರೆಟ್ ಬೀಜಗಳು ಅತಿ ಕಡಿಮೆ ನೀರು ಬೇಡುವದರಿಂದ ಬೀಜಗಳು ಮೊಳಕೆಯೊಡೆಯುವ ವರೆಗೂ ತೆಳುವಾಗಿ ನೀರು ಕೊಡುವದು ಸೂಕ್ತ.ಮಣ್ಣು ಮತ್ತು ಹವಾಗುಣಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಒದಗಿಸುವದು ಸೂಕ್ತ.ಕ್ಯಾರೆಟ್ ಬೀಜಗಳು ಹೆಚ್ಚಿನ ಸಂದರ್ಭದಲ್ಲಿ ಮೊಳಕೆ ಒಡೆಯುವಲ್ಲಿ ವಿಫಲವಾಗುವದು ಹೆಚ್ಚು ಹಾಗಾಗಿ ನೀರಿನ ನಿರ್ವಹಣೆಯನ್ನು ಮಣ್ಣಿನ ಗುಣಕ್ಕನುಸಾರವಾಗಿ ಜಾಗ್ರತೆ ಇಂದ ಅನುಸರಿಸುವದು  ಸೂಕ್ತ.

ಕ್ಯಾರೆಟ್ ಬೆಳೆಯಲ್ಲಿ ಕಳೆ ನಿಯಂತ್ರಣ :
ಬೀಜ ಬಿತ್ತಿದ ದಿನದಿಂದ 48 ಗಂಟೆಯ ಒಳಗಾಗಿ ಭೂಮಿಯಲ್ಲಿ ತೇವಾಂಶ ಇರುವಂತೆ ನೋಡಿಕೊಂಡು 2.5 ಲೀ.ಪೆಂಡಿಮಿಥಾಲಿನ್ 30 ಇ.ಸಿ ಅಥವ 1.5 ಲೀ ಅಲಾಕ್ಲೋರ್ 50 ಇ.ಸಿ ಯಾವುದಾದರೂ ಒಂದನ್ನು ಭೂಮಿಯ ಮೇಲೆ ಸಿಂಪಡಣೆ ಮಾಡಬಹುದು.ಸಿಂಪಡಣೆಯ ನಂತರ ಭೂಮಿಯನ್ನು ತುಳಿಯಬಾರದು.ನಂತರದಲ್ಲೂ ಬರುವ ಕಳೆಗಳನ್ನು ಆಗಾಗ ಪ್ರತಿ 20 ದಿನಗಳಿಗೊಮ್ಮೆ ನಿಯಂತ್ರಿಸುವದು ಸೂಕ್ತ.ಕಳೆ ನಿಯಂತ್ರಣದ ನಂತರ ಮೇಲುಗೊಬ್ಬರವಾಗಿ ಸಾರಜನಕ 25 ಕಿ.ಗ್ರಾಂ ಕೊಡುವದು ಸೂಕ್ತ.

ಕ್ಯಾರೆಟ್ ಬೆಳೆಗೆ ತಗಲುವ ರೋಗಗಳು :
ಸಹಜವಾಗಿ ಕ್ಯಾರೆಟ್ ಬೆಳೆಗೆ ಮೂತಿ ಹುಳು.ಹೇನು.ಜಿಗಿಹುಳು.ಎಲೆಚುಕ್ಕೆ ರೋಗ.ಬೂದಿರೋಗ.ಎಲೆಸುಡುರೋಗಗಳನ್ನು ಗುರುತಿಸಲಾಗಿದೆ.ಕಾಲ ಕಾಲಕ್ಕೆ ತಗಲುವ ರೋಗಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ನಿಯಂತ್ರಿಸಿದಲ್ಲಿ ಉತ್ತಮ ಫಸಲು ಇಳುವರಿ ಪಡೆಯಬಹುದು.

ಕ್ಯಾರೆಟ್ ಕೊಯ್ಲು ಮತ್ತು ಇಳುವರಿ :
ಕ್ಯಾರೆಟ್ ಬಿತ್ತಿದ ತಳಿಗಳಿಗೆ ಅನುಗುಣವಾಗಿ 3 ರಿಂದ 4 ತಿಂಗಳ ನಂತರ ಕೊಯ್ಲಿಗೆ ಬರುತ್ತವೆ.ಉತ್ತಮ ನಿರ್ವಹಣೆ ಮತ್ತು ಮಣ್ಣಿನ ಗುಣ ಧರ್ಮಕ್ಕನುಗುಣವಾಗಿ ಪ್ರತಿ ಹೆಕ್ಟೇರ್ ಗೆ 20 ಟನ್ ಕ್ಯಾರೆಟ್ ಇಳುವರಿಯನ್ನ ಪಡೆಯಬಹುದು.



ಮಂಗಳವಾರ, ಜುಲೈ 6, 2021

ಬೀಟ್ರೂಟ್ ಬೆಳೆ ಮಾಹಿತಿ.

ಬೀಟ್ರೂಟ್ ಒಂದು ಸಿಹಿಯಾದ ಕಡುಗೆಂಪು ಬಣ್ಣದ ಅಲ್ಪಾವದಿ ತರಕಾರಿ ಬೆಳೆಯಾಗಿದ್ದು ಇದು ನಮ್ಮ ದೇಹಕ್ಕೆ ಬೇಕಾದ 'ಸಿ" ಅನ್ನಾಂಗ ಮತ್ತು ಹೇರಳವಾದ ಖನಿಜಾಂಶಗಳನ್ನು ಒದಗಿಸುತ್ತದೆ.
ಬೀಟ್ರೂಟ್ ಬೆಳೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಹಾಗೂ ಸವಳು ಮಣ್ಣಿನಲ್ಲಿ ಬೆಳೆಯಬಹುದು.ಚಳಿಗಾಲದ ಬೆಳೆಯಲ್ಲಿ ಒಳ್ಳೆಯ ಗುಣಮಟ್ಟದ ಗೆಡ್ಡೆಗಳು ಹಾಗು ಇಳುವರಿ ಪಡೆಯಬಹುದು.

ಬೀಟ್ರೂಟ್ ಬಿತ್ತನೆ ಕಾಲ : 
ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಹಾಗು ಮಳೆಗಾಲದ ಬೆಳೆಯಾಗಿ ಜೂನ್ - ಜುಲೈ ಅಲ್ಲಿ ಬಿತ್ತಬಹುದು.
ತಳಿಗಳು : ಕ್ರಮ್ಸನ್ ಗ್ಲೋಬ್.ಡೆಟ್ರಾಯಿಟ್ ಡಾರ್ಕ್ ರೆಡ್.ಹಾಗು ಮುಂತಾದವು.
ಬೀಟ್ರೂಟ್ ಬಿತ್ತನೆ : 
ಭೂಮಿಯನ್ನು ಚೆನ್ನಾಗಿ ಆಳವಾಗಿ ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ ತಳಿಗಳಿಗೆ ಅನುಗುಣವಾಗಿ 30 ರಿಂದ 45 ಸೆಂ.ಮೀ ಅಂತರದ ಸಾಲು ಮಾಡಿ ಸಾಲಿನಲ್ಲಿ 20 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ.ನಂತರ ಸಾರಜನಕ 75 ಕಿ.ಗ್ರಾಂ. ರಂಜಕ 100 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣ ಮಾಡಿದ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸಿ ನಂತರ ಸಾಲಿನ ಒಂದು ಬದುವಿನ ಮೇಲೆ 15 ರಿಂದ 20 ಸೆ.ಮೀ ಅಂತರದಲ್ಲಿ ಬೀಜವನು ಊರಿಸಬೇಕು.ಬಿತ್ತಿದ 4 ವಾರಗಳ ನಂತರ ಹೆಚ್ಚುವರಿ ಸಸಿಗಳನ್ನು ಕೀಳಿಸಿ ಜೊತೆಗೆ ಕಳೆ ನಿರ್ವಹಣೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.
ನೀರಾವರಿ : ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 5 ರಿಂದ 6 ದಿನಕ್ಕೊಮ್ಮೆ ನೀರು ಬಿಡಬೇಕು.
ಬೀಟ್ರೂಟ್ ಬೆಳೆಯ ರೋಗಗಳು : 
ಹೇನು.ಜಿಗಿ ಹುಳು.ಎಲೆಚುಕ್ಕೆ ರೋಗ.ಗರಿ ತಿನ್ನುವ ಹುಳು.ರೋಗ ಲಕ್ಷಣಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಇಳುವರಿ : ಬಿತ್ತನೆ ಮಾಡಿದ 3 ತಿಂಗಳ ನಂತರ ಕಟಾವಿಗೆ ಬರುತ್ತದೆ.ಪ್ರತಿ ಹೆಕ್ಟೇರ್ ಗೆ 20 ರಿಂದ 30 ಟನ್ ಇಳುವರಿ ಪಡೆಯ ಬಹುದು.

