expr:class='"loading" + data:blog.mobileClass'>

ಬುಧವಾರ, ಜೂನ್ 16, 2021

ಕಲ್ಲಂಗಡಿ ಹಣ್ಣಿನ ಕ್ರುಷಿ.

ಕಲ್ಲಂಗಡಿಯನ್ನು ಕರ್ನಾಟಕದ ಬಹುತೇಕ ಎಲ್ಲಾ ಬಾಗದಲ್ಲಿ ಬೆಳೆಯಬಹುದು.ಕಾಯಿ ಹಣ್ಣಾಗುವ ಸಮಯದಲ್ಲಿ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.

ಕಲ್ಲಂಗಡಿ ಬಳ್ಳಿ ಜಾತಿಯ ಬೆಳೆಯಾದ್ದರಿಂದ ನೀರು ಬಸಿದು ಹೋಗುವ ಮರಳು ಮಣ್ಣು.ಮರಳು ಮಿಶ್ರಿತ ಗೋಡು ಮಣ್ಣು.ನದಿ ತೀರದ ಪ್ರದೇಶದ ಭೂಮಿ ಸೂಕ್ತ.ಹೆಚ್ಚು ಹುಳಿ ಮತ್ತು ಕ್ಷಾರೀಯ ಗುಣದ ಮಣ್ಣು ಈ ಬೆಳೆಗೆ ಸೂಕ್ತವಲ್ಲ.  

ಕಲ್ಲಂಗಡಿ ತಳಿಗಳು:ಅರ್ಕಾ ಮಾಣಿಕ್.ಶುಗರ್ ಬೇಬಿ.ಆರ್ಕಾ ಮುತ್ತು.ಇನ್ನು ಮುಂತಾದವು.
ಎಕ್ಕರೆಗೆ 450 ಗ್ರಾಂ ನಿಂದ 600 ಗ್ರಾಂ ಬೀಜ ಬಿತ್ತನೆಗೆ ಬೇಕಾಗುತ್ತದೆ.

ಕಲ್ಲಂಗಡಿ ಬಿತ್ತನೆ ಪದ್ದತಿ : 
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಪ್ರತಿ ಹೆಕ್ಟೇರ್  ಗೆ  25 ರಿಂದ 30 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.ನಂತರ 50 ಕಿ ಗ್ರಾಂ ಸಾರಜನಕ.80 ಕಿ ಗ್ರಾಂ ರಂಜಕ.ಹಾಗೂ 100 ಕಿ ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಸಾಲಿನಿಂದ ಸಾಲಿಗೆ  3 ಮೀ ಬೀಜದಿಂದ ಬೀಜಕ್ಕೆ 1 ಮೀ ಅಂತರದಲ್ಲಿ ಪ್ರತಿ ಗುಣಿಯಲ್ಲಿ ಎರಡು ಬೀಜಗಳನ್ನ ಊರಬೇಕು.ಬಿತ್ತನೆ ಮಾಡಿದ 3 ವಾರಗಳ ನಂತರ ಕಳೆ ನಿರ್ಮೂಲನೆ ಮಾಡಿ 50 ಕಿ ಗ್ರಾಂ ಸಾರಜನಕ.25 ಕಿ ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಬಳ್ಳಿಯಿಂದ 15 ಸೆಂ ಮೀ ದೂರದಲ್ಲಿ ನೀಡಬೇಕು.ನೀರಾವರಿಯಲ್ಲಿ ಸಾಲು ನೀರಾವರಿ.ಹನಿ ನೀರಾವರಿ ಉತ್ತಮ ಸ್ಪಿಂಕ್ಲರ್ ನೀರಾವರಿ ಈ ಬೆಳೆಗೆ ಸೂಕ್ತವಲ್ಲ.

