ಮಾವಿನ ಹಣ್ಣಿನ ತಳಿಗಳು:
ಬಾದಾಮಿ.ರಸಪೂರಿ.ತೋತಾಪುರಿ.ಐಶ್ವರ್ಯ.ಬೆನೆಶಾನ್.ನೀಲಂ.ಮಲಗೋವಾ.ಮಲ್ಲಿಕಾ.ದಶಹರಿ.ಕೇಸರ್.ಖಾದರ್.ನೀಲ್ಗೋವ.ರತ್ನ.ಆಮ್ರಪಾಲಿ.ನೀಲೇಶಾನ್.ಮುಂಡಪ್ಪ.ಕರಇಶಾಡ್.ಬೆನೆಟ್.
ಉಪ್ಪಿನಕಾಯಿ ತಳಿಗಳು:
ಅಪ್ಪೆಮಿಡಿ.ಆಮ್ಲೆಟ್.ಜೀರಿಗೆ.ಕೊಸಜಿಪಟೇಲ.
ಮಾವಿನ ಸಸಿಗಳ ನಾಟಿಯ ಅಂತರ :
ಇತ್ತೀಚೆಗೆ ಮಾವನ್ನು ಅಧಿಕ ಸಾಂದ್ರತೆಯಲ್ಲಿ ಕಡಿಮೆ ಅಂತರ ಕೊಟ್ಟು ಬೆಳೆಸುವದು ಜನಪ್ರಿಯವಾಗುತ್ತಿದೆ.ಇದರ ಅನುಕೂಲವೇನೆಂದರೆ ಪ್ರತಿ ಹೆಕ್ಟೆರ್ ಗೆ ನಾಟಿ ಮಾಡುವ ಸಸಿಗಳ ಸಂಕ್ಯೆ ಹೆಚ್ಚಿಸುವದು ಮತ್ತು ಇಳುವರಿ ಹೆಚ್ಚಿಸುವದು.ವಿಶೇಷವಾಗಿ ಎಲ್ಲಾ ತಳಿಗಳು ಅಧಿಕ ಸಾಂದ್ರತೆಗೆ ಒಗ್ಗುವದಿಲ್ಲ.ಕಡಿಮೆ ಸಾಂದ್ರತೆಗೆ ಹೊಂದುವಂತಹ ಗಿಡ್ಡ ತಳಿಗಳನ್ನೆ ಆರಿಸುವದು ಸೂಕ್ತ.
ಅಂತರ : 5 ಮೀ x 5 ಮೀ = 400 ಗಿಡ ಹೆಕ್ಟೇರ್ ಗೆ.
8 ಮೀ x 8 ಮೀ = 156 ಗಿಡ ಹೆಕ್ಟೇರ್ ಗೆ.
9 ಮೀ x 9 ಮೀ = 123 ಗಿಡ ಹೆಕ್ಟೇರು ಗೆ.
10 ಮೀ x 10 ಮೀ = 100 ಗಿಡ ಹೆಕ್ಟೇರು ಗೆ.
12 ಮೀ x 12 ಮೀ = 70 ಗಿಡ ಹೆಕ್ಟೇರು ಗೆ.
ಮಾವು ಸಸಿ ಬೇಸಾಯ ಕ್ರಮ :
ಭೂಮಿಯನ್ನು ಉಳುಮೆ ಮಾಡಿ ಸಿದ್ದಪಡಿಸಿಕೊಂಡು. 90 x 90 x 90 ಸೆಂ.ಮೀ ಗಾತ್ರದ ಗುಣಿಗಳನ್ನು ತೆಗೆದು ಪ್ರತಿ ಗುಣಿಗಳಿಗೂ 25 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ.2 ಕಿ.ಗ್ರಾಂ ಬೇವಿನ ಹಿಂಡಿ.ಮತ್ತು ಸಮ ಪ್ರಮಾಣದ ಮೇಲ್ಮಣ್ಣನ್ನು ಮಿಶ್ರಣ ಮಾಡಿದ ನಂತರ ಆರೋಗ್ಯಯುತ ಒಂದು ವರ್ಷ ಪ್ರಾಯದ ಉತ್ತಮವಾಗಿ ಕಸಿ ಕಣ್ಣು ಬೆಸೆದು ಕೊಂಡಂತಹ ಸಸಿಗಳನ್ನು ಗುಣಿಯ ಮದ್ಯಬಾಗದಲ್ಲಿ ಕಸಿ ಮಾಡಿದ ಬಾಗ ಭೂಮಿಯ ಮೇಲೆ ಇರುವಂತೆ ನಾಟಿ ಮಾಡಬೇಕು.ನಂತರ ಆಸರೆಗೆ ಕೋಲುಗಳನ್ನು ಕೊಟ್ಟು ಗಿಡಗಳನ್ನು ಕಟ್ಟಬೇಕು.ನಂತರ ನೀರನ್ನು ಒದಗಿಸಬೇಕು.