ಬುಧವಾರ, ಜೂನ್ 30, 2021

ಕ್ಯಾಪ್ಸಿಕಂ.ದೊಣ್ಣೆಮೆಣಸಿನ ಮಾಹಿತಿ.

ದೊಣ್ಣೆ ಮೆಣಸಿನ ಮೂಲ ತವರು ಅಮೇರಿಕ.ನೂರಾರು ವರ್ಷಗಳಿಂದಲು ಅಮೆರಿಕದ ಸಮಶೀತೋಷ್ಣ ವಲಯದ ಪ್ರಧೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು.ಇದನ್ನು ಸಿಹಿ ಮೆಣಸು ಎಂದು ಸಹ ಕರೆಯುತ್ತಾರೆ ಇತ್ತೀಚೆಗೆ ಇದನ್ನು ಎಲ್ಲಾ ಪ್ರಧೇಶಗಳಲ್ಲು ಯಶಸ್ವಿ ಬೆಳೆ ಬೆಳೆಯುತ್ತಿದ್ದಾರೆ.ಕ್ಯಾಪ್ಸಿಕಂ ಅನ್ನು ತರಕಾರಿಯಾಗಿ.ಮಸಾಲೆ ಪಧಾರ್ಥವಾಗಿ ಮತ್ತು ಕೆಲವೊಂದು ಓಷದ ತಯಾರಿಕೆಯಲ್ಲುಿ ಬಳಸುತ್ತಾರೆ.ಇದರಲ್ಲಿ ಮನುಷ್ಯನ ದೇಹಕ್ಕೆ ಅತ್ಯಾವಶ್ಯಕವಾದ ವಿಟಮಿನ್ 'ಎ" ಮತ್ತು 'ಸಿ" ಹೇರಳವಾಗಿ ದೊರೆಯುತ್ತದೆ.
ಮಣ್ಣು ಮತ್ತು ಬಿತ್ತನೆ ಕಾಲ :
ದೊಣ್ಣೆ ಮೆಣಸಿನ ಬೆಳೆಗೆ ಮಣ್ಣಿನ ರಸಸಾರ 5.4 ರಿಂದ 6.8 ಇರುವ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪು ಗೋಡು ಮಣ್ಣು ಮತ್ತು ಮದ್ಯಮ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯ ಬಹುದು.ತೆಗ್ಗು.ಸವಳು ಮಣ್ಣು ಈ ಬೆಳೆಗೆ ಸೂಕ್ತವಲ್ಲ.ಈ ಬೆಳೆಯನ್ನು ಜುಲೈ - ಆಗಸ್ಟ್. ಮತ್ತು ಅಕ್ಟೋಬರ್ - ನವೆಂಬರ್ ನಾಟಿ ಮಾಡಲು ಸೂಕ್ತ ಕಾಲ.
 ದೊಣ್ಣೆ ಮೆಣಸಿನ ತಳಿಗಳು :
ಆರ್ಕಾ ಮೋಹಿನಿ.ಆರ್ಕಾ ಬಸಂತ್.ಆರ್ಕಾ ಗೊರವ್.ಯೆಲ್ಲೊ ವಂಡರ್.ದಾರವಾಡ ಲೋಕಲ್.ಡಿ ಎಂ ಸಿ - 14.ಅಪೂರ್ವ.ಕ್ಯಾಲಿಫೊರ್ನಿಯಾ ವಂಡರ್.ಮುಂತಾದವು.
ನಾಟಿ ವಿಧಾನ :
ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ 60 ಸೆಂ.ಮೀ.ಅಂತರದ ಸಾಲುಗಳು ಮಾಡಿ ಪ್ರತಿ ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಸಾಲಿನಲ್ಲು ಚೆಲ್ಲಿ.ಸಾರಜನಕ 150 ಕಿ.ಗ್ರಾಂ. ರಂಜಕ 75 ಕಿ.ಗ್ರಾಂ. ಪೊಟ್ಯಾಶ್ 50 ಕಿ.ಗ್ರಾಂ ಮಿಶ್ರಣದ ಶೇ 50 ರಷ್ಟು ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ.ತೆಳುವಾಗಿ ನೀರು ಕೊಟ್ಟು.ಸಾಲಿನ ಹೊರ ಮಗ್ಗುಲಿನ ಎತ್ತರದ ದಿಣ್ಣೆಯ ಮೇಲೆ 45 ಸೆಂ.ಮೀ ಅಂತರದಲ್ಲಿ ಸಸಿ ನಾಟಿ ಮಾಡಬೇಕು.ಟ್ರೇ ಮತ್ತು ಕೊಕೊ ಪಿಟ್ ನಲ್ಲಿ ಬೆಳೆಸಿದ ಸಸಿಗಳು ನಾಟಿಗೆ ತುಂಬಾ ಸೂಕ್ತ.
ಅಂತರ ಬೇಸಾಯ ಮತ್ತು ನೀರಾವರಿ :
ಮಣ್ಣು ಮತ್ತು ಸ್ಥಳಿಯ ಹವಾಗುಣಕ್ಕೆ ಅನುಗುಣವಾಗಿ 3 ರಿಂದ 4 ದಿನಕ್ಕೊಮ್ಮೆ ನೀರು ಹಾಯಿಸ ಬೇಕು.ನಾಟಿ ಮಾಡಿದ 2 ವಾರದ ನಂತರ ಎಡೆಕುಂಟೆ ಹೊಡೆದು ಕಳೆ ನಿರ್ವಹಣೆ ಮಾಡಿ ಮೇಲೆ ತಿಳಿಸಿದ ಗೊಬ್ಬರದ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಸಸಿಗಳ ಬುಡಕ್ಕೆ ಮಣ್ಣು ಏರಿಸಬೇಕು.3 ನೆ ವಾರದಿಂದ ನಾಲ್ಕನೆ ವಾರದಲ್ಲಿ ಬರುವ ಹೂವುಗಳನ್ನು ಚಿವುಟುವದರಿಂದ ಗಿಡಗಳ ಬೆಳವಣಿಗೆಗೆ ಸಹಕರಿಸ ಬೇಕು.ಇದರಿಂದ ಉತ್ತಮ ಗಾತ್ರದ ಗುಣಮಟ್ಟದ ಕಾಯಿಗಳನ್ನು ಮುಂದೆ ಪಡೆಯಲು ಸಹಕಾರಿಯಾಗುತ್ತದೆ.
ರೋಗಗಳು :
ಹೇನು.ಥ್ರಿಪ್ಸ್ ನುಸಿ.ಜೇಡ ನುಸಿ.ಹಣ್ಣು ಕೊರೆಯುವ ಹುಳು.ಸಸಿ ಸೊರಗು ರೋಗ.ಚಿಬ್ಬು ರೋಗ.ಬೂದಿರೋಗ.ಎಲೆ ಮುಟುರು ರೋಗ.ಎಲೆ ಚುಕ್ಕೆ ರೋಗ.ದುಂಡಾಣು ರೋಗ.ಈ ರೋಗ ಲಕ್ಷಣ ಸಮಯದಲ್ಲಿ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
  ದೊಣ್ಣೆ ಮೆಣಸು ನಾಟಿ ಮಾಡಿದ 50 ರಿಂದ 60 ದಿನಕ್ಕೆ ಕೊಯ್ಲು ಪ್ರಾರಂಭಿಸುತ್ತದೆ ಕಾಯಿಗಳು ಪೂರ್ಣ ಕೆಂಪು ಬಣ್ಣಕ್ಕೆ ತಿರುಗುವ ಮೊದಲೆ ಹಸಿರು ಬಣ್ಣದ ಬಲಿತ ಕಾಯಿ ಕೊಯ್ಲಿಗೆ ಸೂಕ್ತ.ಸಂಕರಣ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 25 ರಿಂದ 30 ಟನ್ ಇಳುವರಿ ಮತ್ತು ಇತರೆ ತಳಿಗಳಿಂದ ಪ್ರತಿ ಹೆಕ್ಟೆರ್ ಗೆ 10 ರಿಂದ 12 ಟನ್ ಇಳುವರಿ ಪಡೆಯಬಹುದು.