ಬೀಜ ಹಾಕಿದ  20 ದಿನಗಳ ನಂತರ ಬಳ್ಳಿಯ ಕುಡಿ ಮುರಿಯುವದರಿಂದ ಹೆಚ್ಚು ಹರೆಗಳು ಒಡೆಯುತ್ತದೆ.11 ನೇ ಗಣ್ಣಿಗಿಂತ ಮೊದಲು ಬರುವ ಹೂವುಗಳನ್ನ ಚಿವುಟುವದರಿಂದ ಬಳ್ಳಿಯ ಬೆಳವಣಿಗೆ ಸದ್ರುಡವಾಗುವುದು.ಬಳ್ಳಿಯಲ್ಲಿ ಅವಶ್ಯಕತೆಗಿಂತ ಹೆಚ್ಚಿಗೆ ಕಾಯಿಗಳಿದ್ದರೆ  2 ಅಥವ 3 ಕಾಯಿ ಉಳಿಸಿ ಉಳಿದ ಕಾಯಿಗಳನ್ನ ತೆಗುಯುವದರಿಂದ ಕಾಯಿಯ ಗಾತ್ರ ಹೆಚ್ಚುವದು.ಸಸ್ಯ ಪ್ರಚೋದಕವಾಗಿ ಗಿಬ್ಬರ್ಲಿಕ್  ಆಮ್ಲವನ್ನು ಬಳಸುವದರಿಂದ ಒಳ್ಳೆಯ ಗುಣಮಟ್ಟದ ಕಾಯಿ ಲಬಿಸುವದು.
ಕಲ್ಲಂಗಡಿ ಬೆಳೆಗೆ ತಗುಲುವ ರೋಗಗಳು:
ದುಂಬಿ.ಹೇನು.ನುಸಿ.ನೊಣ.ಎಲೆ ಸುರಂಗ ಕೀಟ.ಬೂದಿರೋಗ.ಸುಳಿನಂಜು.ಚಿಬ್ಬುರೋಗ.ಸೊರಗು ರೋಗ ಸಾಮಾನ್ಯ ರೋಗಗಳು.
ಕಾಲ ಕಾಲಕ್ಕೆ ರೋಗಕ್ಕೆ ಅನುಗುಣವಾಗಿ ತಙ್ನರ ಸಲಹೆ ಮೇರೆಗೆ ಓಷದಿ ಸಿಂಪಡಣೆ ಮಾಡುವದರಿಂದ ರೋಗಗಳ ಹತೋಟಿ ಮಡಬಹುದು.
ಕೊಯ್ಲು ಮತ್ತು ಇಳುವರಿ:
ಬಳ್ಳಿ ನಾಟಿ ಮಾಡಿದ ದಿನದಿಂದ 70 ರಿಂದ 80 ನೇ ದಿನಕ್ಕೆ ಕಟಾವಿಗೆ ಬರುತ್ತದೆ.ಕಟಾವಿಗೆ ಬಂದ ಕಾಯಿಯ ತೊಟ್ಟು ಒಣಗುವದರ ಜೊತೆ ಕಾಯಿಯ ತಳ ಬಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ ಅಂತಹ ಕಾಯಿಗಳು ಕೊಯ್ಲು ಮಾಡಲು ಸೂಕ್ತ.ಪ್ರತಿ ಹೆಕ್ಟೆರ್ ಗೆ 50 ರಿಂದ 60 ಟನ್ ಇಳುವರಿ ಪಡೆಯಬಹುದು.

ಕಾಮೆಂಟ್‌ಗಳಿಲ್ಲ:

ಬಾಳೆ ಕ್ರುಷಿ

ಬಾಳೆ ಒಂದು ಬಹುಜನಪ್ರಿಯ ಹಣ್ಣಿನ ಬೆಳೆ ಮಾವಿನಹಣ್ಣಿನ ನಂತರದ ಸ್ಥಾನ ಬಾಳೆ ಹಣ್ಣಿಗೆ ಲಭಿಸುತ್ತದೆ.ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳಿದ್ದು ಅವು ವಿವಿಧ ಭಾಗದಲ್ಲಿ ಬೆಳೆ...