ಮಾವು ನಾಟಿಯ ನಂತರದ ನಿರ್ವಹಣೆ :
ನಾಟಿಯ ನಂತರ ಅಂತರ ಬೇಸಾಯದ ಜೊತೆ ಮಾವಿನ ತೋಟದಲ್ಲಿ ಉಪಬೆಳೆಗಾದ ತರಕಾರಿ.ಶೆಂಗಾ.ಹಲಸಂದೆ.ಈ ರೀತಿಯ ಮಾವಿನ ಗಿಡಗಳಿಗಿಂತ ಎತ್ತರ ಬೆಳೆಯದಂತಹ ಉಪ ಬೆಳೆಗಳನ್ನು ಬೆಳೆಯುವದರ ಜೊತೆಗೆ ಲಾಭವನ್ನು ಹೊಂದಬಹುದು.ಇದರಿಂದ ಕಳೆ ನಿರ್ಮೂಲನೆಯ ಜೊತೆ ಮಣ್ಣಿನ ಫಲವತ್ತತೆಗೂ ಸಹಕಾರಿಯಾಗುತ್ತದೆ.ಬೇಸಿಗೆಯಲ್ಲಿ ಗಿಡಗಳ ಸುತ್ತ ವ್ರುತ್ತಾಕಾರದಲ್ಲಿ ಪಾತಿಗಳನ್ನು ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಮತ್ತು ಕ್ರುಷಿ ತ್ಯಾಜ್ಯ ಪದಾರ್ಥಗಳಿಂದ ಪಾತಿಯನ್ನು ಮುಚ್ಚಬೇಕು.ಕೊಟ್ಟಿಗೆ ಗೊಬ್ಬರ ಕೊಡುವದಕ್ಕು ಮೊದಲು ಅಥವ ತಿಂಗಳ ನಂತರ ಸಾರಜನಕ 75 ಕಿ.ಗ್ರಾಂ.ರಂಜಕ 20 ಕಿ.ಗ್ರಾಂ.70 ಕಿ.ಗ್ರಾಂ.ಮಿಶ್ರಣದ ಗೊಬ್ಬರವನ್ನು ಮೊದಲ ವರ್ಷದಲ್ಲಿ ಗಿಡಗಳ ಬುಡದಿಂದ ಒಂದು ಅಡಿ ದೂರದಲ್ಲಿ ನೀಡಬೇಕು.ಮೊದಲೆರಡು ವರ್ಷದಲ್ಲಿ ಬೇಸಿಗೆಯಲ್ಲಿ ಗಿಡಗಳಿಗೆ ನೀರನ್ನು ಅತ್ಯಾವಶ್ಯಕವಾಗಿ ಒದಗಿಸಬೇಕು.
ಮಾವು ಇಳುವರಿ ಸುಧಾರಣ ಸೂತ್ರಗಳು:
ಮಾವಿನ ರೆಂಬೆಗಳು ಒತ್ತೊತ್ತಾಗಿ ಬೆಳೆದಾಗ ಕೆಲವೊಂದು ರೆಂಬೆಗಳನ್ನು ಕತ್ತರಿಸುವದರಿಂದ ಗಿಡಗಳ ಒಳಬಾಗಕ್ಕೆ ಗಾಳಿ ಬೆಳಕು ಹೇರಳವಾಗಿ ದೊರೆತು ರೋಗಗಳ ಬಾದೆ ಕಮ್ಮಿಯಾಗಿರುತ್ತದೆ.ಜೊತೆಗೆ ಉತ್ತಮ ಗುಣಮಟ್ಟದ ಕಾಯಿಗಳು ದೊರೆಯುತ್ತವೆ.5 ರಿಂದ 6 ವರ್ಷವಾದಾಗ ಮದ್ಯದ ಒಂದೊಂದು ರೆಂಬೆಗಳನ್ನು ಕತ್ತರಿಸಿ ಗಾಳಿ ಬೆಳಕಿಗೆ ಅನುವು ಮಾಡಿಕೊಡಬೇಕು.ಕತ್ತರಿಸಿದ ರೆಂಬೆಗಳಿಗೆ ಶಿಲೀಂದ್ರನಾಶಕ ಮತ್ತು ಕೀಟನಾಶಕದ ಮುಲಾಮನ್ನು ಲೇಪಿಸುವದು ಅತ್ಯಾವಶ್ಯಕ.ಜೂನ್ ಮತ್ತು ಜುಲೈ ತಿಂಗಳು ಈ ಕೆಲಸಕ್ಕೆ ಸೂಕ್ತ ಕಾಲ.