ಗುರುವಾರ, ಜೂನ್ 24, 2021

ಈರುಳ್ಳಿ ಬೆಳೆ ಮಾಹಿತಿ.

 ಈರುಳ್ಳಿ ಒಂದು ಬಹುಮುಖ್ಯವಾದ ತರಕಾರಿ ಬೆಳೆಯಾಗಿದ್ದು ಇದು ತನ್ನ ಖಾರವಾದ ವಿಶಿಷ್ಟ ರುಚಿಯ ಗುಣದಿಂದ ಇದನ್ನು ತರಕಾರಿಯಾಗಿ ಸಾಂಬಾರು ಪಧಾರ್ಥವಾಗಿ ಹಾಗು ಕೆಲವು ಚಿಕಿತ್ಸೆಗಳಿಗೆ ಓಷದವಾಗಿಯೂ ಸಹ ಬಳಸುತ್ತಾರೆ.ಈರುಳ್ಳಿಯಲ್ಲಿ ನಮ್ಮ ದೇಹಕ್ಕೆ ಬೇಕಾದ 'ಬಿ" ಮತ್ತು 'ಸಿ" ಪೋಷಕಾಂಶಗಳು ಹೇರಳವಾಗಿ ಲಭಿಸುತ್ತದೆ.
ಮಣ್ಣು ಹಾಗು ಹವಾಗುಣ : ಈರುಳ್ಳಿ ಬೆಳೆಗೆ ಮಣ್ಣಿನ ರಸಸಾರ 6 ರಿಂದ 8 ಉತ್ತಮ.ಇದನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯ ಬಹುದಾದರು ಸಹ ಉತ್ತಮ ಗೆಡ್ಡೆಗಳು ಚಳಿಗಾಲದಲ್ಲಿ ಮಾತ್ರ ದೊರೆಯುತ್ತದೆ.ಜೊಗು ಪ್ರದೇಶ ನೀರು ನಿಲ್ಲುವ ಜಾಗ ಸೂಕ್ತವಲ್ಲ.ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಸೂಕ್ತ.ಜೂನ್ -ಜುಲೈ . ಸೆಪ್ಟೆಂಬರ್ - ಅಕ್ಟೋಬರ್. ಜನವರಿ - ಪೆಬ್ರವರಿ.ನಾಟಿ ಮಾಡಲು ಸೂಕ್ತವಾದ ಕಾಲಗಳಾಗಿರುತ್ತದೆ.
ತಳಿಗಳು : ಆರ್ಕಾ ನಿಕೇತನ್.ಆರ್ಕಾ ಕಲ್ಯಾಣ್.ಆರ್ಕಾ ಪಿತಾಂಬರ್.ಅಗ್ರಿ ಪೊಂಡ್ ರೆಡ್.ನಾಸಿಕ್ ರೆಡ್.ಬೀಮಾ ರೆಡ್.ಬಳ್ಳಾರಿ ರೆಡ್.ತೆಲಗಿ ಬಿಳಿ.ತೆಲಗಿ ಕೆಂಪು.ಕುಮಟಾ.ರಾಂಪುರ.ಸತಾರ ಲೋಕಲ್.ಆರ್ಕಾ ಲಾಲಿಮ.ಬೆಂಗಳೂರು ಗುಲಾಬಿ.ಅಗ್ರಿ ಫೊಂಡ್ ರೋಸ್ ಇನ್ನು ಮುಂತಾದವು.
ಬೇಸಾಯ ಕ್ರಮ : ಈ ಬೆಳೆಯನ್ನ 3 ವಿಧದಲ್ಲಿ ಬಿತ್ತಬಹುದು.1.ಸಸಿ ನಾಟಿ. 2. ಗೆಡ್ಡೆ ನಾಟಿ. 3. ಕೂರಿಗೆ ಬಿತ್ತನೆ ಮತ್ತು ಚೆಲ್ಲುವದು.ಮೊದಲೆರಡನೆಯ ಪದ್ದತಿ ಇಂದ ಉತ್ತಮ ಬೆಳೆ ನಿರೀಕ್ಷಿಸಬಹುದು.
ಬೇಸಾಯ ಕ್ರಮ : ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ.ನಂತರ 15 ಸೆಂ.ಮೀ ಅಂತರದ ಸಾಲುಗಳು ಮಾಡಿ ನಂತರ ಹೆಕ್ಟೆರ್ ಗೆ 30 ಟನ್ ಕೊಟ್ಟಿಗೆ ಗೊಬ್ಬರ ಮತ್ತು 125 ಕಿ.ಗ್ರಾಂ ಸಾರಜನಕ.75 ಕಿ.ಗ್ರಾಂ ರಂಜಕ.125 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣದಲ್ಲಿ 50 ಶೇ ಗೊಬ್ಬರವನ್ನು ಸಾಲಿನಲ್ಲಿ ಚೆಲ್ಲಿ ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸ ಬೇಕು.ನಂತರ ಸಾಲಿನ ಒಂದು ಬದುವಿನಲ್ಲಿ 10 ಸೆಂ.ಮೀ ನಂತೆ ಸಸಿ.ಅಥವ ಗೆಡ್ಡೆಗಳನ್ನು ನಾಟಿ ಮಾಡಬೇಕು.

ನಾಟಿ ಮಾಡಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಕೊಟ್ಟು ಬುಡಕ್ಕೆ ಮಣ್ಣು ಕೊಡಬೇಕು.ಈರುಳ್ಳಿಯು ಮೇಲ್ಮಟ್ಟದ ಬೇರಿನ ಬೆಳೆಯಾದ್ದರಿಂದ ಕಳೆ ನಿರ್ಮೂಲನೆ ತುಂಬಾ ಅವಶ್ಯಕ.

ನೀರುನ ನಿರ್ವಹಣೆ : ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಕೊಯ್ಲು ಮಾಡುವ 15 ದಿನ ಮೊದಲೆ ನೀರನ್ನು ನಿಲ್ಲಿಸುವದರಿಂದ ಗಡ್ಡೆಗಳನ್ನು ದೀರ್ಘಕಾಲ ಸಂಗ್ರಹಿಸಿ ಇಡಲು ಸಾದ್ಯವಾಗುತ್ತದೆ.

ರೋಗಗಳು : ಥ್ರಿಪ್ಸ ನುಸಿ.ಸಸಿ ಕತ್ತರಿಸುವ ಹುಳು.ಜಿಗಿಹುಳು.ಕಾಡಿಗೆ ರೋಗ.ಬ್ಯ್ಲೆಟ್ ರೋಗ.ಎಲೆ ಚುಕ್ಕೆ ರೋಗ.ಈ ರೋಗಗಳನ್ನು ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ನಿರ್ವಹಿಸಿದರೆ ಅಧಿಕ ಇಳುವರಿ ಸಾದ್ಯ.
ಕೊಯ್ಲು ಮತ್ತು ಇಳುವರಿ : ತಳಿಗಳಿಗೆ ಅನುಗುಣವಾಗಿ 90 ರಿಂದ 140 ದಿನಕ್ಕೆ ಕೊಯ್ಲಿಗೆ ಬರುತ್ತವೆ.ಕೊಯ್ಲಿಗೆ ಬಂದ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿರುತ್ತವೆ.ನಂತರ ಅವನ್ನು ಅಗೆದು ಬಿಸಿಲಿನಲ್ಲಿ ಒಣಗಿಸುವದರಿಂದ ದೀರ್ಘಕಾಲ ಸಂಗ್ರಹಿಸಿಡಬಹುದು.ಇಳುವರಿ ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೆರ್ ಗೆ 20 ರಿಂದ 40 ಟನ್ ವರೆಗು ಇಳುವರಿ ಬರುತ್ತವೆ.








ಮಂಗಳವಾರ, ಜೂನ್ 22, 2021

ಬೆಂಡೆಕಾಯಿ ಬೆಳೆ ಮಾಹಿತಿ.

ಬೆಂಡೆಕಾಯಿ ನಮ್ಮ ರಾಜ್ಯದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದು.ಇದು ನಮ್ಮ ದೇಹಕ್ಕೆ ಬೇಕಾದ ವಿಟಮಿನ್ 'ಸಿ" ಜೀವಸತ್ವ ಮತ್ತು ಐಯೋಡಿನ್.ಹಾಗು ಕ್ಯಾಲ್ಸಿಯಂ ಗಳನ್ನು ಹೇರಳವಾಗಿ ಒದಗಿಸುತ್ತದೆ.
ಬೆಂಡೆಯ ಬೆಳೆಗೆ ಮಣ್ಣಿನ ರಸಸಾರ 6 ರಿಂದ 6.8 ಇರಬೇಕಾಗುತ್ತದೆ.ವಾರ್ಷಿಕ ಸರಾಸರಿ 450 ರಿಂದ 650 ಮಿ.ಮೀ ಮಳೆ ಬೀಳುವ ಪ್ರದೇಶ ಹಾಗೂ ಸರಾಗವಾಗಿ ನೀರು ಬಸಿದು ಹೋಗುವ ಎಲ್ಲಾ ಮಣ್ಣಿನಲ್ಲೂ ಬೆಳೆಯ ಬಹುದಾದರೂ ಎರೆ ಭೂಮಿ ಹಾಗೂ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು.
 ಬೆಂಡೆಕಾಯಿ ಬಿತ್ತನೆ ಕಾಲ : ಜೂನ್ ಮತ್ತು ಜುಲೈ .ಹಾಗು ಜನೆವರಿ ಮತ್ತು ಫೆಬ್ರವರಿ ಬಿತ್ತನೆಗೆ ಸೂಕ್ತವಾದ ಕಾಲ.ರಾತ್ರಿಯ ವಾತಾವರಣದಲ್ಲಿ ಉಷ್ಣಾಂಶವು 100 ಸೆ. ಗಿಂತ ಕಡಿಮೆಯಾದ ಸಂದರ್ಭದಲ್ಲಿ ಬೀಜ ಸರಿಯಾಗಿ ಮೊಳಕೆ ಹೊಡೆಯದೆ ಬೆಳೆಯ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮಗಳಾಗುತ್ತದೆ.
ಬೆಂಡೆಕಾಯಿ ತಳಿಗಳು : ಆರ್ಕಾ ಅಭಯ್.ಪೂಸಾ ಸವಾನಿ.ವಯ್ಟ್ ವೆಲ್ವೆಟ್ (ಹಾಲು ಬೆಂಡೆ).ಪರ್ಬಾನಿ ಕ್ರಾಂತಿ.ಆರ್ಕಾ ಅನಾಮಿಕ.ಮುಂತಾದವು.
ಬೆಂಡೆಕಾಯಿ ಬಿತ್ತನೆ : ಭೂಮಿಯನ್ನು ಉಳುಮೆ ಮಾಡಿ ಹೆಂಡೆ ಒಡೆದು ಸಣ್ಣ ಮಣ್ಣು ಮಾಡಿ 60 ಸೆಂ.ಮೀ ಅಂತರದ ಸಾಲುಗಳನ್ನು ಮಾಡಿ ಸಾಲಿನಲ್ಲಿ ಸಾವಯವ ಕೊಟ್ಟಿಗೆ ಗೊಬ್ಬರ ಬೆರೆಸಿ.ನಂತರ 150 ಕಿ. ಗ್ರಾಂ ಸಾರಜನಕ .75 ಕಿ.ಗ್ರಾಂ ರಂಜಕ.50 ಕಿ.ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ ಶೇ.50 ಗೊಬ್ಬರವನ್ನು ಸಾಲಿನಲ್ಲಿ ಮಣ್ಣಿಗೆ ಬೆರೆಸಿ.ನೀರು ಬಿಟ್ಟು ನಂತರ ಬೀಜದಿಂದ ಬೀಜಕ್ಕೆ 30 ಸೆಂ.ಮೀ ಅಂತರದಲ್ಲಿ ಬೀಜವನ್ನು ಊರಿಸಬೇಕು.ನಂತರ ಸ್ಥಳೀಯ ಮತ್ತು ಮಣ್ಣಿನ ವಾತಾರಣಕ್ಕೆ ಅನುಗುಣವಾಗಿ 3 ರಿಂದ 5 ದಿನಕ್ಕೊಮ್ಮೆ ನೀರು ಬಿಡಬೇಕು.ನಂತರ ಬಿತ್ತಿದ 20 ರಿಂದ 30 ದಿನದೊಳಗೆ ಅಂತರ ಬೇಸಾಯ.ಕಳೆನಿರ್ಮೂಲನೆ ಮಾಡಿ ಉಳಿದ ಶೇ 50 ಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡಿ ಸಸಿಗಳ ಬುಡಕ್ಕೆ ಮಣ್ಣು ಹೇರಿ ಕೊಡಬೇಕು.
ಬೆಂಡೆಕಾಯಿ ಬೆಳೆಗೆ ತಗುಲುವ ರೋಗಗಳು : 
ಬಿಳಿ ನೊಣ.ಜಿಗಿ ಹುಳು.ಥ್ರಿಪ್ಸ್ ನುಸಿ.ಮಯ್ಟ್ ನುಸಿ.ರೆಂಬೆ ಕೊರೆಯುವ ಹುಳು.ಕಾಯಿ ಕೊರಕ ಹುಳು.ಹಳದಿ ನಂಜು.ಬೂದಿರೋಗ.ಎಲೆಚುಕ್ಕೆ.ಗಂಟುಬೇರು ರೋಗ.ಈ ಎಲ್ಲಾ ರೋಗ ಲಕ್ಷಣಗಳ ಕಂಡ ತಕ್ಷಣ ತಙ್ನರ ಸಲಹೆ ಮೇರೆಗೆ ರೋಗಗಳನ್ನ ಹತೋಟಿ ಮಾಡಿದರೆ ಉತ್ತಮ ಇಳುವರಿ ಲಭಿಸುತ್ತದೆ.
ಕೊಯ್ಲು ಮತ್ತು ಇಳುವರಿ : 
ಬಿತ್ತಿದ 45 ರಿಂದ 65 ನೇ ದಿನಕ್ಕೆ ಮೊದಲ ಬಾರಿ ಕೊಯ್ಲು ಬರುತ್ತದೆ.ನಂತರ ಪ್ರತಿ 2 ರಿಂದ 3 ದಿನಕ್ಕೊಮ್ಮೆ ಎಳೆ ಹಸಿರು ಕಾಯಿಗಳ ದೊರೆಯುತ್ತವೆ.ನಂತರ 4 ರಿಂದ 6 ವಾರಗಳ ವರೆಗೆ ನಿರಂತರ ಕೊಯ್ಲು ಮಾಡಬಹುದು.ಪ್ರತಿ ಹೆಕ್ಟೇರ್ ಗೆ ತಳಿಗಳಿಗೆ ಅನುಗುಣವಾಗಿ 15 ರಿಂದ 20 ಟನ್ ಇಳುವರಿ ಪಡೆಯಬಹುದು.