ಕೆಲವು ಮಾವಿನ ತಳಿಗಳು ಎರಡು ವರ್ಷಕ್ಕೊಮ್ಮೆ ಹೆಚ್ಚು ಇಳುವರಿ ಕೊಟ್ಟು ಮದ್ಯ ವರ್ಷದಲ್ಲಿಜ ಇಳುವರಿ ಬಹಳ ಕಡಿಮೆ ಇರುತ್ತವೆ.ಇದು ಪ್ರಕ್ರುತಿದತ್ತ ನಿಯಮ ಇದನ್ನು ತಡೆಯಲು ಮಾವು ಹೂ ಬಿಡುವ ನೂರು ದಿನ ಮುಂಚೆ 5 ಮಿಲಿ 'ಪ್ಯಾಕ್ಲೋಬುಟ್ರಜಾಲ್ " ಸಂಯುಕ್ತ ವಸ್ತು ಹತ್ತು ಲೀಟರ್ ನೀರಿಗೆ ಬೆರೆಸಿ ಗಿಡಗಳ ಪಾತಿಯಲ್ಲಿ ಕಾಂಡದಿಂದ 90 ಸೆಂ.ಮೀ ದೂರದಲ್ಲಿ ಸುರಿಯುವದರಿಂದ ಪ್ರತಿ ವರ್ಷವೂ ಗಿಡಗಳು ಹೂ ಹಣ್ಣು ಬಿಡುವಂತೆ ಮಾಡಬಹುದು.ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ಅಲ್ಲಿ ಈ ಕ್ರಿಯೆ ಅನುಸರಿಸುವದು ಸೂಕ್ತ.
ಮಾವುನ ಬೆಳೆಗೆ ತಗುಲುವ ರೋಗಗಳು:
ಮಾವಿನ ಬೆಳೆಯಲ್ಲಿ ಸಾಮಾನ್ಯವಾಗಿ ಜಿಗಿಹುಳು.ಹಿಟ್ಟು ತಿಗಣೆ.ಎಲೆಗಂಟು.ರೆಂಬೆಕುಡಿ ಕೊರಕ.ಓಟೆಕೊರಕ.ಹಣ್ಣಿನ ನೊಣ.ಎಲೆ ತಿನ್ನುವ ಹುಳು.ಶಲ್ಕ ಕೀಟ.ಕಾಂಡಕೊರಕ.ನುಸಿ.ಕೆಂಪು ಇರುವೆ.ಬೂದಿರೋಗ.ಚಿಬ್ಬುರೋಗ.ದುಂಡಾಣು ಎಲೆಚುಕ್ಕೆ ರೋಗ.ಹೂ ಅಂಗಮಾರಿ.ವಿಕಾರತೆ.ಇಂತಹ ರೋಗಗಳು ಸಾಮಾನ್ಯ.ಕಾಲ ಕಾಲಕ್ಕೆ ತಗುಲುವ ರೋಗಲಕ್ಷಣಕ್ಕೆ ಅನುಸಾರವಾಗಿ ನುರಿತ ತಙ್ನರ ಸಲಹೆ ಮೇರೆಗೆ ರೋಗ ಹತೋಟಿ ಮಾಡುವದರಿಂದ ಉತ್ತಮ ಕಾಯಿ.ಹಣ್ಣು.ಇಳುವರಿಯನ್ನು ಹೊಂದಬಹುದು.
ಕೊಯ್ಲು ಮತ್ತು ಇಳುವರಿ:
ಕಸಿ ಗಿಡಗಳು ನಾಟಿ ಮಾಡಿದ ಎರಡನೇ ವರ್ಷದಿಂದ ಹೂ ಬಿಡಲು ಪ್ರಾರಂಬಿಸುತ್ತವೆ ಆದರೂ 4 ವರ್ಷದ ನಂತರ ನಿಯಮಿತ ಹಣ್ಣು ಬಿಡುವದನ್ನು ಪ್ರೋತ್ಸಾಹಿಸಬೇಕು.ಹತ್ತು ವರ್ಷದ ನಂತರ ಗರಿಷ್ಠ ಇಳುವರಿಯನ್ನು ಪಡೆಯಬಹುದು.
ಮೊದಲ ನೇ 5 ರಿಂದ 10 ವರ್ಷದಲ್ಲಿ ಪ್ರತಿ ಗಿಡಕ್ಕೆ 50 ರಿಂದ 400 ಕಾಯಿಯವರೆಗೂ ಪ್ರತಿ ಹೆಕ್ಟೇರು ಗೆ 10 ರಿಂದ 100 ಕ್ವಿಂಟಾಲ್ ವರೆಗೂ ಪಡೆಯಬಹುದು.
20 ವರ್ಷದ ನಂತರ ಪ್ರತಿ ಮರದಿಂದ 1500 ಕ್ಕೂ ಹೆಚ್ಚು ಕಾಯಿ ಅಂದರೆ ಪ್ರತಿ ಹೆಕ್ಟೇರ್ ಗೆ 300 ಕ್ವಿಂಟಾಲ್ ವರೆಗೂ ಇಳುವರಿ ಪಡೆಯಬಹುದು.
ವಿಷೇಶ ಸೂಚನೆ : ಸೂಚಿಸಿರುವ ಇಳುವರಿ ಪ್ರತಿ ಹೆಕ್ಟೇರ್ ಗೆ ನಾಟಿ ಮಾಡಿರುವ ಗಿಡಗಳ ಅಂತರದ ಮೇಲೆ ವ್ಯತ್ಯಾಸವಿರುತ್ತದೆ.