ಸೋಮವಾರ, ಜೂನ್ 21, 2021

ಬಟಾಣಿ ಬೆಳೆ.

ಬಟಾಣಿ ಬೆಳೆ ಒಂದು ದ್ವಿದಳ ಧಾನ್ಯ ಬೆಳೆಯಾಗಿದ್ದು.ಇದನ್ನು ಹಸಿ ತರಕಾರಿ ಹಾಗು ಒಣದಾನ್ಯವಾಗಿಯೂ ಬಳಸಬಹುದು.ಇದರಲ್ಲಿ ಮನುಷ್ಯನಿಗೆ ಅವಶ್ಯಕವಾದ ವಿಟಮಿನ್ 'ಎ" 'ಸಿ" 'ಬಿ" ಮತ್ತು ಕ್ಯಾರೊಟಿನ್.ಮ್ಯಾಂಗನೀಸ್.ರಂಜಕ.
ಪೊಟ್ಯಾಶ್.ಲೆಸಿನ.ಮತ್ತು ಅಮಿನೊ ಆಮ್ಮಗಳು ಹೇರಳವಾಗಿರುತ್ತದೆ.ಜೊತೆಗೆ ಇದೊಂದು ದ್ವಿದಳ ದಾನ್ಯವಾದ್ದರಿಂದ ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಬಟಾಣಿ  ಬೆಳೆಗೆ ಮಣ್ಣಿನ ರಸಸಾರ 5.5 ಇಂದ 7.5 ರ ವರೆಗಿನ ಮಣ್ಣಿನಲ್ಲಿ ಚೆನ್ನಾಗಿ ಬರುತ್ತದೆ.ಇದೊಂದು ಚಳಿಗಾಲದ ಬೆಳೆಯಾಗಿದ್ದು ಹೆಚ್ಚಿನ ಉಷ್ಣಾಂಶದಲ್ಲಿ ಇಳುವರಿ ಕಡಿಮೆಯಾಗುತ್ತದೆ.ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯ ಬಹುದಾದರೂ ಮರಳು ಮಿಶ್ರಿತ ಕೆಂಪು.ಮರಳು ಮಿಶ್ರಿತ ಕಪ್ಪುಮಣ್ಣು ಸೂಕ್ತವಾದದ್ದು.
ಬಿತ್ತನೆ ಕಾಲ : 
ಮಳೆಗಾಲದ ಬೆಳೆಯಾಗಿ ಜೂನ್ - ಜುಲೈನಲ್ಲಿ. ಮತ್ತು ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಬಿತ್ತನೆ ಮಾಡಬಹುದು.
ಬಟಾಣಿ ತಳಿಗಳು : 
ಅರ್ಕಾ ಪ್ರಿಯಾ.ಬೆಂಗಳೂರು ಲೋಕಲ್.ಆರ್ಶೆಲ್.ಅರ್ಕಾ ಅಜಿತ್.ಅರ್ಕಾ ಸಂಪೂರ್ಣ.ಅರ್ಕಾ ಪ್ರಮೋದ್.ಅರ್ಲಿ ಬ್ಯಾಡ್ಜರ್.ಬೊನ್ನೆ ವಿಲ್ಲೆ.ಬಿ ಆರ್ 2. ಬಿ ಆರ್ 12. ಎನ್ ಪಿ 29.ಇನ್ನು ಮುಂತಾದವು.

ಬಟಾಣಿ ಬಿತ್ತನೆ ಪದ್ದತಿ : 
ಭೂಮಿಯನ್ನು ಹದಮಾಡಿದ ನಂತರ 60 ಸೆಂ ಮಿ ಅಂತರದಲ್ಲಿ ಎತ್ತರಕ್ಕೆ ಮಣ್ಣು ಬರುವಂತೆ ಸಾಲುಗಳನ್ನು ಮಾಡಿ ಕೊಟ್ಟಿಗೆ  ಗೊಬ್ಬರದ ಜೊತೆ 30 ಕೆ ಜಿ ಸಾರಜನಕ.50 ಕೆ ಜಿ ರಂಜಕ.50 ಕೆ ಜಿ ಪೊಟ್ಯಾಶ್ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿಗೆ ಬೆರೆಸ ಬೇಕು.ನಂತರ ತೆಳುವಾಗಿ ನೀರು ಕೊಟ್ಟು ಸಾಲಿನ ದಿಣ್ಣೆಯ ಮೇಲೆ ಬೀಜವನ್ನು ಊರಬೇಕು.ಪ್ರತಿ ಹೆಕ್ಟೇರ್ ಗೆ 35 ರಿಂದ 40 ಕೆ ಜಿ ಬೀಜಗಳು ಬೇಕಾಗುತ್ತದೆ.

ನಿರ್ವಹಣೆ : 
ಬಿತ್ತಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ.4 ವಾರಗಳ ನಂತರ ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.ಉತ್ತಮ ಗುಣಮಟ್ಟದ ಕಾಯಿ ಮತ್ತು ಇಳುವರಿಗೆ ಕೋಲು ಮತ್ತು ಹುರಿಯನ್ನು ಮಾಡಿ ಬಳ್ಳಿಗೆ ಆಸರೆ ಕೊಡುವದು ಉತ್ತಮ.
ಮಣ್ಣಿನ ಗುಣ ಲಕ್ಷಣ ಮತ್ತು ವಾತಾವರಣಕ್ಕೆ ಅನುಗುಣವಾಗಿ ವಾರಕ್ಕೊಮ್ಮೆ ನೀರು ಕೊಡಬೇಕು.

ರೋಗಗಳು : 
ಬೂದಿರೋಗ.ಕಾಯಿ ಕೊಳೆ.ತುಕ್ಕು ರೋಗ.ಕಾಂಡ ಕೊಳೆ.ಕಾಯಿ ಕೊರೆವ ಹುಳು.ಹೇನು.ಬೇರು ಕೊಳೆ .ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗುಲುವ ರೋಗಗಳನ್ನ ನಿರ್ವಹಣೆ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.
ಕೊಯ್ಲು : 
ನಾಟಿ ಮಾಡಿದ 45 ರಿಂದ 55 ದಿನಕ್ಕೆ ಹೂವಿಗೆ ಬರುವ ಗಿಡಗಳು ನಂತರದ ಎರಡು ವಾರದಲ್ಲಿ ಕಾಯಿಗಳನ್ನು ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ 70 ರಿಂದ 100 ದಿನದ ಅವದಿಯಲ್ಲಿ ಕೊಯ್ಲು ಪೂರ್ಣವಾಗುತ್ತದೆ.

ಇಳುವರಿ : 
ಎಳೆ ಹಸಿರು ಕಾಯಿಯನ್ನು ತರಕಾರಿಯ ಸಲುವಾಗಿ ಕೀಳಬಹುದು.ಬಲಿತ ಕಾಯಿಗಳನ್ನು ಒಣಕಾಳುಗಳಾಗಿ ಕೀಳಬಹುದು.ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೇರ್ ಗೆ 60 ರಿಂದ 80 ಟನ್ ಇಳುವರಿ ಪಡೆಯಬಹುದು.

ಭಾನುವಾರ, ಜೂನ್ 20, 2021

ತರಕಾರಿಗಳ ರಾಜ ಟೊಮ್ಯಾಟೊ ಬೆಳೆ.

ಟೊಮ್ಯಾಟೊ ಬೆಳೆಯಲ್ಲಿ ಅತ್ಯದಿಕ ಇಳುವರಿ ನೀಡುವ ಸಂಕರಣ ತಳಿಗಳ ಆವಿಷ್ಕಾರದಿಂದ ಇತ್ತೀಚೆಗೆ ಟೊಮ್ಯಾಟೊ ಒಂದು ದುರಂತದ ಬೆಳೆ ಎನ್ನ ಬಹುದು.ಟೊಮ್ಯಾಟೊ ನಮ್ಮ ರಾಜ್ಯದ ಜನಪ್ರಿಯ ತರಕಾರಿಗಳಲ್ಲಿ ಒಂದು.ಇದು ನಮಗೆ ಎ.ಬಿ.ಮತ್ತು ಸಿ ಜೀವಸತ್ವಗಳನ್ನ ಒದಗಿಸುತ್ತದೆ.
ಈ ಬೆಳೆಯನ್ನು ನೀರು ನಿಲ್ಲುವ ಆಮ್ಲಯುಕ್ತ ಮಣ್ಣನ್ನು ಹೊರತು ಪಡಿಸಿ.ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯ ಬಹುದು.ಸಾಧಾರಣ ಕಪ್ಪು.ಮರಳು ಮಿಶ್ರಿತ ಕಪ್ಪು.ಮರಳು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ.ಮಣ್ಣಿನ ರಸಸಾರ 6 ರಿಂದ 7  ಇದ್ದರೆ ತುಂಬಾ ಉಪಯುಕ್ತ.
ವರ್ಷದ ಮೂರೂ ಕಾಲದಲ್ಲಿ ಈ ಬೆಳೆಯನ್ನು ಬೆಳೆಯಬಹುದಾದರು ವಾರ್ಷಿಕ 70 ರಿಂ 90 ಸೆಂ ಮೀ ಮಳೆ ಬೀಳುವ ಪ್ರಧೇಶದಲ್ಲಿ ಜುಲೈ ಇಂದ ಅಕ್ಟೋಬರ್ ವರೆಗೆ ಉತ್ತಮ ಬೆಳೆ ಮತ್ತು ಇಳುವರಿ ನಿರೀಕ್ಷಿಸಬಹುದು.
ತಳಿಗಳು:
ಡಿ.ಎಂ.ಟಿ.1.
ಡಿ.ಎಂ.ಟಿ.2.
ಡಿ.ಎಂ.ಟಿ.5.
ಆರ್ಕಾ: ರಕ್ಷಕ್.ಮೇಘಾಲಿ.ಅನನ್ಯ.ಆಶಿಶ್.ಸಾಮ್ರಾಟ್ .ಅಭಾ.ವಿಕಾಸ್.ಅಲೋಕ್.
ಸಂಕ್ರಾಂತಿ.ನಂದಿ.
ಇತ್ತೀಚಿನ ಇನ್ನೂ ಹೋಸ ಸಂಕರಣ ತಳಿಗಳು.
ಸಸಿಗಳನ್ನು ಸಸಿ ಮಡಿ ಮತ್ತು ಪ್ಲಾಸ್ಟಿಕ್ ಟ್ರೇ ಕೋಕೊಪಿಟ್ ಪದ್ದತಿಯಲ್ಲಿ ತಯಾರಿಸಿಕೊಳ್ಳಬಹುದು.ಆರೋಗ್ಯ ಮತ್ತು ಉತ್ತಮ ಬೆಳವಣಿಗೆಗಾಗಿ ಕೋಕೊ ಪಿಟ್ ಟ್ರೇ ಪದ್ದತಿಯಲ್ಲಿ ಸಸಿಗಳನ್ನ ಬೆಳೆಸಿಕೊಳ್ಳುವದೆ ಉತ್ತಮ.
  ಟೊಮ್ಯಾಟೊ  ನಾಟಿ ಪದ್ದತಿ :
 ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಹೆಂಡೆಗಳನ್ನು ಒಡೆದು ಸಣ್ಣ ಮಣ್ಣಾಗಿ ಮಾಡಿ ಸಮತಟ್ಟು ಮಾಡಿಕೊಳ್ಳಬೇಕು.ನಂತರ 90 ಸೆಂ ಮೀ ಅಂತರದಲ್ಲಿ ಸಾಲುಗಳನ್ನು ಮಾಡಿ ಸಾಲಿನ ಮದ್ಯೆ ಹೆಕ್ಟೆರ್ ಗೆ 25 ರಿಂದ 30 ಟನ್ ಕೊಟ್ಟಿಗೆ ಗೊಬ್ಬರ ಚೆಲ್ಲಿ ಮಣ್ಣಲ್ಲಿ ಬೆರೆಸಬೇಕು.ನಂತರ ಹೆಕ್ಟೇರ್ ಗೆ 200 ಕಿ ಗ್ರಾಂ ಸಾರಜನಕ .200 ಕಿ ಗ್ರಾಂ ರಂಜಕ.200 ಕಿ ಗ್ರಾಂ ಪೊಟ್ಯಾಶ್ ಮಿಶ್ರಣ ಮಾಡಿದ ಗೊಬ್ಬರದ 40% ಗೊಬ್ಬರವನ್ನು ಮೊದಲ ಕಂತಿನಲ್ಲಿ ಮಣ್ಣಿಗೆ ಬೆರೆಸಿ ನೀರನ್ನು ಹಾಯಿಸ ಬೇಕು ಹನಿ ನೀರಾವರಿಯಾದರೆ ಇನ್ನೂ ಉತ್ತಮ.ನಂತರ  ಸಾಲಿನ ಒಂದು ಬದುವಿನ  ಮೇಲೆ  45 ಸೆ ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು.
ಪ್ರತಿ ಹತ್ತು ಸಾಲಿನ ನಡುವೆ ಒಂದು ಸಾಲು ಚೆಂಡು ಹೂ.ಮೆಕ್ಕೆಜೋಳ.ಸಚ್ಚೆ.ಬಿಳಿಜೋಳಗಳನ್ನ ಬೆಳೆಯುವದರಿಂದ  ರೋಗಗಳ ಮೇಲೆ ನಿಯಂತ್ರಣ ಸಾಧಿಸಬಹದು.
 ಟೊಮ್ಯಾಟೊ ಬೆಳೆಯಲ್ಲಿ ನೀರಾವರಿ ಪದ್ದತಿ :
ಮಣ್ಣು ಮತ್ತು ಸ್ಥಳೀಯ ಪ್ರತಿಕೂಲ ಹವಾಮಾನಕ್ಕೆ ಅನುಗುಣವಾಗಿ ಪ್ರತಿ 4 ರಿಂದ 5 ದಿನಕ್ಕೊಮ್ಮೆ ನೀರು ಕೊಡಬೇಕು.ಅಂತರ ಬೇಸಾಯ ಮತ್ತು ಕಳೆ ನಿರ್ಮೂಲನೆಯ ನಂತರ ನಾಟಿ ಮಾಡಿದ ನಾಲ್ಕನೆ ವಾರದಲ್ಲಿ ಉಳಿದ 60% ಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು.ನಂತರ 30 ಸೆಂ ಮೀ ಬೆಳೆದ ಗಿಡಗಳ ಕವಲು ಟೊಂಗೆಗಳನ್ನು ಕತ್ತರಿಸಿ 2 ರಿಂದ 2.5 ಮೀ ಉದ್ದನೆಯ ಕೋಲುಗಳನ್ನು ನೆಟ್ಟು ಗಿಡಗಳಿಗೆ ಆಸರೆಯನ್ನು ಒದಗಿಸಿ ಎತ್ತಿ ಕಟ್ಟಬೇಕು.ಹೀಗೆ ಮಾಡುವದರಿಂದ ಒಳ್ಳೆಯ ಗುಣಮಟ್ಟದ ಕಾಯಿ ಮತ್ತು ಇಳುವರಿಯನ್ನು ಹೆಚ್ಚಿಸಬಹುದು.
ಟೊಮ್ಯಾಟೊ ಬೆಳೆಗೆ ತಗಲುವ ರೋಗಗಳು : 
ಎಲೆ ತಿನ್ನುವ ಕೀಟ.ಎಲೆ ಸುರಂಗ ಕೀಟ.ಹಣ್ಣು ಕೊರೆಯುವ ಹುಳು.ಬಿಳಿನೊಣ.ಹೇನು.ಜಿಗಿಹುಳು.ದುಂಡಾಣು ಸೊರಗು ರೋಗ.ಕೊನೆ ಅಂಗಮಾರಿ ರೋಗ.ಎಲೆ ಚುಕ್ಕಿ.ಎಲೆ ಮುಟುರು.ಬೂದಿರೋಗ.ಗಂಟು ಬೇರು ರೋಗ.ಹೀಗೆ ಹಲವಾರು ಹಂತದ ಬೆಳೆಯಲ್ಲಿ ಕಾಲ ಕಾಲಕ್ಕೆ ಬರುವ ರೋಗಗಳನ್ನು ತಙ್ನರ ಸಲಹೆ ಮೇರೆಗೆ ರೋಗಗಳನ್ನ ನಿಯಂತ್ರಿಸುವ ಮೂಲಕ ಅಧಿಕ ಇಳುವರಿ ಪಡೆಯಬಹುದು.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 60 ರಿಂದ 70 ದಿನಗಳಿಗೆ ಕೊಯ್ಲಿಗೆ ಬರುತ್ತದೆ ತಳಿ ಮತ್ತು ಕಾಲಕ್ಕನುಗುಣವಾಗಿ 6 ರಿಂದ 8 ವಾರಗಳವರೆಗೆ ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ  ಹೆಕ್ಟೆರ್  ಗೆ 30 ರಿಂದ 60 ಟನ್ ಇಳುವರಿಯನ್ನ ಪಡೆಯಬಹುದು.

ಬುಧವಾರ, ಜೂನ್ 16, 2021

ನುಗ್ಗೆಕಾಯಿ ಕ್ರುಷಿ ಮಾಹಿತಿ.

ನುಗ್ಗೆಕಾಯಿ ಒಂದು ಬಹುವಾರ್ಷಿಕ ಬೆಳೆಯಾಗಿದ್ದು.ಇದರ ಕಾಯಿಗಳಲ್ಲದೆ ಹೂವು ಹಾಗೂ ಸೊಪ್ಪುಗಳನ್ನು ಸಹ ತರಕಾರಿಯಂತೆ ಉಪಯೋಗಿಸ ಬಹುದು.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ 'ಸಿ" ಕ್ಯಾರೋಟಿನ್.ಐರನ್.ರಂಜಕ.ಕ್ಯಾಲ್ಸಿಯಂ .ಸಾಕಷ್ಟು ಪ್ರಮಾಣದಲ್ಲಿವೆ.ನುಗ್ಗೆಕಾಯಿಯೂ ಸಹ ರಂಜಕ ಮತ್ತು ಕ್ಯಾರೋಟಿನ್  ಒದಗಿಸುತ್ತದೆ.
ನುಗ್ಗೆಕಾಯಿಯನ್ನು ಮಣ್ಣಿನ ರಸ ಸಾರ  6 ರಿಂದ 6.7 ಇರುವಂತಹ ಸಾಧಾರಣವಾಗಿ ಎಲ್ಲಾ ಮಣ್ಣಿನಲ್ಲೂ ಬೆಳೆಯಬಹುದು.ಅತಿಯಾದ ಜಿಗುಟು ಮಣ್ಣು ಇದಕ್ಕೆ ಯೋಗ್ಯವಲ್ಲ.ಅಲ್ಪ ಮಳೆ ಬೀಳುವ ಒಣ ಪ್ರಧೇಶ ಬೆಳೆಯಾಗಿದ್ದು ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಇದನ್ನು ನಾಟಿ ಮಾಡಬಹುದು.

ನುಗ್ಗೆಕಾಯಿ ತಳಿಗಳು: 
ಪಿ.ಕೆ.ಎಂ-1.  ಭಾಗ್ಯ (ಕೆ.ಡಿ.ಎಮ್-01).
ಧನರಾಜ (ಸೆಲೆಕ್ಷನ್ 6/4). ಜಿ.ಕೆ.ವಿ.ಕೆ.1.
ಜಿ.ಕೆ.ವಿ.ಕೆ.2.   ಜಿ.ಕೆ.ವಿ.ಕೆ 3.
ಸಸಿ ತಯಾರಿಸುವ ವಿಧಾನ.1kg ಮಣ್ಣಿನ ಪಾಲಿಥೀನ್ ಚೀಲದಲ್ಲಿ 2:1:1 ಅನುಪಾತದಲ್ಲಿ ಮಣ್ಣು.ಮರಳು.ಕೊಟ್ಟಿಗೆ ಗೊಬ್ಬರ ಬೆರೆಸಿ ತುಂಬಬೇಕು 2 ಸೆಂ.ಮೀ ಆಳದಲ್ಲಿ ಪ್ರತಿ ಚೀಲದಲ್ಲೂ 2 ಬೀಜ ಉರಬೇಕು.ಪ್ರತೀ ಚೀಲಕ್ಕೂ 5 ಗ್ರಾಂ ನಂತೆ ರಾಸಾಯನಿಕ ಗೊಬ್ಬರ ನೀಡಿ ದಿನಕ್ಕೊಮ್ಮೆ ನೀರು ಬಿಡಬೇಕು.7 ರಿಂದ 10 ದಿನದಲ್ಲಿ ಮೊಳಕೆ ಬರುತ್ತವೆ.4 ರಿಂದ 5 ನೇ ವಾರಕ್ಕೆ ನಾಟಿ ಮಾಡಲು ಸಿದ್ದವಾಗುತ್ತದೆ.
ನುಗ್ಗೆಕಾಯಿ ನಾಟಿ ಪದ್ದತಿ : 
60 ಘನ ಸೆಂ ಮೀ ಗುಣಿಗಳನ್ನ 5 ಮೀ ಅಂತರದಲ್ಲಿ ತೆಗೆದು ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ತುಂಬಿ ಗಿಡಗಳನ್ನ ನೆಡಬೇಕು.ನಂತರ ಸಾರಜನಕ 50 ಕಿ ಗ್ರಾಂ.ರಂಜಕ 125 ಕಿ ಗ್ರಾಂ. ಪೊಟ್ಯಾಶ್ 30 ಕಿ ಗ್ರಾಂ ಮಿಶ್ರಣದ ಗೊಬ್ಬರವನ್ನು ಪ್ರತಿ ಹೆಕ್ಟೇರ್ ಗೆ ನೀಡಬೇಕು. ಸಸಿ ನಾಟಿ ಮಾಡಿದ 60 ರಿಂದ 70 ದಿನಕ್ಕೆ ಮುಖ್ಯ ಹರೆಯನ್ನು ಚಿವುಟ ಬೇಕು ನಂತರ 30 ರಿಂದ 40 ನಂತರ ಕವಲು ಹರೆಗಳನ್ನ ಚಿವುಟ ಬೇಕು.ಈ ರೀತಿ ಮಾಡುವದರಿಂದ ಕವಲುಗಳು ಹೆಚ್ಚು ಒಡೆದು ತಳಿಯು ಗಿಡ್ಡವಾಗಿ ಕಾಯಿ ಕೊಯ್ಲು ಮಾಡುವಾಗ ಅನುಕೂಲವಾಗುತ್ತದೆ.
ನುಗ್ಗೆಕಾಯಿ ಬೆಳೆಗೆ ತಗುಲುವ ರೋಗಗಳು:
 ಬೂದಿರೋಗ.ಎಲೆ ಚುಕ್ಕೆರೋಗ.ಹೇನು.ಹೂ ಮೊಗ್ಗಿನ ಕಾಯಿ ಕೊರಕ.ಕಪ್ಪು ಕಂಬಳಿ ಹುಳು.ಈ ರೋಗಗಳನ್ನು ಕಾಲ ಕಾಲಕ್ಕೆ ತಙ್ನರ ಸಲಹೆ ಮೇರೆಗೆ ನೀವಾರಿಸ ಬಹುದು.
ನಾಟಿ ಮಾಡಿದ 8 ರಿಂದ 9 ತಿಂಗಳಿಗೆ ಹೂವು ಕಾಯಿ ಶುರುವಾಗುತ್ತವೆ.ಪ್ರತಿ ಗಿಡದಿಂದ ಬಲಿತ 200 ರಿಂದ 250 ಕಾಯಿ ಪಡೆಯಬಹುದು.

ಭಾನುವಾರ, ಜೂನ್ 13, 2021

ಮೆಣಸಿನಕಾಯಿ ಬೆಳೆ ಮಾಹಿತಿ.

ಮೆಣಸಿನಕಾಯಿ ಮನುಷ್ಯನ ದೇಹಕ್ಕೆ ಬೇಕಾದ ' ಎ" ಮತ್ತು 'ಸಿ" ವಿಟಮಿನ್ ಅನ್ನು ಒದಗಿಸುವ ಒಂದು ಮುಖ್ಯವಾದ ತರಕಾರಿ.ಇದನ್ನು ಒಣ ಸಾಂಬಾರು ಪದಾರ್ಥಗಳನ್ನಾಗಿಯು ಬಳಸಬಹುದು.
ಮೆಣಸಿನಕಾಯಿ ಬೆಳೆಯನ್ನು.ಬೇಸಿಗೆ ಮತ್ತು ಮಳೆಗಾಲ ಮತ್ತು ಚಳಿಗಾಲ ಮೂರು ಹವಾಮಾನದಲ್ಲೂ ಬೆಳೆಯಬಹುದು.ಖುಷ್ಕಿ ಬೆಳೆಯಾಗಿ ಮೇ _ ಜೂನ್.ಅಲ್ಲಿ.ನೀರಾವರಿ ಬೆಳೆಯಾಗಿ ಅಕ್ಟೋಬರ್ _ ನವೆಂಬರ್ . ಮತ್ತು ಜನವರಿ _ ಫೆಬ್ರವರಿ  ತಿಂಗಳುಗಳು ಸೂಕ್ತವಾದ ಕಾಲ.
ಮೆಣಸಿನ ಕಾಯಿಯಲ್ಲಿ ಸ್ಥಳೀಯ ತಳಿಗಳು:
ಬ್ಯಾಡಗಿ ಕಡ್ಡಿ.ಬ್ಯಾಡಗಿ ಡಬ್ಬಿ.ಕೊಳ್ಳೆಗಾಲ.ದ್ಯಾವನೂರು.ಗುಂಟೂರು.ಗೊರಿಬಿದನೂರು.ಸಂಕೇಶ್ವರ.ಕಾದರೊಳಿ.ಚಿಂಚೊಳಿ.ಪೂಸಾ ಜ್ವಾಲ.ಬಾಗ್ಯಲಕ್ಷ್ಮಿ.ಆರ್ಕಾ ತಳಿಗಳು ಉತ್ತಮ.
ಮೆಣಸಿನಕಾಯಿ ನಾಟಿ ವಿಧಾನ:
ಆಳವಾಗಿ ಉಳುಮೆ ಮಾಡಿದ ಭೂಮಿಯನ್ನು ಸಿದ್ದಪಡಿಸಿಕೊಂಡು 75ಸೆಂ ಮೀ ಅಂತರದಲ್ಲಿ ಎತ್ತರಕ್ಕೆ ಮಣ್ಣು ಹೇರುವಂತೆ ಸಾಲು ಮಾಡಿ ಸಾಲಿನಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಶೇ.50 ಸಾರಜನಕ.ರಂಜಕ.ಪೊಟ್ಯಾಷ್ ಗೊಬ್ಬರವನ್ನು ಹಾಕಿ ನೀರು ಹಾಸಿ ನಂತರ ಗಿಡದಿಂದ ಗಿಡಕ್ಕೆ 45 ಸೆಂ.ಮೀ. ಅಂತರದಲ್ಲಿ ಸಾಲಿನ ಎತ್ತರದ ಮಣ್ಣಿನ ಮೇಲೆ ನಾಟಿ ಮಾಡಿ.

ನೀರಾವರಿ:
ಮಣ್ಣು ಹಾಗು ಹವಾಗುಣವನ್ನಾದರಿಸಿ ಕಪ್ಪು ಮಣ್ಣಿನಲ್ಲಿ 15 ದಿನಕ್ಕೊಮ್ಮೆ.ಕೆಂಪು ಮಣ್ಣಿನಲ್ಲಿ 5 ರಿಂದ 8 ದಿನಕ್ಕೊಮ್ಮೆ ನೀರು ಕೊಡಬಹುದು.
ನಂತರ ಕಳೆ ನಿರ್ವಹಣೆ ಮಾಡಿ ಮೇಲು ಗೊಬ್ಬರವಾಗಿ ಶೇ.50 ರಷ್ಟು ಸಾರಜನಕ.ರಂಜಕ .ಪೊಟ್ಯಾಷ್ ಗೊಬ್ಬರವನ್ನು ಕೊಟ್ಟು ಗಿಡಗಳ ಬುಡಕ್ಕೆ ಮಣ್ಣನ್ನು ಹೇರಬೇಕು.

ಕೀಟ ಮತ್ತು ರೋಗಗಳು:
ಥ್ರಿಪ್ಸ್.ನುಸಿ.ಹೇನು.ಜೇಡ.ಬಿಳಿನೊಣ.ಸಸಿ ಕತ್ತರಿಸುವ ಹುಳು.ಕಾಯಿ ಕೊರಕ.ಸಸಿ ಕೊಳೆ.ಎಲೆ ಚುಕ್ಕಿ.ಬೂದಿರೋಗ.ಹಣ್ಣುಕೊಳೆ ರೋಗ.ಎಲೆ ಮುಟುರು.ಚಿಬ್ಬುರೋಗ.ಹಲವಾರು ರೋಗಗಳಿದ್ದು ಕಾಲ ಕಾಲಕ್ಕೆ ಆ ರೋಗಗಳಿಗೆ ತಜ್ಞರ ಸಲಹೆಯಂತೆ ರೋಗ ನಿಯಂತ್ರಣ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು.
ಮೆಣಸಿನಕಾಯಿ ಕೊಯ್ಲು:
ನಾಟಿ ಮಾಡಿದ 60 ರಿಂದ 70 ದಿನದಲ್ಲಿ ಹಸಿಕಾಯಿಗಳ ಕೊಯ್ಲು ಮಾಡಬಹುದು.ನಾಟಿ ಮಾಡಿದ 90 ರಿಂದ 110 ದಿನಗಳವರೆಗೆ ಒಣ ಕಾಯಿಗಳನ್ನ ಕೊಯ್ಲು ಮಾಡಬಹುದು.

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...